ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು : ಹುಲಿದಾಳಿಗೆ ಕುರಿಗಾಹಿ ಬಲಿ

|
Google Oneindia Kannada News

ಮೈಸೂರು, ಡಿ. 5 : ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲೂಕಿನಲ್ಲಿ ಹುಲಿ ದಾಳಿಗೆ ಕುರಿಗಾಹಿಯೊಬ್ಬ ಬಲಿಯಾಗಿದ್ದಾನೆ. ಮೇಟಿಕುಪ್ಪ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ವ್ಯಕ್ತಿಯ ಶವ ಪತ್ತೆಯಾಗಿದ್ದು, ಹುಲಿ ಆತನನ್ನು ಕೊಂದು ಹಾಕಿದೆ.

ಹುಲಿ ದಾಳಿಗೆ ಬಲಿಯಾದ ವ್ಯಕ್ತಿಯನ್ನು ಸೊಳ್ಳೆಪುರ ಹಾಡಿಯ ಮುನಿನಾಯ್ಕ್ (30) ಎಂದು ಗುರುತಿಸಲಾಗಿದೆ. 20 ದಿನಗಳ ಹಿಂದೆ ಕುರಿಗಳನ್ನು ಮೇಯಿಸಲು ಹೋಗಿದ್ದ ಮುನಿನಾಯ್ಕ್ ಕಾಣೆಯಾಗಿದ್ದ. ಎರಡು ದಿನ ಆತನನ್ನು ಹುಡುಕಿದ ಗ್ರಾಮಸ್ಥರು, ಪ್ರಾಣಿಗೆ ಬಲಿಯಾಗಿರಬಹುದೆಂದು ಶಂಕಿಸಿದ್ದರು.

Mysuru

ಶುಕ್ರವಾರ ಬೆಳಗ್ಗೆ ಬಂಡೀಪುರ ಹುಲಿ ರಕ್ಷಿತಾರಣ್ಯಕ್ಕೆ ಸಮೀಪವಿರುವ ಮೇಟಿಕುಪ್ಪ ಕಾಡಿನಲ್ಲಿ ಗ್ರಾಮಸ್ಥರಿಗೆ ರುಂಡ ಮತ್ತು ಮುಂಡ ಬೇರೆಯಾಗಿರುವ ಮೃತದೇಹ ಪತ್ತೆಯಾಗಿದೆ. ಭುಜ, ಹೊಟ್ಟೆಯ ಭಾಗವನ್ನು ಹುಲಿ ತಿಂದು ಹಾಕಿದ್ದು, ಇದು ಮುನಿನಾಯ್ಕ್ ಶವ ಎಂದು ಹಾಡಿಯ ಜನ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. [ಮತ್ತೆ ಕರಡಿ ದಾಳಿ : ಹಾಸನದಲ್ಲಿ ರೈತ ಬಲಿ]

ಮೇಟಿಕುಪ್ಪ ಕಾಡಿನ ಅಂಚಿನಲ್ಲಿ ಹುಲಿ ಇರಬಹುದು ಎಂದು ಹಾಡಿಯ ಜನರು ಆತಂಕಗೊಂಡಿದ್ದು, ಹುಲಿಯನ್ನು ಸೆರೆ ಹಿಡಿಯಿರಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾಡಿಯ ಜನರು ಮನವಿ ಮಾಡಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದರು, ಪರಿಶೀಲನೆ ಮುಂದುವರೆದಿದೆ.[ಮೈಸೂರಿನಲ್ಲಿ ಅಮೃತ, ಶಿವನನ್ನು ನೋಡಿ ಬನ್ನಿ]

ಕೆಲವು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಹುಲಿ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿದ್ದರು. ನಂತರ ಹುಲಿಯನ್ನು ಸೆರೆ ಹಿಡಿಯಲಾಗಿತ್ತು. [ಚಿಕ್ಕಮಗಳೂರು : ಹುಲಿ ದಾಳಿಗೆ ಮಹಿಳೆ ಬಲಿ]

ಇತ್ತೀಚೆಗೆ ಪ್ರಾಣಿಗಳ ದಾಳಿಗೆ ಬಲಿಯಾದವರು

* ನ.15ರಂದು ಚಿಕ್ಕಮಗಳೂರಿನಲ್ಲಿ ಹುಲಿ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು.
* ನ.18ರಂದು ಮಧುಗಿರಿ ತಾಲೂಕಿನಲ್ಲಿ ರೈತರ ಮೇಲೆ ಕರಡಿ ದಾಳಿ ಮಾಡಿ ಒಬ್ಬರನ್ನು ಕೊಂದು ಹಾಕಿತ್ತು.
* ನ.27ರಂದು ಚಾಮರಾಜನಗರದಲ್ಲಿ ಚಿರತೆ ದಾಳಿಗೆ ಟೆಂಪೋ ಕ್ಲೀನರ್‌ ಬಲಿಯಾಗಿದ್ದ.

English summary
Tiger Killed man in the Metikuppa forests in the H.D.Kote taluk of Mysuru district. Victim identified as Muninayak (30). Metikuppa forest near for Bandipur Tiger Reserve.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X