Nagamangala Elections: ಕಾಂಗ್ರೆಸ್-ಜೆಡಿಎಸ್ ಜಿದ್ದಾಜಿದ್ದಿ, ನಾಗಮಂಗಲದ ನಾಯಕ ಯಾರು?
ಮಂಡ್ಯ, ಮಾರ್ಚ್ 26: ನಾಗಮಂಗಲ ಮಂಡ್ಯ ಜಿಲ್ಲೆಯಲ್ಲೇ ಅತ್ಯಂತ ದೊಡ್ಡ ಕ್ಷೇತ್ರ. 1882ರವರೆಗೆ ಹಾಸನ ಜಿಲ್ಲೆಗೆ ಸೇರಿದ್ದ ನಾಗಮಂಗಲ, ನಂತರದಲ್ಲಿ ಮೈಸೂರು ಜಿಲ್ಲೆಗೆ ಒಳಪಡುತ್ತದೆ. ಮಂಡ್ಯ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರವೇ ನಾಗಮಂಗಲ ಅತೀ ದೊಡ್ಡ ತಾಲೂಕು ಕೇಂದ್ರವಾಗಿ ರೂಪುಗೊಳ್ಳುತ್ತದೆ.
ತಾಲೂಕಿನ ಐದು ಹೋಬಳಿಗಳನ್ನ ಒಳಗೊಂಡಿದ್ದ ನಾಗಮಂಗಲ 2008ರ ಕ್ಷೇತ್ರ ಮರುವಿಂಗಡಣೆ ವೇಳೆ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯನ್ನ ಸೇರಿಸಿಕೊಂಡು ವಿಸ್ತಾರಗೊಂಡಿದೆ. ಬಯಲು ನೆಲ ಮತ್ತು ಬೆಟ್ಟಗುಡ್ಡಗಳಿಂದ ಕೂಡಿರುವ ನಾಗಮಂಗಲದಲ್ಲಿ ಆದಿ ಚುಂಚನಗಿರಿ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದೆ.

ಈ ತಾಲ್ಲೂಕಿನ ಬೆಳ್ಳೂರಿನಲ್ಲಿ ಹೊಯ್ಸಳರ ಕಾಲದ ಗೌರೇಶ್ವರ, ಮೂಲೆ ಸಿಂಗೇಶ್ವರ ಮತ್ತು ಮಾಧವರಾಯ ದೇವಾಲಯಗಳಿವೆ. ಬಿಂಡಿಗನವಿಲೆಯಲ್ಲಿ ಚನ್ನಕೇಶವ ದೇವಾಲಯವಿದೆ. ಆದಿಚುಂಚನಗಿರಿ ಒಂದು ಪುಣ್ಯಕ್ಷೇತ್ರ. ಕಂಬದಹಳ್ಳಿಯಲ್ಲಿ ಗಂಗರ ಕಾಲದ ವಾಸ್ತು ಕಲೆಗಳಿವೆ. ನಾಗಮಂಗಲ ಮತ್ತು ಕೃಷ್ಣರಾಜಪೇಟೆ ತಾಲೂಕಿನ ಗಡಿ ಗ್ರಾಮವಾದ ಸಣ್ಣೇನಹಳ್ಳಿಯಲ್ಲಿ ಮಹದೇಶ್ವರ ಹಾಗು ಬಸವೇಶ್ವರ ದೇವಾಲಯಗಳಿದ್ದು ಇಲ್ಲಿ ಪ್ರತಿ ದೀಪಾವಳಿಯ ಸಮಯದಲ್ಲಿ ದನಗಳ ಜಾತ್ರೆಯ ಜೊತೆಗೆ ಮಹದೇಶ್ವರ ಸ್ವಾಮಿಯ ಹುಲಿವಾಹನೋತ್ಸವ ನೆರವೇರುತ್ತದೆ. ಇದು ಜೈನ ಕ್ಷೇತ್ರ. ಇಲ್ಲಿ ಸುಮಾರು 15 ಮೀ. ಎತ್ತರದ ಬ್ರಹ್ಮದೇವ ಕಂಬವಿದೆ ಹೀಗೆ ಅತ್ಯಂತ ವರ್ಣರಂಜಿತ ಕ್ಷೇತ್ರವಾಗಿರುವ ನಾಗಮಂಗಲ ಐತಿಹಾಸಿಕವಾಗಿಯೂ ಮಹತ್ವ ಪಡೆದುಕೊಂಡಿದೆ.
