ಯುಎಸ್ ಸಲಿಂಗಿಗಳ ಬಂಧಿಸಿ ಎಂದ ಬಿಜೆಪಿ

ಭಾರತಕ್ಕೆ ಆಗಮಿಸಿರುವ ಅಮೆರಿಕ ಸಂಸತ್ತಿನ ಪ್ರತಿನಿಧಿಗಳ ಪೈಕಿರುವ ಸಲಿಂಗ ಕಾಮಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ಭಾರತದಲ್ಲಿರುವ ಅಮೆರಿಕದ ರಾಯಭಾರಿಗಳು ಇನ್ನಿತರ ಅಧಿಕಾರಿಗಳ ಪೈಕಿ ಯಾರಾದರೂ ಸಲಿಂಗಿಗಳಿದ್ದರೆ ಅವರನ್ನು ಸೆರೆ ಹಿಡಿಯಿರಿ. ಈ ದೇಶದ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಸಲಿಂಗಕಾಮ ಅಪರಾಧವಾಗಿದೆ ಎಂದು ಯಶವಂತ ಸಿನ್ಹಾ ಎಚ್ಚರಿಸಿದ್ದಾರೆ. [ಸಲಿಂಗಕಾಮ ಅನೈತಿಕ, ಅಪರಾಧ : ಸುಪ್ರೀಂಕೋರ್ಟ್]
ಪರಸ್ಪರ ಗೌರವಾದರವುಳ್ಳ ಉಭಯ ರಾಷ್ಟ್ರಗಳು ಈ ರೀತಿ ನಡೆದುಕೊಳ್ಳುವುದಿಲ್ಲ. ಉಪ ರಾಯಭಾರಿ ಮಹಿಳೆ ಅಧಿಕಾರಿಯನ್ನು ವಿವಸ್ತ್ರಗೊಳಿಸಿ ತಪಾಸಣೆ ಮಾಡಿರುವುದು ಆ ದೇಶದ ಕಾನೂನಾದರೆ, ನಮ್ಮ ದೇಶದ ಕಾನೂನಿನ ರುಚಿಯನ್ನು ಇಲ್ಲಿನ ಸರ್ಕಾರ ತೋರಿಸಲಿ, ಅಮೆರಿಕಾದಿಂದ ಬರುವವರಿಗೆ ವೀಸಾ ನೀಡುವುದನ್ನು ನಿಲ್ಲಿಸಲಿ, ಪ್ರತಿನಿಧಿಗಳನ್ನು ಬಂಧಿಸಲಿ ಎಂದು ಸಿನ್ಹಾ ಆಗ್ರಹಿಸಿದ್ದಾರೆ.
ಸಂಗೀತಾ ರಿಚರ್ಡ್ ಎಂಬ ಭಾರತ ಮೂಲದ ಮಹಿಳೆಯನ್ನು ಮನೆಗೆಲಸ ಮತ್ತು ಮಕ್ಕಳನ್ನ ನೋಡಿಕೊಳ್ಳಲು ದೇವಯಾನಿ ಅವರು ಕೆಲಸಕ್ಕೆ ಇಟ್ಟುಕೊಂಡಿದ್ದರು. ಜೂನ್ 2012ರಿಂದ ನವೆಂಬರ್ 2013ರವರೆಗೆ ತಿಂಗಳವರೆಗೆ ದೇವಯಾನಿ ಅವರ ಮನೆಯಲ್ಲಿ ಕೆಲಸ ಮಾಡಿದ ಸಂಗೀತಾ, ವೀಸಾ ದಾಖಲೆಯಲ್ಲಿ ತಿಂಗಳಿಗೆ 4.500 ಡಾಲರ್ ಸಂಬಳ( ಗಂಟೆಗೆ 3.31 ಡಾಲರ್ ಲೆಕ್ಕದಂತೆ) ಕೊಡುತ್ತಿದ್ದೇನೆ ಎಂದು ದೇವಯಾನಿ ಉಲ್ಲೇಖಿಸಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
1999 IFS ಬ್ಯಾಚಿನ ಅಧಿಕಾರಿಯಾಗಿರುವ 39 ವರ್ಷ ವಯಸ್ಸಿನ ದೇವಯಾನಿ ಕೋಬ್ರಾಗಡೆ ಅವರು ಭಾರತ ಸರ್ಕಾರದಿಂದ ವಾರ್ಷಿಕವಾಗಿ 100,000 ಡಾಲರ್ ಪಡೆಯುತ್ತಿದ್ದಾರೆ. ನ್ಯೂಯಾರ್ಕಿನಲ್ಲಿ ಐಷಾರಾಮಿ ವಸತಿ ಗೃಹ ಹೊಂದಿದ್ದಾರೆ. ಅಪರಾಧ ಸಾಬೀತಾದರೆ ದೇವಯಾನಿ ಅವರು 5-10 ವರ್ಷ ಕಾರಾಗೃಹ ವಾಸ ಅನುಭವಿಸಬೇಕಾಗುತ್ತದೆ
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications