ಬಜೆಟ್ 2019: ಆದಾಯ ಎಲ್ಲಿಂದ? ಖರ್ಚು ಎಲ್ಲೆಲ್ಲಿ?
ನವದೆಹಲಿ, ಜುಲೈ 05: ಕೇಂದ್ರ ಹಣಕಾಸು ನಿರ್ಮಲಾ ಸೀತಾರಾಮನ್ ಅವರು ಅವರು ಮೋದಿ ಸರ್ಕಾರ 2.0 ನ ಮೊದಲ ಬಹು ನಿರೀಕ್ಷಿತ ಬಜೆಟ್ ಅನ್ನು ಇಂದು ಮಂಡಿಸಿದ್ದಾರೆ.
ಅವರ ಸುಧೀರ್ಘ ಬಜೆಟ್ ಭಾಷಣದ ಕೊನೆಯಲ್ಲಿ ಈ ಬಾರಿ ಕಳೆದ ವರ್ಷಕ್ಕಿಂತಲೂ ಕಡಿಮೆ ವಿತ್ತಿಯ ಕೊರತೆ ಇದೆ ಎಂದು ಹೇಳಿದ್ದು ಅತ್ಯಂತ ಪ್ರಮುಖವೆಂದು ಪರಿಗಣಿತವಾಗುತ್ತಿದೆ.
ಕಳೆದ ಐದು ವರ್ಷಗಳಲ್ಲಿ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಳವಾಗಿದೆ, ಜಿಎಸ್ಟಿ ಭಾರತದ ಆರ್ಥಿಕತೆಗೆ ಶಕ್ತಿ ಒದಗಿಸುತ್ತದೆ ಎಂದು ಕೇಂದ್ರ ಸರ್ಕಾರವು ಕಳೆದ ಐದು ವರ್ಷಗಳಲ್ಲಿ ಹಲವು ಭಾರಿ ಹೇಳಿದೆ. ಈ ಹಿನ್ನೆಲೆಯಲ್ಲಿ ಸಹ ಈ ಭಾರಿಯ ಬಜೆಟ್ ಬಹು ಮಹತ್ವವನ್ನು ಪಡೆದುಕೊಂಡಿತ್ತು.

ಸರ್ಕಾರಕ್ಕೆ ಹಣ ಎಲ್ಲಿಂದ ಬರುತ್ತದೆ, ಹೇಗೆ ಖರ್ಚಾಗುತ್ತದೆ ಎಂಬುದನ್ನು ರೂಪಾಯಿ ಮಟ್ಟಕ್ಕೆ ಇಳಿಸಿ ಸರಳವಾಗಿ ನೋಡುವ ಕ್ರಮ ಹಿಂದಿನಿಂದಲೂ ಇದೆ. ಹಾಗೆಯೇ ರೂಪಾಯಿ ಮಟ್ಟದಲ್ಲಿ ಬಜೆಟ್ನ ಆದಾಯ ಮತ್ತು ವ್ಯಯವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
ಆದಾಯ ಹೇಗೆ (ಪೈಸೆಗಳಲ್ಲಿ)
ಸಾಲ ಮತ್ತು ಇತರೆ ಹೊಣೆಗಾರಿಕೆಗಳಿಂದ - 20 ಪೈಸೆ
ವಾಣಿಜ್ಯ ತೆರಿಗೆ- 21 ಪೈಸೆ
ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ)- 19 ಪೈಸೆ
ಆದಾಯ ತೆರಿಗೆ - 16 ಪೈಸೆ
ತೆರಿಗೆಯೇತರ ಆದಾಯ- 9 ಪೈಸೆ
ಕೇಂದ್ರ ಅಬಕಾರಿ ತೆರಿಗೆ - 8 ಪೈಸೆ
ಆಮದು, ರಫ್ತು (ಕಸ್ಟಮ್ಸ್) - 4 ಪೈಸೆ
ಒಟ್ಟು 97 ಪೈಸೆ ಸರ್ಕಾರಕ್ಕೆ ಬರುತ್ತದೆ. ಸರ್ಕಾರಕ್ಕೆ ಮೂರು ರೂಪಾಯಿ ಕೊರತೆ ಇದೆ.

ಖರ್ಚು ಹೇಗೆ (ಪೈಸೆಗಳಲ್ಲಿ)
ರಾಜ್ಯಗಳಿಗೆ ನೀಡುವ ತೆರಿಗೆ ಪಾಲು- 23 ಪೈಸೆ
ಬಡ್ಡಿ ಮತ್ತು ಇತರ ಪಾವತಿ - 18 ಪೈಸೆ
ಕೇಂದ್ರದ ನೇರ ಯೋಜನೆಗಳು - 13 ಪೈಸೆ
ಕೇಂದ್ರ ಬೆಂಬಲಿತ ಯೋಜನೆಗಳು - 9 ಪೈಸೆ
ರಕ್ಷಣೆಗೆ ಖರ್ಚು - 9 ಪೈಸೆ
ಫೈನಾನ್ಸ್, ಕಾಮರ್ಸ್ ಮತ್ತು ಇತರೆ ವರ್ಗಾವಣೆ- 7 ಪೈಸೆ
ಸಬ್ಸಿಡಿಗಳು - 8 ಪೈಸೆ
ಇತರೆ ಖರ್ಚುಗಳು - 8 ಪೈಸೆ
ನಿವೃತ್ತಿ ವೇತನಗಳು - 5 ಪೈಸೆ
ಸರ್ಕಾರ 1 ರೂಪಾಯಿ ಖರ್ಚು ಮಾಡುತ್ತಿದೆ.
ಸರ್ಕಾರಕ್ಕೆ ಆದಾಯ 97 ಪೈಸೆ ಬರುತ್ತಿದ್ದರೆ 1 ರೂಪಾಯಿ ಖರ್ಚು ಮಾಡುತ್ತಿದೆ. ಹಾಗಾಗಿ ಇದು ಕೊರತೆಯ ಬಜೆಟ್ ಆಗಿದೆ.
-
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price












Click it and Unblock the Notifications