ಶಿಂಷಾ, ಲೋಕಪಾವನಿ, ಹೇಮಾವತಿ ನದಿ ಹಾಗೂ ಕೆಲವು ಕೆರೆಗಳು ಕ್ಷೇತ್ರದ ನೀರಿನ ಮೂಲಗಳಾಗಿದ್ದು, ಕೃಷಿ ಹೈನುಗಾರಿಕೆ ಇಲ್ಲಿನ ಕಸುಬುಗಳಾಗಿವೆ. ಮಂಡ್ಯ ಜಿಲ್ಲೆಯಲ್ಲೇ ಅತ್ಯಂತ ದೊಡ್ಡ ವಿಧಾನಸಭಾ ಕ್ಷೇತ್ರ ನಾಗಮಂಗಲದ ರಾಜಕೀಯ ವಿಶ್ಲೇಷಣೆ ಇಲ್ಲಿದೆ.
ನಾಗಮಂಗಲ ಕ್ಷೇತ್ರದ ರಾಜಕೀಯ ಹಿನ್ನೆಲೆ
1952ರಿಂದ ಸಾಮಾನ್ಯ ಕ್ಷೇತ್ರವಾಗಿರುವ ನಾಗಮಂಗಲ ವಿಧಾನಸಭೆ ಕ್ಷೇತ್ರ ಎರಡು ಬಾರಿ ಹಿಂದುಳಿದ ವರ್ಗಕ್ಕೆ ಸೇರಿದ ಕುರುಬ ಸಮುದಾಯದ ವ್ಯಕ್ತಿಗಳನ್ನ ಶಾಸಕರನ್ನಾಗಿ ಮಾಡಿದೆ. ಮೂರು ಉಪ ಚುನಾವಣೆಗಳು ಹಾಗೂ 15 ಸಾರ್ವತ್ರಿಕ ಚುನಾವಣೆಗಳನ್ನು ಕಂಡಿರುವ ಈ ಕ್ಷೇತ್ರದಲ್ಲಿ 9 ನಾಯಕರು ಅಧಿಕಾರ ನಡೆಸಿದ್ದಾರೆ. 1952ರಿಂದ 1999ರವರೆಗೆ ಎಂ. ಶಂಕರಲಿಂಗೇಗೌಡ ನಾಗಮಂಗಲ ಕ್ಷೇತ್ರದ ಮೊದಲ ಶಾಸಕರಾಗಿದ್ದಾರೆ. ಕೆ. ಸಿಂಗಾರಿಗೌಡ,ಟಿ. ಮರಿಯಪ್ಪ , ಟಿ.ಎನ್. ಮಾದಪ್ಪಗೌಡ , ಹೆಚ್.ಟಿ. ಕೃಷ್ಣಪ್ಪ, ಚಿಗರೀಗೌಡ, ಎಲ್.ಆರ್.ಎನ್. ಚಲುವರಾಯಸ್ವಾಮಿ ಶಿವರಾಮೇಗೌಡ ಕ್ಷೇತ್ರದ ಶಾಸಕರಾಗಿದ್ದಾರೆ.

2004ರಲ್ಲಿ ಎರಡನೇ ಬಾರಿಗೆ ಎನ್. ಚಲುವರಾಯಸ್ವಾಮಿ ಜೆಡಿಎಸ್ ನಿಂದ ಆಯ್ಕೆಯಾಗುತ್ತಾರೆ. 2008ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ಗೌಡ ಕ್ಷೇತ್ರದ ಶಾಸಕರಾಗುತ್ತಾರೆ. 2013ರ ಚುನಾವಣೆಯಲ್ಲಿ ಎನ್. ಚಲುವರಾಯಸ್ವಾಮಿ ಹಾಗೂ 2018ರ ಚುನಾವಣೆಯಲ್ಲಿ ಸುರೇಶ್ಗೌಡ ಜೆಡಿಎಸ್ನಿಂದ ಸ್ಪರ್ಧೆ ಮಾಡಿ ಶಾಸಕರಾಗಿ ಆಯ್ಕೆಯಾಗುತ್ತಾರೆ
ನಾಗಮಂಗಲ ಕ್ಷೇತ್ರದ ಪ್ರಸ್ತುತ ರಾಜಕರಣ
ನಾಗಮಂಗಲದಲ್ಲಿ ಬಹುತೇಕರು ಪಕ್ಷೇತರರಾಗಿ ಗೆಲುವು ಸಾಧಿಸಿದ್ದಾರೆ. ಸದ್ಯ ಕ್ಷೇತ್ರದ ರಾಜಕೀಯ ಚಿತ್ರಣ ಮತ್ತೆ ಬದಲಾಗಿದೆ. ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಎಐಸಿಸಿ ಸದಸ್ಯರಾಗಿರುವ ಎನ್.ಚಲುವರಾಯಸ್ವಾಮಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು,ಜೆಡಿಎಸ್ನ ಅಭ್ಯರ್ಥಿಯಾಗಿ ಹಾಲಿ ಶಾಸಕ ಸುರೇಶ್ಗೌಡ ಅವರ ಹೆಸರು ಘೋಷಣೆಯಾಗಿದೆ.

ಇನ್ನು ಜೆಡಿಎಸ್ನಲ್ಲಿದ್ದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಪಕ್ಷದಿಂದ ಉಚ್ಚಾಟನೆಗೊಂಡು ಸ್ವಾಭಿಮಾನಿ ಪರ್ವ ಆರಂಭಿಸಿದ್ದಾರೆ. ಇನ್ನು ಬಿಜೆಪಿಯಿಂದ ಇತ್ತೀಚಿಗೆ ಪಕ್ಷ ಸೇರ್ಪಡೆಗೊಂಡ ಶಾಸಕ ಸುರೇಶ್ಗೌಡರ ಮಾಜಿ ಆಪ್ತ ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿ ಅಖಾಡಕ್ಕೆ ಬರಲು ಸಿದ್ಧತೆ ನಡೆಸಿದ್ದು, ಸದ್ಯ ಈ ವಿಚಾರದಿಂದ ಪಕ್ಷ ಹಿಂದೆ ಸರಿದಿದೆ. ಹೀಗಾಗಿ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ಆರಂಭಿಸಿದೆ.
2018 ನಾಗಮಂಗಲ ವಿಧಾನಸಭಾ ಚುನಾವಣಾ ಫಲಿತಾಂಶ
2018 ಚುನಾವಣೆಯಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಸುರೇಶ್ ಗೌಡ ಕಣಕ್ಕಳಿದಿದ್ದು, 112,396 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ.ಚಲುವರಾಯಸ್ವಾಮಿ 64,729 ಮತಗಳನ್ನು ಪಡೆದು 47,667 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು.
Nagamangala Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಸುರೇಶ್ ಗೌಡ(ಜೆಡಿಎಸ್) | 112,396 | ಚೆಲುವರಾಯಸ್ವಾಮಿ(ಕಾಂಗ್ರೆಸ್) | 64,729 |
| 2013 | ಎನ್. ಚಲುವರಾಯಸ್ವಾಮಿ (ಜೆಡಿಎಸ್) | 89,203 | ಸುರೇಶ್ ಗೌಡ (ಕಾಂಗ್ರೆಸ್) | 68,840 |
| 2008 | ಸುರೇಶ್ ಗೌಡ (ಕಾಂಗ್ರೆಸ್) | 69,259 | ಎನ್. ಚಲುವರಾಯಸ್ವಾಮಿ (ಜೆಡಿಎಸ್) | 63,766 |
ನಾಗಮಂಗಲ ಕ್ಷೇತ್ರದ ಮತದಾರರ ವಿವರ
ನಾಗಮಂಗಲ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ 1 ಲಕ್ಷ 18 ಸಾವಿರದಷ್ಟು ಒಕ್ಕಲಿಗ ಮತದಾರರಿದ್ದಾರೆ. 36 ಸಾವಿರ ದಲಿತ ಮತದಾರರಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ಜಾತಿ ಧರ್ಮದ ಆಧಾರದಲ್ಲಿ ಗೆಲುವು ನಿರ್ಧರಿಸಲು ಸಾಧ್ಯವಿಲ್ಲ ಯಾಕೆಂದರೆ. ನಾಗಮಂಗಲ ಕ್ಷೇತ್ರದ ಮತದಾರರ ಮನದಾಳವನ್ನ ಅರಿಯಲು ಸಾಧ್ಯವಾಗಿಲ್ಲ. ಪ್ರತಿ ಚುನಾವಣೆಯಲ್ಲೂ ಕ್ಷೇತ್ರದ ಜನ ಅಚ್ಚರಿಯ ಫಲಿತಾಂಶಗಳನ್ನೇ ನೀಡಿದ್ದಾರೆ.
ಜಾತಿವಾರು ಮತದಾರರ ವಿವರ
ಒಕ್ಕಲಿಗರು- 1,18,000
ಪರಿಶಿಷ್ಟರು- 36,000
ಕುರುಬರು- 23,000
ಮುಸ್ಲಿಂ -10,000
ಲಿಂಗಾಯಿತರು- 3,000
ವಿಶ್ವಕರ್ಮ- 5,000
ಇತರರು- 18,000
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications