Get Updates
Get notified of breaking news, exclusive insights, and must-see stories!

ಕಾಂಗ್ರೆಸ್‌ ಹಿರಿಯ ನಾಯಕನ ಪುತ್ರ ಅನಿಲ್ ಆಂಟೋನಿ ಬಿಜೆಪಿ ಸೇರ್ಪಡೆ

ನವದೆಹಲಿ, ಏಪ್ರಿಲ್ 06: ಬಿಬಿಸಿ ಸಾಕ್ಷ್ಯಚಿತ್ರದ ಕುರಿತು ಸ್ವಪಕ್ಷ ನಿಲುವನ್ನು ಟೀಕಿಸಿದ್ದ ಕಾಂಗ್ರೆಸ್‌ನ ಹಿರಿಯ ರಾಜಕಾರಣಿಯೊಬ್ಬರು ಪುತ್ರ ಗುರುವಾರ ಅಧಿಕೃತವಾಗಿ ಕಮಲ ಪಡೆಯನ್ನು ಸೇರಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಎಕೆ ಆಂಟನಿ ಅವರ ಪುತ್ರ ಅನಿಲ್ ಆಂಟೋನಿಯವರು ಇದೇ ಗುರುವಾರ ಭಾರತೀಯ ಜನತಾ ಪಕ್ಷಕ್ಕೆ (BJP) ಸೇರ್ಪಡೆಯಾದರು. ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ವಿ.ಮುರಳೀಧರನ್ ಅವರು ಪಕ್ಷಕ್ಕೆ ಸೇರ್ಪಡೆಯಾದ ಅನಿಲ್ ಆಂಟೋನಿ ಅವರನ್ನು ಬರಮಾಡಿಕೊಂಡರು.

Congress Senior Leader A K Antony who Son Anil Antony Joined BJP

ಬಿಜೆಪಿ ಸೇರಿದ ಅನಿಲ್ ಆಂಟೋನಿ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಡಿಜಿಟಲ್ ಮಾಧ್ಯಮ ಸಂಚಾಲಕ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) ರಾಷ್ಟ್ರೀಯ ಸಂಯೋಜಕ ಸ್ಥಾನ ಹೊಂದಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಕುರಿತ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಪಕ್ಷದಲ್ಲಿನ ಎಲ್ಲ ಸ್ಥಾನಗಳಿಗೆ ಕಳೆದ ಜನವರಿ ತಿಂಗಳಲ್ಲಿ ರಾಜೀನಾಮೆ ನೀಡಿದ್ದರು.

ಅಂದಿನಿಂದಲೇ ತಮ್ಮ ಎಲ್ಲ ಸ್ಥಾನ ದೊರೆತ ಅನಿಲ್ ಆಂಟೋನಿಯವರು ಅವರು ಬಿಜೆಪಿ ಸೇರಿತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಇತ್ತೀಚೆಗಷ್ಟೇ ಅವರು ಬಿಜೆಪಿ ಸೇರುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿವೆ. ಮಧ್ಯೆ ಅವರು ಬಿಜೆಪಿ ನಾಯಕರ ಸಮ್ಮುಖದಲ್ಲಿ ಪಕ್ಷ ಸೇರಿ ಚರ್ಚೆಯ ವಿಷಯಗಳೆಲ್ಲವನ್ನು ಅಧಿಕೃತಗೊಳಿಸಿದರು.

'ದೇಶ'ಕ್ಕಾಗಿ ಬಿಜೆಪಿ ಸೇರ್ಪಡೆ: ಕಾಂಗ್ರೆಸ್ ವಿರುದ್ಧ ಆಂಟೋನಿ ವಾಗ್ದಾಳಿ

ಬಿಜೆಪಿ ಸೇರ್ಪಡೆಯಾದ ಬಳಿಕ ಮಾತನಾಡಿದ ಅನಿಲ್ ಆಂಟೋನಿಯವರು, ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಕುಟುಂಬಕ್ಕಾಗಿ ದುಡಿಯುವುದು ತಮ್ಮ ಧರ್ಮ ಎಂದುಕೊಂಡಿದ್ದಾರೆ, ಅದನ್ನೆ ನಂಬಿದ್ದಾರೆ. ದೇಶಕ್ಕಾಗಿ ಕೆಲಸ ಮಾಡಬೇಕು ಎನ್ನುವುದು ನನ್ನ ಧರ್ಮವಾಗಿದೆ ಎಂದು ಅವರು ತಿಳಿಸಿದರು. ಈ ಮೂಲಕ ತಮ್ಮ ಮಾಜಿ ಪಕ್ಷ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ನಮ್ಮ ತಂದೆ ಎಕೆ ಆಂಟನಿ ಅವರು ಮತ್ತು ನಮ್ಮ ನಡುವಿನ ಸಂಬಂಧ ಉತ್ತಮವಾಗಿದೆ. ನಮ್ಮಿಬ್ಬರ ಮಧ್ಯ ಇರುವುದು ಸಿದ್ಧಾಂತ ಭಿನ್ನಾಬಿಪ್ರಾಯಗಳು ಮಾತ್ರ. ಅದರ ಹೊರತು ಯಾವುದೇ ವಿಚಾರದಲ್ಲಿ ವಿರೋಧಗಳು ನಮ್ಮಲ್ಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಬಿಜೆಪಿ ಸೇರ್ಪಡೆಯಾಗುವ ಮೂಲಕ ನಾನು ಸರಿಯಾದ ಹೆಜ್ಜೆ ಇಟ್ಟಿದ್ದೇನೆ. ಜೊತೆಗೆ ತಂದೆಅವರೊಂದಿಗಿನ ಪ್ರೀತಿ, ಗೌರವ ಕೊನೆಯವರೆಗೂ ಹಾಗೇ ಉಳಿಯಲಿದೆ ಎಂದು ಹೇಳಿದರು.

ಮೋದಿ ಸಾಕ್ಷ್ಯಚಿತ್ರ ಡಿಲಿಟ್‌ಗೆ ಆಂಟೋನಿ ಸ್ಪಷ್ಟನೆ

ಬಿಜೆಪಿ ಜೊತೆಗಿನ ಭಿನ್ನಾಭಿಪ್ರಾಯ, ಬಿಬಿಸಿಯ ತಯಾರಿಸಿದ ಸಾಕ್ಷ್ಯಚಿತ್ರ ಕುರಿತು ಆನಿಲ್ ಆಂಟೋನಿ ಅವರು ಟ್ವೀಟ್ ಮಾಡಿದ್ದರು. ಬಳಿಕ ಅದನ್ನು ಡಿಲೀಟ್ ಮಾಡಿದ್ದರು. ಆ ಬಗ್ಗೆ ಪ್ರತಿಕ್ರಿಯಿಸಿದರ ಆಂಟೋನಿ, ಟ್ವೀಟ್ ಮಾಡಿದ ಬಳಿಕ ಸಾಕಷ್ಟು ಅಸಹಿಷ್ಣು ದೂರವಾಣಿ ಕರೆಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಟೀಕೆ ವ್ಯಕ್ತವಾಗುವ ಜೊತೆಗೆ ಸ್ವಪಕ್ಷದ ಒಳಗಿನಿಂದಲೇ ನಿಂದನೆಗಳು ಹೆಚ್ಚಾಗಿ ಬಂದವು. ಈ ಕಾರಣದಿಂದ ಟ್ವೀಟ್ ಡಿಲೀಟ್ ಮಾಡಿದ್ದೇ ಎಂದು ತಿಳಿಸಿದರು.

Congress Senior Leader A K Antony who Son Anil Antony Joined BJP

ಇಂದಿನಿ ಪ್ರಧಾನಮಂತ್ರಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ 2002 ರಲ್ಲಿ ಗುಜರಾತ್‌ನಲ್ಲಿ ನಡೆದ ಗಲಭೆ ನಡೆದಿತ್ತು. ಆ ವೇಳೆ ಸಂಭವಿಸಿದ್ದ ಘಟನೆಗಳನ್ನು ವಿವರಿಸುವ ಬಿಬಿಸಿ ಸಾಕ್ಷ್ಯಚಿತ್ರ 'ಇಂಡಿಯಾ: ದಿ ಮೋದಿ ಕ್ವೆಶ್ಶನ್' ಎಂಬ ಸಾಕ್ಷ್ಯಚಿತ್ರ ಭಾರತದಲ್ಲಿ ಭಾರೀ ಸಂಚಲನ ಹುಟ್ಟು ಹಾಕಿತ್ತು.

ಸಾಕಷ್ಟು ಪರ ವಿರೋಧಗಳಿಗೆ ಕಾರಣವಾಗಿತ್ತು. ಬಳಿಕ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ಸಾಕ್ಷ್ಯಚಿತ್ರ ತೆಗೆದು ಹಾಕಲಾಯಿತು. ಬಿಜೆಪಿಯ ಈ ಕ್ರಮವನ್ನು ಪ್ರತಿಪಕ್ಷಗಳು ಟೀಕಿಸಿದವು. ಕಾಂಗ್ರೆಸ್‌ ಕಾರ್ಯಕರ್ತರು ಸೇರಿದಂತೆ ಜೆಎನ್‌ಯು ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+