ನಮಗೆ ಬಿಜೆಪಿಯವರು ವಿರೋಧಿಗಳು, ಸುಮಲತಾ ಅಲ್ಲ:ಸಿದ್ದರಾಮಯ್ಯ
Recommended Video

ಮೈಸೂರು, ಏಪ್ರಿಲ್ 14:ನಮ್ಮ ಚುನಾವಣೆಯ ಟಾರ್ಗೆಟ್ ಮೋದಿ ಸೋಲಿಸುವುದಲ್ಲ. ಕೋಮುವಾದಿ ಬಿಜೆಪಿಯನ್ನು ಮಣಿಸುವುದು. ಸುಳ್ಳು ಹೇಳುವ ಮೋದಿಯ ಬಗ್ಗೆ ಏನು ಕೇಳಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಮೈಸೂರಿನ ಚಾಮುಂಡೇಶ್ವರಿಯಲ್ಲಿ ನಡೆದ ಪಕ್ಷದ ಪ್ರಚಾರದ ವೇಳೆ ಮಾತನಾಡಿದ ಅವರು, ನಾನು ದೇವೇಗೌಡರು ಜೊತೆಯಾದ ಮೇಲೆ ಪರಿಸ್ಥಿತಿ ಉತ್ತಮವಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಒಳ್ಳೆಯ ಫಲಿತಾಂಶ ಬರುತ್ತದೆ ಎಂದರು.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದೆ, ನಾವೇ 82, ಜೆಡಿಎಸ್ 37 ಸ್ಥಾನ ಗೆದ್ದಿದ್ದರು. ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಅಂತ ಮೈತ್ರಿ ಮಾಡಿಕೊಂಡಿದ್ದೇವೆ. ಬಿಜೆಪಿಯವರು ಜಾತಿ, ಧರ್ಮದ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದ್ದಾರೆ. ಅವರು ಬಡವರ ಬಗ್ಗೆ, ರೈತರ ಬಗ್ಗೆ, ಮಹಿಳೆಯರ ಬಗ್ಗೆ ಮಾತಾನಾಡೋಲ್ಲ. ನಮಗೆ ಬಿಜೆಪಿ, ಪ್ರತಾಪ್ ಸಿಂಹ ವಿರೋಧಿಗಳು. ಮಂಡ್ಯದಲ್ಲಿ ಸುಮಲತಾ ನಮ್ಮ ವಿರೋಧಿ ಅಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ನಾನು ಜಿ.ಟಿ. ದೇವೇಗೌಡ ರಾಜಕೀಯವಾಗಿ ಒಂದಾಗಿದ್ದೇವೆ. ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಸುಳ್ಳು ಹೇಳಿಲ್ಲ. ಹಾಗೇನಾದ್ರೂ ಹೇಳಿದ್ರೆ ರಾಜಕೀಯದಲ್ಲಿ ಇರಲ್ಲ ಅಂತ ಸಿದ್ದರಾಮಯ್ಯ ಘೋಷಿಸಿಕೊಂಡರು.
ಎಲ್ಲಾದ್ರೂ ಸರಿ ಮೋದಿ ಬಹಿರಂಗ ಚರ್ಚೆಗೆ ಬರಲಿ, ನಾನು ಸಿದ್ಧ. ಮೋದಿ ಸಂಸತ್ಗೂ ಬರಲ್ಲ, ಮಾಧ್ಯಮಗಳ ಕೈಗೂ ಸಿಗಲ್ಲ, ಪುಕ್ಕಲ ಎಂದ ಸಿದ್ದರಾಮಯ್ಯ ನಾನು ಇನ್ನು ಮುಂದೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದರು.












Click it and Unblock the Notifications