ದೆಹಲಿ ಹಿಂಸಾಚಾರ: ಬಲಿಯಾದವರ ಸಂಖ್ಯೆ 47ಕ್ಕೆ ಏರಿಕೆ
ನವದೆಹಲಿ, ಮಾರ್ಚ್ 2: ದೆಹಲಿ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಇದೀಗ 47 ಬಲಿಗಳನ್ನು ಪಡೆದಿದೆ. ಅದರಲ್ಲಿ 38 ಪ್ರಕರಣಗಳು ತೇಜ್ ಬಹದ್ದೂರ್ ಆಸ್ಪತ್ರೆಯಲ್ಲಿ ಹಾಗೂ 3 ಮಂದಿ ನಾಯಕ್ ಆಸ್ಪತ್ರೆ, ಓರ್ವ ಜಗ್ ಪರ್ವೇಶ್ ಆಸ್ಪತ್ರೆ ಹಾಗೂ ಐವರು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ದೆಹಲಿ ಹಿಂಸಾಚಾರ: 3 ಶವ ಪತ್ತೆ, ಸಾವಿನ ಸಂಖ್ಯೆ 45ಕ್ಕೆ ಏರಿಕೆ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೃತ ಗುಪ್ತಚರ ಇಲಾಖೆ ಅಧಿಕಾರಿ ಅಂಕಿತ್ ಶರ್ಮಾ ಅವರ ಕುಟುಂಬಕ್ಕೆ 1 ಕೋಟಿ ರೂ ನೀಡುವುದಾಗಿ ಘೋಷಿಸಿದ್ದಾರೆ.
ಹಿಂಸಾಚಾರಕ್ಕೆ ತುತ್ತಾದ ಈಶಾನ್ಯ ದೆಹಲಿಯ ಗೋಕುಲ್ಪರಿ ಮತ್ತು ಶಿವವಿಹಾರ್ನ ಚರಂಡಿಯಲ್ಲಿ ನಾಲ್ಕು ಮೃತದೇಹಗಳು ಭಾನುವಾರ ಸಿಕ್ಕಿವೆ.ಮೂರು ದೇಹಗಳು ಗೂಕುಲ್ಪುರಿಯ ಎರಡು ಚರಂಡಿಯಲ್ಲಿ ಸಿಕ್ಕಿದರೆ ಮತ್ತೊಂದು ದೇಹವು ಶಿವವಿಹಾರ್ ಚರಂಡಿಯಲ್ಲಿ ಸಿಕ್ಕಿವೆ.
ಈ ನಾಲ್ವರು ಗಲಭೆಯಲ್ಲಿ ಮೃತಪಟ್ಟವರೇ ಎಂಬುದನ್ನು ಅಧಿಕಾರಿಗಳು ದೃಢಪಡಿಸಿಲ್ಲ. ಹಾಗಾಗಿ, ಗಲಭೆಗೆ ಬಲಿಯಾದವರ ಸಂಖ್ಯೆಯ ಇವರನ್ನು ಸೇರಿಸಲಾಗಿಲ್ಲ. ಗಲಭೆಯಲ್ಲಿ ಮೃತರಾದವರ ಸಂಖ್ಯೆ ಶನಿವಾರ 42ಕ್ಕೆ ಏರಿತ್ತು.