ರಾಜ್ಯಸಭೆಯಲ್ಲಿ ಎನ್ ಡಿಎಗೆ ಇನ್ನೂ ಬಹುಮತ ಸಿಕ್ಕಿಲ್ಲ!
ನವದೆಹಲಿ, ಮೇ 19: ಹೌದು ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್ ಡಿಎ 337 ಸ್ಥಾನಗಳೊಂದಿಗೆ ಅಭೂತಪೂರ್ವ ಯಶಸ್ಸು ಸಾಧಿಸಿದ್ದರೂ ಮೈತ್ರಿಕೂಟಕ್ಕೆ ಇನ್ನೂ ಬಹುಮತ ದೊರೆತಿಲ್ಲ. ಕೆಳಮನೆಯಲ್ಲಿ (ಲೋಕಸಭೆ) ಭರ್ಜರಿ ಬಹುಮತ ದಾಖಲಾಗಿದ್ದರೂ ಮೇಲ್ಮನೆಯಲ್ಲಿ (ರಾಜ್ಯಸಭೆ) NDAಗೆ ಬಹುಮತ ಇಲ್ಲವಾಗಿದೆ.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಒಕ್ಕೂಟವು -NDA ರಾಜ್ಯಸಭೆ ಅತಂತ್ರ ಸ್ಥಿತಿಯಲ್ಲಿದೆ. ಪ್ರಸ್ತುತ ಎನ್ ಡಿಎ 62 ಸ್ಥಾನಗಳನ್ನು ಹೊಂದಿದೆ. ಆದರೆ ಬಹುಮತಕ್ಕೆ ಅಗತ್ಯವಿರುವುದು 121 ಸ್ಥಾನಗಳು. ಗರಿಷ್ಠ 245 ಸದಸ್ಯರನ್ನೊಳಗೊಂಡ ರಾಜ್ಯಸಭೆಯಲ್ಲಿ ಪಕ್ಷಗಳ ಬಲಾಬಲದ ಲೆಕ್ಕಾಚಾರ ಹೀಗಿದೆ.

245 ಸದಸ್ಯರ ಪೈಕಿ 12 ಸದಸ್ಯರನ್ನು ರಾಷ್ಟ್ರಪತಿಯವರೇ ಆಯ್ಕೆ ಮಾಡುತ್ತಾರೆ. ಸಮಾಜದ ನಾನಾ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ/ ಸೇವೆ ಸಲ್ಲಿಸಿರುವಂತಹ ವ್ಯಕ್ತಿಗಳಿಗೆ ರಾಷ್ಟ್ರಪತಿಗಳು ಮಣೆ ಹಾಕುತ್ತಾರೆ. ಉಳಿದಂತೆ, ಇತರೆ ಸದಸ್ಯರನ್ನು ನಾನಾ ರಾಜ್ಯಗಳ ಶಾಸಕರು ಆರಿಸುತ್ತಾರೆ.
ಪ್ರತಿ ಸದಸ್ಯರ ಕಾಲವಧಿಯು 6 ವರ್ಷದ್ದಾಗಿರುತ್ತದೆ. ಪ್ರತಿ 2 ವರ್ಷಕ್ಕೊಮ್ಮೆ ಮೂರನೆಯ ಒಂದರಷ್ಟು ಸದಸ್ಯರು ರಾಜ್ಯಸಭೆಯಿಂದ ನಿರ್ಗಮಿಸುತ್ತಾರೆ. ಉಪ ರಾಷ್ಟ್ರಪತಿಯು ರಾಜ್ಯಸಭೆಯ ಸಭಾಪತಿ ಆಗಿರುತ್ತಾರೆ. ಸಭಾಪತಿಯ (ಉಪ ರಾಷ್ಟ್ರಪತಿ) ಅನುಪಸ್ಥಿತಿಯಲ್ಲಿ ಸಭಾಪತಿಯವರೇ ಸಭೆಯ ಅಧ್ಯಕ್ಷತೆ ವಹಿಸುತ್ತಾರೆ.
ಇನ್ನು ಮೇಲ್ಮನೆ ಸದಸ್ಯರ ಸಂಬಳ ಸವಲತ್ತುಗಳು ಲೋಕಸಭೆಯ ಸದಸ್ಯರಿಗೆ ಸಮಾನವಾಗಿರುತ್ತದೆ. ರಾಜ್ಯಸಭೆಯು ನಿರಂತರ ಸಭೆ. ಲೋಕಸಭೆಯಂತೆ ಎಂದಿಗೂ ವಿಸರ್ಜನೆಯಾಗುವುದಿಲ್ಲ. (ರಾಜ್ಯಸಭೆಗೆ ಸದಸ್ಯರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?)
ಪ್ರಸ್ತುತ ರಾಜ್ಯಸಭೆಯಲ್ಲಿ ಪಕ್ಷಗಳ ಬಲಾಬಲ ಇಂತಿದೆ:
NDA:
ಬಿಜೆಪಿ - 46
ಟಿಡಿಪಿ - 6
ಎಸ್ಎಡಿ - 3
ಶಿವಸೇನೆ - 3
ಎಲ್ ಜೆಪಿ - 1
ಎಂಎನ್ಎಫ್ - 1
ಎನ್ ಪಿಎಫ್ - 1
ಆರ್ ಪಿಎ (ಎ) - 1
UPA:
ಬಿಎಸ್ ಪಿ - 14
ಎಐಎಡಿಎಂಕೆ - 10
ತೃಣಮೂಲ ಕಾಂಗ್ರೆಸ್ - 12
ಬಿಜೆಡಿ - 6
ಬಿಪಿಎಫ್ - 1
ಸಿಪಿಐ - 2
ಸಿಪಿಎಂ - 9
ಡಿಎಂಕೆ - 4
ಐಎನ್ಎಲ್ ಡಿ - 2
ಎನ್ ಸಿ - 2
ಜೆಡಿಯು - 9
ಎಸ್ ಪಿ - 9
ಜೆಎಂಎಂ - 1
ಕೇರಳ ಕಾಂಗ್ರೆಸ್ (ಮಾ) - 1
ಎನ್ ಸಿಪಿ - 6
ಆರ್ ಜೆಡಿ - 1
ಎಸ್ ಡಿಎಫ್ - 1
ಟಿಆರ್ ಎಸ್ - 1
ಸ್ವತಂತ್ರರು 9
ನಾಮ ನಿರ್ದೇಶಿತರು - 10
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications