ಬಜೆಟ್ 2019: ಆದಾಯ ಎಲ್ಲಿಂದ? ಖರ್ಚು ಎಲ್ಲೆಲ್ಲಿ?
ನವದೆಹಲಿ, ಜುಲೈ 05: ಕೇಂದ್ರ ಹಣಕಾಸು ನಿರ್ಮಲಾ ಸೀತಾರಾಮನ್ ಅವರು ಅವರು ಮೋದಿ ಸರ್ಕಾರ 2.0 ನ ಮೊದಲ ಬಹು ನಿರೀಕ್ಷಿತ ಬಜೆಟ್ ಅನ್ನು ಇಂದು ಮಂಡಿಸಿದ್ದಾರೆ.
ಅವರ ಸುಧೀರ್ಘ ಬಜೆಟ್ ಭಾಷಣದ ಕೊನೆಯಲ್ಲಿ ಈ ಬಾರಿ ಕಳೆದ ವರ್ಷಕ್ಕಿಂತಲೂ ಕಡಿಮೆ ವಿತ್ತಿಯ ಕೊರತೆ ಇದೆ ಎಂದು ಹೇಳಿದ್ದು ಅತ್ಯಂತ ಪ್ರಮುಖವೆಂದು ಪರಿಗಣಿತವಾಗುತ್ತಿದೆ.
ಕಳೆದ ಐದು ವರ್ಷಗಳಲ್ಲಿ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಳವಾಗಿದೆ, ಜಿಎಸ್ಟಿ ಭಾರತದ ಆರ್ಥಿಕತೆಗೆ ಶಕ್ತಿ ಒದಗಿಸುತ್ತದೆ ಎಂದು ಕೇಂದ್ರ ಸರ್ಕಾರವು ಕಳೆದ ಐದು ವರ್ಷಗಳಲ್ಲಿ ಹಲವು ಭಾರಿ ಹೇಳಿದೆ. ಈ ಹಿನ್ನೆಲೆಯಲ್ಲಿ ಸಹ ಈ ಭಾರಿಯ ಬಜೆಟ್ ಬಹು ಮಹತ್ವವನ್ನು ಪಡೆದುಕೊಂಡಿತ್ತು.

ಸರ್ಕಾರಕ್ಕೆ ಹಣ ಎಲ್ಲಿಂದ ಬರುತ್ತದೆ, ಹೇಗೆ ಖರ್ಚಾಗುತ್ತದೆ ಎಂಬುದನ್ನು ರೂಪಾಯಿ ಮಟ್ಟಕ್ಕೆ ಇಳಿಸಿ ಸರಳವಾಗಿ ನೋಡುವ ಕ್ರಮ ಹಿಂದಿನಿಂದಲೂ ಇದೆ. ಹಾಗೆಯೇ ರೂಪಾಯಿ ಮಟ್ಟದಲ್ಲಿ ಬಜೆಟ್ನ ಆದಾಯ ಮತ್ತು ವ್ಯಯವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
ಆದಾಯ ಹೇಗೆ (ಪೈಸೆಗಳಲ್ಲಿ)
ಸಾಲ ಮತ್ತು ಇತರೆ ಹೊಣೆಗಾರಿಕೆಗಳಿಂದ - 20 ಪೈಸೆ
ವಾಣಿಜ್ಯ ತೆರಿಗೆ- 21 ಪೈಸೆ
ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ)- 19 ಪೈಸೆ
ಆದಾಯ ತೆರಿಗೆ - 16 ಪೈಸೆ
ತೆರಿಗೆಯೇತರ ಆದಾಯ- 9 ಪೈಸೆ
ಕೇಂದ್ರ ಅಬಕಾರಿ ತೆರಿಗೆ - 8 ಪೈಸೆ
ಆಮದು, ರಫ್ತು (ಕಸ್ಟಮ್ಸ್) - 4 ಪೈಸೆ
ಒಟ್ಟು 97 ಪೈಸೆ ಸರ್ಕಾರಕ್ಕೆ ಬರುತ್ತದೆ. ಸರ್ಕಾರಕ್ಕೆ ಮೂರು ರೂಪಾಯಿ ಕೊರತೆ ಇದೆ.

ಖರ್ಚು ಹೇಗೆ (ಪೈಸೆಗಳಲ್ಲಿ)
ರಾಜ್ಯಗಳಿಗೆ ನೀಡುವ ತೆರಿಗೆ ಪಾಲು- 23 ಪೈಸೆ
ಬಡ್ಡಿ ಮತ್ತು ಇತರ ಪಾವತಿ - 18 ಪೈಸೆ
ಕೇಂದ್ರದ ನೇರ ಯೋಜನೆಗಳು - 13 ಪೈಸೆ
ಕೇಂದ್ರ ಬೆಂಬಲಿತ ಯೋಜನೆಗಳು - 9 ಪೈಸೆ
ರಕ್ಷಣೆಗೆ ಖರ್ಚು - 9 ಪೈಸೆ
ಫೈನಾನ್ಸ್, ಕಾಮರ್ಸ್ ಮತ್ತು ಇತರೆ ವರ್ಗಾವಣೆ- 7 ಪೈಸೆ
ಸಬ್ಸಿಡಿಗಳು - 8 ಪೈಸೆ
ಇತರೆ ಖರ್ಚುಗಳು - 8 ಪೈಸೆ
ನಿವೃತ್ತಿ ವೇತನಗಳು - 5 ಪೈಸೆ
ಸರ್ಕಾರ 1 ರೂಪಾಯಿ ಖರ್ಚು ಮಾಡುತ್ತಿದೆ.
ಸರ್ಕಾರಕ್ಕೆ ಆದಾಯ 97 ಪೈಸೆ ಬರುತ್ತಿದ್ದರೆ 1 ರೂಪಾಯಿ ಖರ್ಚು ಮಾಡುತ್ತಿದೆ. ಹಾಗಾಗಿ ಇದು ಕೊರತೆಯ ಬಜೆಟ್ ಆಗಿದೆ.
-
ಮದ್ಯಪಾನದ ಅಭ್ಯಾಸವನ್ನು ನಿಯಂತ್ರಿಸಲು ಬಯಸುತ್ತೀರಾ? ತಜ್ಞರ ಸರಳ ಸಲಹೆಗಳು ಇಲ್ಲಿವೆ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral -
BESCOM Mithra: 'ಬೆಸ್ಕಾಂ ಮಿತ್ರ' ಸೇವೆ ತಾತ್ಕಾಲಿಕ ಸ್ಥಗಿತ, ಸುಧಾರಿತ ವ್ಯವಸ್ಥೆ ಶೀಘ್ರವೇ ಲಭ್ಯ











Click it and Unblock the Notifications