ರಾಮ್ ದೇವ್ ಫುಟ್ಬಾಲ್ ಕಿಕ್, ರಾಜಕಾರಣಿಗಳಿಗೆ ಸೋಲು
ನವದೆಹಲಿ, ಜುಲೈ 26: ಎನ್ ಡಿಎ ಸರ್ಕಾರದ ವಿವಿಧ ಜನಪರ ಯೋಜನೆಗಳ ಪ್ರಚಾರ ಹಾಗೂ ದೇಣಿಗೆ ಸಂಗ್ರಹಕ್ಕಾಗಿ ನಡೆದ ಪ್ರದರ್ಶನ ಫುಟ್ಬಾಲ್ ಪಂದ್ಯಕ್ಕೆ ಯೋಗ ಗುರು ಬಾಬಾ ರಾಮ್ ದೇವ್ ಚಾಲನೆ ನೀಡಿದರು. ಬಾಲಿವುಡ್ Vs ರಾಜಕಾರಣಿಗಳ ನಡುವೆ ನಡೆದ ಪಂದ್ಯದಲ್ಲಿ ರಾಮದೇವ್ ಕೂಡಾ ಕಾಷಾಯ ವಸ್ತ್ರ ಧರಿಸಿ ಕಿಕ್ ಹೊಡೆದರು. ಆದರೆ, ಗೋಲು ಹೊಡೆಯಲಿಲ್ಲ.
ಯೋಗ ಮೂಲಕ ಎಲ್ಲರ ಗಮನ ಸೆಳೆದಿರುವ ಬಾಬಾ ರಾಮದೇವ್ ಅವರು ತಮ್ಮ ಕಾಲ್ಚಳಕ ಮೂಲಕ ನೆಹರೂ ಮೈದಾನದಲ್ಲಿ ಅಭಿಮಾನಿಗಳನ್ನು ರಂಜಿಸಿದರು. [ಮೋದಿ ಕನಸುಗಳು: ಸ್ವಚ್ಛಭಾರತದಿಂದ ಡಿಜಿಟಲ್ ಇಂಡಿಯಾ ತನಕ]
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಾದ 'ಬೇಟಿ ಬಚಾವೊ ಬೇಟಿ ಪಡಾವೊ' ಹಾಗೂ 'ಸ್ವಚ್ಛ ಭಾರತ' ಯೋಜನೆಗಳಿಗೆ ಹಣ ಸಂಗ್ರಹಣೆಗಾಗಿ ಜವಾಹರಲಾಲ್ ನೆಹರು ಕ್ರಿಡಾಂಗಣದಲ್ಲಿ ಸಂಸದರ ತಂಡದ ವಿರುದ್ಧ ಬಾಲಿವುಡ್ ಸೆಲೆಬ್ರಿಟಿ ತಂಡ ನಡುವೆ ಫುಟ್ಬಾಲ್ ಪಂದ್ಯ ನಡೆಸಲಾಯಿತು.

ಪ್ರಿಯಾಂಕಾ ಕೋಥಾರಿ ಆಯೋಜನೆ
ಖಾವಿ ಉಡುಪಿನಲ್ಲೇ ಬಾಬಾ ರಾಮ್ ದೇವ್ ಅವರು ಆಟಗಾರರೊಂದಿಗೆ ಫುಟ್ಬಾಲ್ ಆಡುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.

ಗೋಲ್ ಭಾರಿಸಲು ಪ್ರಯತ್ನಿಸಿ ವಿಫಲನಾದೆ
ನಾನು ರಾಜಕಾರಣಿಗಳು ಮತ್ತು ನಟರಿಬ್ಬರನ್ನೂ ಪ್ರೋತ್ಸಾಹಿಸುವೆ. ಐದು ಬಾರಿ ಗೋಲ್ ಭಾರಿಸಲು ಪ್ರಯತ್ನಿಸಿ ವಿಫಲನಾದೆ ಎಂದು ಖುಷಿಯಿಂದ ಬಾಬಾ ರಾಮದೇವ್ ಅವರು ಪಂದ್ಯ ನಂತರ ಹೇಳಿದರು.

ಬಾಲಿವುಡ್ ತಂಡವನ್ನು ಅಭಿಷೇಕ್ ಬಚ್ಚನ್ ಮುನ್ನಡೆಸಿದರು
ಬಾಲಿವುಡ್ ತಂಡವನ್ನು ಅಭಿಷೇಕ್ ಬಚ್ಚನ್ ಮುನ್ನಡೆಸಿದರು. ಬಾಲಿವುಡ್ ತಂಡ 10-0 ಅಂತರದಲ್ಲಿ ಜಯಗಳಿಸಿತು.

ಬಾಬುಲ್ ಸುಪ್ರಿಯೊ ಸಂಸದರ ತಂಡದ ನಾಯಕ
ಬೃಹತ್ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ರಾಜ್ಯ ಸಚಿವ ಬಾಬುಲ್ ಸುಪ್ರಿಯೊ ಸಂಸದರ ತಂಡದ ನಾಯಕರಾಗಿದ್ದರು. ರಾಜಕಾರಣಿಗಳ ತಂಡದಲ್ಲಿ ನಟ ರಾಜಕಾರಣಿ ಮನೋಜ್ ತಿವಾರಿ ಇದ್ದರು.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications