ಅಯೋಧ್ಯೆ ವಿವಾದಕ್ಕೆ ಶೀಘ್ರವೇ ತಿಲಾಂಜಲಿ ಹಾಡಬೇಕು: ರವಿಶಂಕರ್ ಪ್ರಸಾದ್
ನವದೆಹಲಿ, ಜನವರಿ 28: "ಎಪ್ಪತ್ತು ವರ್ಷಗಳಿಂದ ಇತ್ಯರ್ಥವಾಗದೆ ಉಳಿದಿರುವ ಅಯೋಧ್ಯೆ ವಿವಾದಕ್ಕೆ ಆದಷ್ಟು ಶೀಘ್ರವಾಗಿ ತಿಲಾಂಜಲಿ ಹಾಡಬೇಕು" ಎಂದು ಕೇಮದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
"ಈ ದೇಶದ ಜನರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದನ್ನು ನೋಡಲು ತವಕದಿಂದಿದ್ದಾರೆ. ಒಬ್ಬ ನಾಗರಿಕನಾಗಿ ನಾನು ಹೇಳುವುದಿಷ್ಟೆ. ಎಪ್ಪತ್ತು ವರ್ಷಗಳಿಂದ ಇತ್ಯರ್ಥವಾಗದೆ ಉಳಿದ ಈ ಪ್ರಕರಣ ಆದ್ಷ್ಟಿ ಶೀಗ್ರವಾಗಿ ಬಗೆಹರಿಯಬೇಕು" ಎಂದು ಅವರು ಹೇಳಿದರು.
'ನ್ಯಾಯಮೂರ್ತಿ ಲಭ್ಯರಿಲ್ಲ, ಮಂಗಳವಾರ ಅಯೋಧ್ಯಾ ಕೇಸು ನಡೆಯಲ್ಲ'
ಜನವರಿ 29 ರಂದು ನಡೆಯಬೇಕಿದ್ದ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ವಿಚಾರಣೆ, ನ್ಯಾಯಮೂರ್ತಿಗಳೊಬ್ಬರ ಅನುಪಸ್ಥಿತಿಯ ಕಾರಣ ಮುಂದೂಡಲ್ಪಟ್ಟಿದೆ.
"ರಾಮಮಂದಿರ ನಿರ್ಮಾಣಕ್ಕೆ ಕಾನೂನು ತಂದರೆ NDA ಗೆಲುವು ಖಚಿತ!"
ರಾಮ ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಜಾರಿಗೆ ತರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಕೇಳಿ ಬಂದಿದೆ. ಸಂಘ ಪರಿವಾರ, ಹಿಂದೂ ಸಂಘಟನೆಗಳು ಸುಗ್ರೀವಾಜ್ಞೆ ಅಥವಾ ಕಾನೂನನ್ನು ಜಾರಿಗೆ ಒತ್ತಾಯಿಸಿವೆ. 2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ರಾಮ್ ಲಲ್ಲಾ ಸಮಾನಾಗಿ ಹೊಂದಿವೆ.