ಅಪನಗದೀಕರಣ ಎಂಬುದು ಮೋದಿಯ ವಿವೇಚನಾರಹಿತ ನಡೆ: ರಾಹುಲ್
Recommended Video

Note Ban Anniversary : ನರೇಂದ್ರ ಮೋದಿಯವರ ನೋಟ್ ಬ್ಯಾನ್ ಐಡಿಯಾ ವಿವೇಚನಾರಹಿತ ಅಂದ್ರು ರಾಹುಲ್ ಗಾಂಧಿ
ನವದೆಹಲಿ, ನವೆಂಬರ್ 08: "ಅಪನಗದೀಕರಣ ಎಂಬುದು ಮೋದಿಯವರ ವಿವೇಚನಾರಹಿತ ನಡೆ" ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಅಪನಗದೀಕರಣದ ಮೊದಲ ವಾರ್ಷಿಕೋತ್ಸವಕ್ಕೆ ಸಂಬಂಧಿಸಿದಂತೆ ಅವರು ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಆಹ್ವಾನಿಸಿದ ಅಪನಗದೀಕರಣ ಎಂಬ ದುರಂತದಿಂದ ನೋವನುಭವಿಸಿದ ಎಲ್ಲ ಭಾರತೀಯರೊಂದಿಗೆ ನಮ್ಮ ಪಕ್ಷವಿದೆ ಎಂದು ಇದೇ ಸಂದರ್ಭದಲ್ಲಿ ಜನರಿಗೆ ಅಭಯ ನೀಡಿದ್ದಾರೆ.

Demonetisation is a tragedy. We stand with millions of honest Indians, whose lives & livelihoods were destroyed by PM’s thoughtless act.
— Office of RG (@OfficeOfRG) November 8, 2017
ನರೇಂದ್ರ ಮೋದಿಯವರು ವಿವೇಚನೆಯಿಲ್ಲದೆ ತೆಗೆದುಕೊಂಡ ನಿರ್ಧಾರದಿಂದ ಇಡೀ ದೇಶದ ಜನರು ನೋವನ್ನುಂಡಿದ್ದಾರೆ. ಆ ಎಲ್ಲ ಜನರ ಜೊತೆಗೆ ನಾವಿದ್ದೇವೆ ಎಂದು ಸಹ ಅವರು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ಅಪನಗದೀಕರಣ ಘೋಷಣೆಯಾದ ನ.8 ರ ದಿನವನ್ನು ಕರಾಳ ದಿನವೆಂದು ಆಚರಿಸಲು ಸಜ್ಜಾಗಿವೆ.












Click it and Unblock the Notifications