ಚುನಾವಣೆಗೂ ಮುನ್ನ ಎಎಪಿಗೆ ಅರ್ಧಶತಕ ಸಂಭ್ರಮ!
ನವದೆಹಲಿ, ಫೆ.4: ಆಮ್ ಆದ್ಮಿ ಪಕ್ಷ ತಾನು ಹಾಕಿರುವ ಲೆಕ್ಕಾಚಾರ, ಗುಪ್ತ ಮಾಹಿತಿ ಸಂಗ್ರಹ, ಆಂತರಿಕ ಚುನಾವಣಾ ಸಮೀಕ್ಷೆ ವರದಿ ಬಹಿರಂಗ ಪಡಿಸಿ ಎಲ್ಲರ ಹುಬ್ಬೇರಿಸಿದೆ. ಚುನಾವಣೆಗೆ ಮೂರು ದಿನ ಇರುವಾಗ ಎಎಪಿ ತನ್ನ ಸಮೀಕ್ಷೆಯಲ್ಲಿ ಹಾಫ್ ಸೆಂಚುರಿ ಬಾರಿಸಿದೆ. ಈ ಮೂಲಕ ತನ್ನ ಬೆನ್ನು ತಾನೇ ಚಪ್ಪರಿಸಿಕೊಂಡಿದೆ.
70 ಜನ ಸದಸ್ಯರನ್ನು ಹೊಂದಬಹುದಾದ ಅಸೆಂಬ್ಲಿಗೆ ಈ ಬಾರಿ 51 ಜನ ಆಮ್ ಆದ್ಮಿ ಪಕ್ಷದವರೇ ಶಾಸಕರಾಗಿರುತ್ತಾರೆ ಎಂದು ಎಎಪಿಯ ಆಂತರಿಕ ಸಮೀಕ್ಷೆ ಹೇಳುತ್ತಿದೆ. ತನ್ನ ಪ್ರಮುಖ ಎದುರಾಳಿ ಬಿಜೆಪಿಗೆ 15 ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷಕ್ಕೆ 4 ಸ್ಥಾನ ಸಿಗಲಿದೆಯಂತೆ.ಫೆ.5 ಚುನಾವಣಾ ಪ್ರಚಾರಕ್ಕೆ ಕೊನೆ ದಿನವಾಗಿದ್ದು, ಫೆ.7ರಂದು ಮತದಾನ ನಡೆಯಲಿದೆ. [ನಾಲ್ಕು ಸಮೀಕ್ಷೆಗಳಲ್ಲೂ ಎಎಪಿ ಮುಂದೆ]

ಎಎಪಿ ನಡೆಸಿದ ಆಂತರಿಕ ಚುನಾವಣಾ ಸಮೀಕ್ಷೆಯ ಫಲಿತಾಂಶದ ಬಗ್ಗೆ ಎಎಪಿ ಮುಖಂಡ ಯೋಗೇಂದ್ರ ಯಾದವ್ ಅವರು ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು. [ಗುಪ್ತಚರ ಇಲಾಖೆ ಸ್ಫೋಟಕ ವರದಿ]
ದೆಹಲಿಯ ಮುಂದಿನ ಮುಖ್ಯಮಂತ್ರಿಯಾಗಿ ಯಾರನ್ನು ಕಾಣಲು ಬಯಸುತ್ತೀರಿ? ಎಂಬ ಪ್ರಶ್ನೆಗೆ ಶೇ 53ರಷ್ಟು ಮತದಾರರು ಅರವಿಂದ್ ಕೇಜ್ರಿವಾಲ್ ಅವರ ಹೆಸರನ್ನು ಹೇಳಿದ್ದಾರೆ. ಶೇ 24ರಷ್ಟು ಮಂದಿ ಬಿಜೆಪಿಯ ಸಿಎಂ ಅಭ್ಯರ್ಥಿ ಕಿರಣ್ ಬೇಡಿ ಅವರನ್ನು ಹೆಸರಿಸಿದ್ದಾರೆ.
ಶೇಕಡಾವಾರು ಮತ ಹಂಚಿಕೆ ಪಾಲಿನಲ್ಲೂ ಆಮ್ ಆದ್ಮಿ ಪಕ್ಷ ಮುಂದಿದ್ದು, ಶೇ 46ರಷ್ಟು ಮತಗಳಿಸಲಿದೆಯಂತೆ. ಬಿಜೆಪಿಗೆ ಶೇ 33 ಹಾಗೂ ಕಾಂಗ್ರೆಸ್ಸಿಗೆ ಶೇ 11ರಷ್ಟು ಮತ ಸಿಗಲಿದೆ. ಮಿಕ್ಕ ಮತಗಳು ಇತರೆ ಪಕ್ಷಗಳಿಗೆ ಸಲ್ಲಲಿದೆ. [ದೆಹಲಿ ಚುನಾವಣೆ 2015: ಅಂಕಿ ಅಂಶ ಪಕ್ಷಿನೋಟ]
ಮಂಗಳವಾರ ಪ್ರಕಟವಾದ ಸಮೀಕ್ಷೆಗಳಲ್ಲಿ ಬಿಜೆಪಿಯನ್ನು ಹಿಂದಿಕ್ಕಿ ಎಎಪಿ ಪಕ್ಷ ಮುನ್ನಡೆ ಸಾಧಿಸಿತ್ತು. ಇಂಡಿಯಾ ಟುಡೇ -ಸಿಸೆರೋ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಎಎಪಿಗೆ 38-46 ಸೀಟು, ಬಿಜೆಪಿಗೆ 19-25 ಸೀಟು, ಕಾಂಗ್ರೆಸ್ಸಿಗೆ 3-7 ಸೀಟು ಸಿಗುವ ಸಾಧ್ಯತೆಯಿದೆ ಎನ್ನಲಾಗಿತ್ತು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications