ವಿಡಿಯೋ: ಕಬಿನಿಯಲ್ಲಿ ಆನೆ ದಾಳಿ- ಕೂದಲೆಳೆ ಅಂತರದಲ್ಲಿ ಜೀಪ್ ಪಾರು
ಮೈಸೂರು ಸೆಪ್ಟೆಂಬರ್ 9: ಕಬಿನಿ ಸಫಾರಿ ವೇಳೆ ಆನೆಯೊಂದು ಜೀಪ್ ಮೇಲೆ ದಾಳಿಗೆ ಮುಂದಾದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆನೆ ದಾಳಿಗೆ ಹೆದರಿ ಜೀಪ್ ಚಾಲಕ ಹಿಂಬದಿಯಾಗಿ ಜೀಪ್ ಚಲಾಯಿಸಿದ್ದಾನೆ. ಆನೆ ವೇಗದಲ್ಲಿಯೇ ಹಿಂಬದಿಯಲ್ಲಿ ಜೀಪ್ ಚಲಾಯಿಸಿದ್ದರಿಂದ ಕೊಂಚ ದೂರ ಓಡಿಬಂದ ಆನೆ ವಾಪಸ್ ಹೋಗಿದೆ. ಕೋಪಗೊಂಡ ಆನೆಯಿಂದ ಕೂದಳೆಲೆಯಲ್ಲಿ ಅಂತರದಲ್ಲಿ ಜೀಪ್ ಪಾರಾಗಿದೆ. ಆನೆಯ ಓಟದಲ್ಲಿ ಕೊಂಚ ವೇಗ ಪಡೆದುಕೊಂಡಿದ್ದರು ಅಥವಾ ಜೀಪ್ನ ವೇಗ ಕಡಿಮೆಯಾಗಿದ್ದರೂ ಸಹ ಅಪಾಯ ಕಟ್ಟಿಟ್ಟಬುತ್ತಿಯಾಗಿತ್ತು. ಅದೃಷ್ಟವಶಾತ್ ಆನೆ ಕೊಂಚ ದೂರ ಓಡಿ ವಾಪಾಸ್ ಹೋಗಿದೆ. ಜೀಪಿನಲ್ಲಿದ್ದ ಪ್ರಯಾಣಿಕರು ಕ್ಯಾಮರಾದಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗಿದ್ದು ಭೀತಿ ಹುಟ್ಟಿಸುವಂತಿದೆ.
ಆನೆಗೆ ಕೋಪ ಬಂದರೆ ಅದು ಬಿಡುವ ಮಾತಿಲ್ಲ. ಅದರ ದಾಳಿಗೆ ಸಿಕ್ಕರೆ ಉಳಿಸುವ ಮಾತೇ ಇಲ್ಲ. ಹೀಗಾಗಿ ಆನೆಯ ಕೋಪಕ್ಕೆ ಗುರಿಯಾಗಲು ಯಾರೂ ಬಯಸುವುದಿಲ್ಲ. ಆದರೂ ಕೆಲವೊಂದು ಬಾರಿ ಪ್ರಯಾಣಿಕರ ಹಿಂಸೆಯಿಂದಲೂ, ವಾಹನಗಳ ಕಿರಿಕಿರಿಗೂ ಆನೆಗಳು ಕೋಪಗೊಂಡುಬಿಡುತ್ತವೆ. ಇಂತಹ ಹಲವಾರು ದೃಶ್ಯಗಳು, ಪ್ರಾಣಕ್ಕೆ ಕುತ್ತು ತಂದ ಘಟನೆಗಳು ಸಂಭವಿಸಿರುವುದು ಇದೆ.
ಕಬಿನಿ ಹಿನ್ನೀರು ಅರಣ್ಯ ಸಫಾರಿಯು ಕಬಿನಿ ನದಿಯಲ್ಲಿ ಅರಣ್ಯ ಸಂಚಾರಿ ಅನುಭವ ನೀಡುತ್ತದೆ. ಇಲ್ಲಿ ಕರ್ನಾಟಕ ಅರಣ್ಯ ಇಲಾಖೆ ಎರಡು ತರಹದ ಸಫಾರಿಗಳನ್ನು ನಡೆಸುತ್ತದೆ. ಒಂದು- ಜೀಪ್ ಸಫಾರಿ ಹಾಗೂ ಎರಡು - ಕಬಿನಿ ನದಿಯಲ್ಲಿ ದೋಣಿ ಸಫಾರಿ. ದೋಣಿ ಸಫಾರಿಯ ಅವಧಿ 90 ನಿಮಿಷದ್ದಾಗಿದೆ ಹಾಗೂ ಪ್ರವಾಸಿಗರು ಆನೆಗಳು ನದಿಯ ದಡದಲ್ಲಿ ಮಣ್ಣಿನ ಸ್ನಾನ ಮಾಡುವುದನ್ನು ನೋಡಬಹುದು, ಅಪರೂಪದ ಪಕ್ಷಿಗಳಾದ - ಕಾರ್ಮೋರಂಟ್, ಕೊಕ್ಕರೆಗಳನ್ನು, ಡಾರ್ಟರ್ಗಳನ್ನು ಜೊತೆಗೆ ಮೊಸಳೆ ಹಾಗೂ ಹಾವುಗಳನ್ನು ನದಿ ದಡದಲ್ಲಿ ಕಾಣಬಹುದು.

ಇನ್ನೂ ಜೀಪ್ ಸಫಾರಿ ಕೂಡ ಕಾಡಾನೆ ಆನೆ, ಜಿಂಕೆ ಹಾಗೂ ಇನ್ನಿತರ ಪ್ರಾಣಿಗಳನ್ನು ನೋಡಲು ಅದ್ಬುತ ಅನುಭವವನ್ನು ನೀಡುತ್ತದೆ. ರೋಮಾಂಚಕಾರಿ ಅನುಭವವನ್ನು ಪಡೆಯಲು ಬಹುತೇಕರು ಕ್ಯಾಂಪಿಂಗ್, ಟ್ರೆಕ್ಕಿಂಗ್, ಪ್ಯಾರಾಗ್ಲೈಡಿಂಗ್, ಬಂಗೀ ಜಂಪಿಂಗ್ನಂತಹ ಹಲವಾರು ಚಟುವಟಿಕೆಗಳನ್ನು ಕೈಗೊಳ್ಳುತ್ತಿರುತ್ತಾರೆ. ಅವುಗಳಲ್ಲಿ ಕಬಿನಿ ಸಫಾರಿ ಕೂಡ ಒಂದು.
OMG ! This looks scary 😳
— Visit Udupi 🇮🇳 (@VisitUdupi) September 8, 2022
📍Kabini, Nagarahole National Park, Karnataka, India 🇮🇳
©️ @BoskyKhannapic.twitter.com/TcU6NNlQJj
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications