ಸರ್ಕಾರವು ಕೊರೊನಾದಿಂದ ಮೃತಪಟ್ಟವರ ಅಸಲಿ ಲೆಕ್ಕ ಬಹಿರಂಗಪಡಿಸಲಿ: ರಾಹುಲ್

ನವದೆಹಲಿ, ಡಿಸೆಂಬರ್ 04: ಸರ್ಕಾರವು ಕೊರೊನಾದಿಂದ ಮೃತಪಟ್ಟವರ ಅಸಲಿ ಲೆಕ್ಕ ಬಹಿರಂಗಪಡಿಸಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಜನತೆಯ ಸಂಕಷ್ಟಕ್ಕೆ ಸ್ಪಂದಿಸದೆ ಕೇಂದ್ರ ಸರ್ಕಾರ ನಿದ್ರಿಸುತ್ತಿದೆ, #SpeakUpForCovidNyay ಎಂಬ ಹ್ಯಾಶ್‌ಟ್ಯಾಗ್ ಬಳಸಿ ಶನಿವಾರ ಟ್ವೀಟ್ ಮಾಡಿರುವ ಅವರು ಜನರು ನೋವು ಮತ್ತು ಸಂಕಷ್ಟದಲ್ಲಿರುವಾಗ ಭಾರತ ಸರ್ಕಾರವು ನಿದ್ರಿಸುತ್ತಿದೆ, ಬನ್ನಿ ಅವರನ್ನು ಎಬ್ಬಿಸೋಣ ಎಂದು ಹೇಳಿದ್ದಾರೆ.

#SpeakUpForCovidNyay ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಕಾಂಗ್ರೆಸ್ ಟ್ವಿಟ್ಟರ್ ಅಭಿಯಾನವನ್ನು ಆರಂಭಿಸಿದೆ. ಇದರ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಘಟಕವು, ದೇಶಕ್ಕೆ ಕೊರೊನಾ ಸೋಂಕು ವಕ್ಕರಿಸಿದ ಮೊದಲ ದಿನದಿಂದಲೂ ಜನರನ್ನು ಪ್ರತಿ ಹಂತದಲ್ಲೂ ಜೀವ ಹಿಂಡುತ್ತಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಬೆಡ್ ವೆಂಟಿಲೇಟರ್,ಆಮ್ಲಜನಕ, ಕೊನೆಗೆ ಸ್ಮಶಾನದಲ್ಲಿಯೂ ಜನರನ್ನು ಸಾಲಿನಲ್ಲಿ ನಿಲ್ಲಿಸಿದರು, ಸರ್ಕಾರದ ಬೇಜವಾಬ್ದಾರಿಯಿಂದಾಗಿ ಪ್ರಾಣಬಿಟ್ಟವರ ಕುಟುಂಬಗಳಿಗೆ 4 ಲಕ್ಷ ಪರಿಹಾರ ನೀಡಲೇಬೇಕು ಎಂದು ಒತ್ತಾಯಿಸಿದೆ.

Congress Wants Centre To Release True COVID-19 Toll

ನಿನ್ನೆಯಷ್ಟೇ ರೈತರ ಸಾವಿನ ಲೆಕ್ಕಾಚಾರದ ಬಗ್ಗೆ ಮಾತನಾಡಿದ್ದರು. ಒಂದು ವರ್ಷದ ರೈತರ ಪ್ರತಿಭಟನೆಯಲ್ಲಿ ಸುಮಾರು 700 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ ರಾಹುಲ್, "ನಾವು ಸ್ವಲ್ಪ ಹೋಂವರ್ಕ್ ಮಾಡಿದ್ದೇವೆ. ಪಂಜಾಬ್ ಸರ್ಕಾರ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಿದ 403 ಜನರ ಹೆಸರು ನಮ್ಮ ಬಳಿ ಇದೆ.

152 ಮಂದಿಗೆ ಉದ್ಯೋಗವನ್ನೂ ಒದಗಿಸಿದೆ. ನಮ್ಮಲ್ಲಿ ಮತ್ತೊಂದು ಪಟ್ಟಿ ಇದೆ. ಅಲ್ಲಿ ನಾವು ಇತರ ರಾಜ್ಯಗಳ 100 ಜನರ ಹೆಸರನ್ನು ಹೊಂದಿದ್ದೇವೆ. ನಂತರ ಮೂರನೇ ಪಟ್ಟಿಯು ಹೆಸರುಗಳು, ವಿಳಾಸಗಳು ಮತ್ತು ಫೋನ್ ಸಂಖ್ಯೆಗಳ ಸಾರ್ವಜನಿಕ ಮಾಹಿತಿಯನ್ನು ಆಧರಿಸಿದೆ. ಸರ್ಕಾರವು ಬಯಸಿದರೆ ಅದನ್ನು ಸುಲಭವಾಗಿ ಪರಿಶೀಲಿಸಬಹುದು.

ಪಟ್ಟಿಗಳು ಅಸ್ತಿತ್ವದಲ್ಲಿವೆ ಆದರೆ ಸರ್ಕಾರವು ಅವರು ಇಲ್ಲ ಎಂದು ಒತ್ತಾಯಿಸುತ್ತದೆ. ಉದ್ದೇಶವೇನು? ಆಂದೋಲನದಲ್ಲಿ ಈ ಜನರು ಸಾವನ್ನಪ್ಪಿದ್ದಾರೆ. ನಾವು ಕೋಟ್ಯಂತರ ಡಾಲರ್, ಸಾವಿರಾರು ಕೋಟಿ ರೂಪಾಯಿಗಳ ಬಗ್ಗೆ ಮಾತನಾಡುತ್ತಿಲ್ಲ. ಅವರು ಮಾಡಿದ ತ್ಯಾಗಕ್ಕೆ ಕನಿಷ್ಠ ಪರಿಹಾರದ ಬಗ್ಗೆ ಮಾತನಾಡುತ್ತಿದ್ದೇವೆ. ಸ್ವತಃ ಪ್ರಧಾನಿಯೇ ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅವರು ರಾಷ್ಟ್ರದ ಕ್ಷಮೆಯಾಚಿಸಿದ್ದಾರೆ.

ಪ್ಪಿನ ಪರಿಣಾಮವಾಗಿ, 700 ಜನರು ಸಾವನ್ನಪ್ಪಿದ್ದಾರೆ. ಈಗ ನೀವು ಅವರ ಹೆಸರುಗಳ ಬಗ್ಗೆ ಸುಳ್ಳು ಹೇಳುತ್ತಿದ್ದೀರಿ. ಅವರಿಗೆ ಕೊಡಬೇಕಾದ್ದನ್ನು ಕೊಡುವ ಮರ್ಯಾದೆ ನಿಮಗೇಕೆ ಇಲ್ಲ? ಭಾರತ ಸರ್ಕಾರ ಪರಿಹಾರ ನೀಡಬೇಕು ಮತ್ತು ಈ ಕುಟುಂಬಗಳಿಗೆ ಸಹಾಯ ಮಾಡಬೇಕು ಎಂದ ರಾಹುಲ್, ಪ್ರಧಾನಿ ಮತ್ತು ಸರ್ಕಾರದ ಸ್ನೇಹಿತರಾಗಿರುವ ಎರಡು-ಮೂರು ದೊಡ್ಡ ಕೈಗಾರಿಕೋದ್ಯಮಿಗಳಿಗಾಗಿ ಸರ್ಕಾರ ಏನು ಬೇಕಾದರೂ ಮಾಡುತ್ತದೆ ಎಂದು ಆರೋಪಿಸಿದ್ದಾರೆ. ಆದರೆ ರೈತರ ವಿಷಯಕ್ಕೆ ಬಂದರೆ, ಅವರು ಈ 700 ಜನರು ಅಸ್ತಿತ್ವದಲ್ಲಿಲ್ಲ ಎಂದು ನಿರಾಕರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

ಕನಿಷ್ಠ ಪರಿಹಾರವು ನೀವು ನೀಡಬಹುದಾದ ಕನಿಷ್ಠ ಗೌರವವಾಗಿದೆ. ಅವರು ಕ್ಷಮೆ ಕೇಳಿದ್ದು ಯಾಕೆ? ಏಕೆಂದರೆ ಅವರು ತಪ್ಪು ಕಾನೂನನ್ನು ಜಾರಿಗೆ ತರಲು ಪ್ರಯತ್ನಿಸಿದರು ಮತ್ತು ಅದರಿಂದ ಈ ಜನರು ಸತ್ತಿದ್ದಾರೆ.

ಒಂದೆಡೆ ಕ್ಷಮೆ ಕೇಳುತ್ತಿದ್ದರೆ ಮತ್ತೊಂದೆಡೆ ಸರ್ಕಾರ ಈ ಜನರ ಅಸ್ತಿತ್ವವನ್ನೇ ನಿರಾಕರಿಸುತ್ತಿದೆ. ನಮ್ಮ ಬಳಿ ಪಟ್ಟಿ ಇದೆ. ಪ್ರಧಾನಮಂತ್ರಿ ಅವರು ಬಯಸಿದರೆ, ನೇರವಾಗಿ ಅವರನ್ನು ಕರೆದು ಪರಿಶೀಲಿಸಬಹುದು. ಅವರಿಗೆ ಅದು ಗೊತ್ತಾಗುತ್ತದೆ.

ಈ ಜನರ ಸಾವಿಗೆ ಪಂಜಾಬ್ ಸರ್ಕಾರ ಹೊಣೆಯಲ್ಲ. "ಇದು ನಮ್ಮ ಜವಾಬ್ದಾರಿಯಾಗಿರಲಿಲ್ಲ. ಆದಾಗ್ಯೂ, ನಾವು ಪರಿಹಾರ ನೀಡಿದ್ದೇವೆ. ಏಕೆಂದರೆ ಅವರು ಕಷ್ಟದ ಸಮಯದಲ್ಲಿದ್ದಾರೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ.

ನಾವು ಅವರಿಗೆ ಹೆಚ್ಚಿನ ಉದ್ಯೋಗಗಳನ್ನು ನೀಡಲು ಉದ್ದೇಶಿಸಿದ್ದೇವೆ ಮತ್ತು ಈಗಾಗಲೇ ಅದರ ಬಗ್ಗೆ ಕಾರ್ಯನಿರ್ವಹಿಸಿದ್ದೇವೆ, "ಎಂದು ರಾಹುಲ್ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+