ರಿಕ್ಷಾ ಖರೀದಿಸಲು ಮಗಳನ್ನೇ ಮಾರಿದ ಇವನೆಂಥ ಅಪ್ಪ!
ನವದೆಹಲಿ, ಮಾರ್ಚ್, 29: ಹಣಕ್ಕಾಗಿ ಮಕ್ಕಳನ್ನು ಮಾರಿಕೊಳ್ಳುವವರು ದೇಶದಲ್ಲಿ ಇದ್ದಾರೆ. ಅದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ. ಬಾಲಕಿಯನ್ನು ಹಣಕ್ಕೋಸ್ಕರ ಮದುವೆ ಮಾಡಿಕೊಟ್ಟ ಅಪ್ಪ ಮತ್ತು ಮದುವೆಯಾದ ಗಂಡ ಇಬ್ಬರು ಸದ್ಯ ಪೊಲೀಸರ ವಶದಲ್ಲಿದ್ದಾರೆ.
ದೇಶದಲ್ಲಿ ಬಾಲ್ಯವಿವಾಹ ತೆಡೆಗೆ ಹೋರಾಟ ನಡೆಯಲು ಆರಂಭವಾಗಿ ಅದೆಷ್ಟೋ ದಶಕಗಳೆ ಉರುಳಿದ್ದರೂ ಅನಿಷ್ಟ ಪದ್ಧತಿ ಮರೆಯಾಗಿಲ್ಲ. ರಾಷ್ಟ್ರ ರಾಜಧಾನಿಯಲ್ಲೇ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.[ಮೋದಿ ರಾಜ್ಯದಲ್ಲಿ ಮತ್ತೆ ಹುಟ್ಟಿಕೊಂಡ 'ಲವ್ ಜಿಹಾದ್']

15 ವರ್ಷದ ಬಾಲಕಿಯನ್ನು 35 ವರ್ಷದವವನೊಂದಿಗೆ ಬಲವಂತವಾಗಿ ಮದುವೆ ಮಾಡಿಸಲಾಗಿದೆ. ಮದುವೆಯಾದ ಪುಣ್ಯಾತ್ಮನಿಗೆ ಎರಡು ಮಕ್ಕಳು ಸಹ ಇವೆ. ಹಣದ ಆಸೆಗೆ ಬಿದ್ದ ಹುಡುಗಿಯ ಅಪ್ಪ ಮಗಳನ್ನು 60 ಸಾವಿರ ರು. ಗೆ ಮದುವೆ ಮಾಡಿ ಕೊಟ್ಟಿದ್ದಾನೆ.
ವಾಯುವ್ಯ ದೆಹಲಿಯ ಭಲ್ಸ್ವಾ ಡೈರಿಯ ರಿಕ್ಷಾ ಚಾಲಕ ಒಬ್ಬ ತನ್ನ ಮಗಳನ್ನು ಹಣಕ್ಕೆ ಮಾರಿಕೊಂಡಿದ್ದಾನೆ. ಘಟನೆ ನಡೆದ ಮೇಲೆ ಬಾಲಕಿ ತನ್ನ ಅಪ್ಪನ ವಿರುದ್ಧವೇ ದೂರು ದಾಖಲಿಸಿದ್ದಾಳೆ. ನದುವೆಯಾಗಲು ತಿರಸ್ಕಾರ ಮಾಡಿದ್ದಕ್ಕೆ ಗಂಡನ ಮನೆಯವರು ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾಳೆ.[2 ಹೆಂಡತಿ ಅಥವಾ ಜೈಲು, ನಿಮ್ಮ ಆಯ್ಕೆ ಯಾವುದು?]
ರಿಕ್ಷಾ ಚಾಲಕ ತಂದೆ ಮತ್ತೊಂದು ರಿಕ್ಷಾ ಖರೀದಿ ಮಾಡಲು ಇಂಥ ಹೀನ ಕೆಲಸ ಮಾಡಿದ್ದಾನೆ. ಫೆಬ್ರವರಿಯಲ್ಲೇ ಈ ಬಗ್ಗೆ ದೂರು ದಾಖಲಾಗಿತ್ತು. ಹುಡುಗಿಯ ದೂರು ಆಧರಿಸಿ ಪೊಲೀಸರು ಆಕೆಯ ತಂದೆ ಮತ್ತು ಗಂಡನನ್ನು ಬಂಧಿಸಿದ್ದಾರೆ. ಮದುವೆಯಾದ ಮೇಲೆ ಬಾಲಕಿ ತನ್ನ ತಂದೆಯ ಮನೆಗೆ ಓಡಿ ಬಂದಿದ್ದಳು. ಅವಳನ್ನು ಮತ್ತೆ ವಾಪಸ್ ಕಳಿಸಲು ತಂದೆ 20 ಸಾವಿರ ಹಣ ಹೆ್ಚುವರಿ ಪಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಿರುಕುಳ ಸಹಿಸದ ಬಾಲಕಿ ತನ್ನ ಹಿರಿಯ ಅಕ್ಕನ ಮನೆಗೆ ತೆರಳಿದ ನಂತರ ಪೊಲೀಸರ ರಕ್ಷಣೆ ಕೋರಿದ್ದಾಳೆ. ಆದರೆ ಬಾಲಕಿ ಅಕ್ಕ ಈ ಮದುವೆ ಬಗ್ಗೆ ತನಗೇನು ಗೊತ್ತಿಲ್ಲ ಎಂದು ಹೇಳಿದ್ದಾಳೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications