ದೆಹಲಿ ಹೈಕೋರ್ಟಿಗೆ ಪ್ರಪ್ರಥಮ ಮಹಿಳಾ ಸಿಜೆ
ನವದೆಹಲಿ, ಏ.21: ದೆಹಲಿ ಹೈಕೋರ್ಟಿನಲ್ಲಿ ಸೋಮವಾರ ಹೊಸ ಇತಿಹಾಸ ಸೃಷ್ಟಿಯಾಗಿದೆ. ಹೈದರಾಬಾದ್ ಮೂಲದ ಜಸ್ಟೀಸ್ ಜಿ. ರೋಹಿಣಿ ಅವರು ದೆಹಲಿ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸ್ಥಾನವನ್ನು ಅಲಂಕರಿಸಿದ್ದಾರೆ.
ಲೆ. ಗವರ್ನರ್ ನಜೀಬ್ ಜಂಗ್ ಅವರು ಮುಖ್ಯ ನ್ಯಾಯಮೂರ್ತಿ ರೋಹಿಣಿ ಅವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ದೆಹಲಿ ಹೈಕೋರ್ಟಿನ 40 ಜಡ್ಜ್ ಗಳ ಪೈಕಿ 10ನೇ ಮಹಿಳಾ ಜಡ್ಜ್ ಆಗಿರುವ ರೋಹಿಣಿ ಅವರು ಮುಂದಿನ ನಾಲ್ಕು ವರ್ಷಗಳ ಕಾಲ ಮುಖ್ಯ ನ್ಯಾಯಮೂರ್ತಿ ಕಾರ್ಯನಿರ್ವಹಿಸಲಿದ್ದಾರೆ.
1955ರಲ್ಲಿ ಜನಿಸಿದ ರೋಹಿಣಿ ಅವರು ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಹಾಗೂ ವಿಶಾಖಪಟ್ಟಣಂನ ಆಂಧ್ರ ವಿವಿಯ ಕಾಲೇಜ್ ಆಫ್ ಲಾ ನಲ್ಲಿ ವ್ಯಾಸಂಗ ಮಾಡಿದ್ದಾರೆ. 1980ರಲ್ಲಿ ಅಡ್ವೋಕೇಟ್ ಆಗಿ ವೃತ್ತಿ ಆರಂಭಿಸಿದ ರೋಹಿಣಿ ಅವರು ಆಂಧ್ರಪ್ರದೇಶ ರಾಜ್ಯ ಬಾರ್ ಕೌನ್ಸಿಲ್ ಚೇರ್ಮನ್ ಆಗಿದ್ದರು. 1995ರಲ್ಲಿ ರಾಜ್ಯ ಸರ್ಕಾರದ ಪರ ವಕೀಲರಾಗಿ ಹೈಕೋರ್ಟ್ ನಲ್ಲಿ ಕಾರ್ಯ ನಿರ್ವಹಿಸಿದ್ದರು. 2001ರಲ್ಲಿ ಹೆಚ್ಚುವರಿ ನ್ಯಾಯಾಧೀಶೆಯಾಗಿ 2002ರಲ್ಲಿ ಶಾಶ್ವತ ಜಡ್ಜ್ ಆಗಿ ಬಡ್ತಿ ಹೊಂದಿದ್ದಾರೆ.
ದೆಹಲಿಯಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ವಿ. ರಮಣ ಅವರು ಸುಪ್ರೀಂಕೋರ್ಟಿಗೆ ಬಡ್ತಿ ಪಡೆದಿದ್ದಾರೆ. ಜಸ್ಟೀಸ್ ಬಾದರ್ ಡರೇಜ್ ಅಹ್ಮದ್ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ದೇಶದ ಮೊದಲ ಮಹಿಲಾ ಸಿಜೆ ಯಾರು?: ದೆಹಲಿ ಸಿಟ್ಟಿಂಗ್ ಜಡ್ಜ್ ಆಗಿದ್ದ ಜಸ್ಟೀಸ್ ಲೈಲಾ ಸೇಠ್ ಅವರು ಹಿಮಾಚಲ ಪ್ರದೇಶದ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೇರಿದ್ದರು. ದೆಹಲಿ ಹೈಕೋರ್ಟಿನ ಪ್ರಪ್ರಥಮ ಸಿಜೆಯಾಗಿರುವ ರೋಹಿಣಿ ಅವರ ಪದಗ್ರಹಣ ಸಮಾರಂಭದಲ್ಲಿ ಅವರ ಕುಟುಂಬ ವರ್ಗ ಕೂಡಾ ಪಾಲ್ಗೊಂಡಿತ್ತು. ಈ ಸಮಾರಂಭದ ಒಂದಷ್ಟು ಚಿತ್ರಗಳು ನಿಮ್ಮ ಮುಂದಿದೆ ನೋಡಿ..

ದೆಹಲಿ ಹೈಕೋರ್ಟ್ ಇತಿಹಾಸ ಹೀಗಿದೆ
ಸ್ವಾತಂತ್ರ ಪೂರ್ವದಲ್ಲಿ ಹೈಕೋರ್ಟ್ ನ್ಯಾಯಪೀಠ ಲಾಹೋರ್ ನಲ್ಲಿ ನೆಲೆಸಿತ್ತು. 1919ರಿಂದ ಲಾಹೋರ್ ಹೈಕೋರ್ಟ್ ಕಾರ್ಯ ನಿರ್ವಹಿಸುತ್ತಿತ್ತು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ ಸಿಕ್ಕ ನಂತರ ದೆಹಲಿಗೆ ಪ್ರತ್ಯೇಕ ಹೈಕೋರ್ಟ್ ಬೇಡಿಕೆ ಬಂದಿತ್ತು. ಆದರೆ, 1966ರ ತನಕ ಪೂರ್ವ ಪಂಜಾಬ್ ನ್ಯಾಯಲಯವಾಗೇ ಮುಂದುವರೆಯಿತು. 1966ರ ಅಕ್ಟೋಬರ್ 31ರಂದು ನಾಲ್ವರು ಜಸ್ಟೀಸ್ ಗಳಾದ ಕೆ.ಎಸ್ ಹೆಗ್ಡೆ, ಐಡಿ ದುವಾ, ಎಚ್ ಆರ್ ಖನ್ನ ಹಾಗೂ ಎಸ್ ಕೆ ಕಾಪೂರ್ ಅವರ ನೇತೃತ್ವದಲ್ಲಿ ಹೈಕೋರ್ಟ್ ಕಾರ್ಯ ನಿರ್ವಹಿಸಲು ಆರಂಭಿಸಿತು. ಈ ಪೈಕಿ ಕೆ.ಎಸ್ ಹೆಗ್ಡೆ ಅವರು ಕರ್ನಾಟಕದ ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರ ತಂದೆಯವರಾಗಿದ್ದಾರೆ.

ಅಮ್ಮನ ಪ್ರೀತಿಯ ಅಪ್ಪುಗೆಯಲ್ಲಿ ರೋಹಿಣಿ
ಅಮ್ಮನ ಪ್ರೀತಿಯ ಅಪ್ಪುಗೆ ಆನಂದವನ್ನು ದೆಹಲಿ ಸಿಜೆ ಜಿ.ರೋಹಿಣಿ ಅನುಭವಿಸಿದರು.

ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸ್ಥಾನ
ದೆಹಲಿ ಹೈಕೋರ್ಟಿನಲ್ಲಿ ಸೋಮವಾರ ಹೊಸ ಇತಿಹಾಸ ಸೃಷ್ಟಿಯಾಗಿದೆ. ಹೈದರಾಬಾದ್ ಮೂಲದ ಜಸ್ಟೀಸ್ ಜಿ. ರೋಹಿಣಿ ಅವರು ದೆಹಲಿ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ತಾಯಿ ಅವರು ಉಪಸ್ಥಿತರಿದ್ದರು.PTI Photo by Subhav Shukla

ರೋಹಿಣಿ ಅವರಿಗೆ ಪ್ರಮಾಣ ವಚನ
ಲೆ. ಗವರ್ನರ್ ನಜೀಬ್ ಜಂಗ್ ಅವರು ಮುಖ್ಯ ನ್ಯಾಯಮೂರ್ತಿ ರೋಹಿಣಿ ಅವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ದೆಹಲಿಯಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ವಿ. ರಮಣ ಅವರು ಸುಪ್ರೀಂಕೋರ್ಟಿಗೆ ಬಡ್ತಿ ಪಡೆದಿದ್ದಾರೆ. ಜಸ್ಟೀಸ್ ಬಾದರ್ ಡರೇಜ್ ಅಹ್ಮದ್ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ರಮಣ ಅವರು ಕೂಡಾ ಆಂಧ್ರಪ್ರದೇಶ ಮೂಲದವರಾಗಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications