ಓಪನ್ ಸ್ಟ್ರೀಟ್ ಫೆಸ್ಟಿವಲ್ನಲ್ಲಿ ಯುವತಿಯರಿಗೆ ಕಿರುಕುಳವಾಗಿಲ್ಲ:ಸುಬ್ರಹ್ಮಣ್ಯೇಶ್ವರರಾವ್
Recommended Video

ಮೈಸೂರು, ಅಕ್ಟೋಬರ್. 16: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಕಳೆದ ಶನಿವಾರವಷ್ಟೇ ಏರ್ಪಡಿಸಿದ್ದ ಓಪನ್ ಸ್ಟ್ರೀಟ್ ಫೆಸ್ಟಿವಲ್ನಲ್ಲಿ ಯುವತಿಯರಿಗೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರರಾವ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಓಪನ್ ಸ್ಟ್ರೀಟ್ ಫೆಸ್ಟಿವಲ್ ನಲ್ಲಿ ಯುವತಿಯರಿಗೆ ಕಿರುಕುಳ ಘಟನೆಗಳು ನಡೆದಿಲ್ಲ. ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಕಿರುಕುಳ ನಡೆದಿರುವ ಬಗ್ಗೆ ಕೆಲ ಯುವತಿಯರು ಆರೋಪಿಸಿದ್ದರು. ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಇದುವರೆಗೂ ಯಾರೊಬ್ಬರೂ ದೂರು ನೀಡಿಲ್ಲ ಎಂದರು.
ಈಗಾಗಲೇ ಓಪನ್ ಸ್ಟ್ರೀಟ್ ಫೆಸ್ಟಿವಲ್ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಫುಟೇಜ್ ಪರಿಶೀಲಿಸಿದ್ದೇವೆ. ತೊಂದರೆಯಾದಂತಹ ಯಾವುದೇ ಘಟನೆಗಳು ನಮಗೆ ಗೋಚರಿಸಿಲ್ಲ.

ಹಾಗೇನಾದರೂ ಘಟನೆ ನೀವು ಅನುಭವಿಸಿದ್ದಲ್ಲಿ ತಕ್ಷಣ ಯುವತಿಯರು ನಮ್ಮನ್ನು ಸಂಪರ್ಕಿಸಿ ಆರೋಪಿಗಳನ್ನು ಗುರುತಿಸಿದರೆ ಅನುಕೂಲವಾಗುತ್ತದೆ. ಅಗತ್ಯವಿದ್ದರೆ ಕಿರುಕುಳ ಅನುಭವಿಸಿದ ಯುವತಿಯರ ಮಾಹಿತಿ ಗೌಪ್ಯವಾಗಿ ಇಡಲಾಗುವುದು. ದೂರು ನೀಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಇನ್ನು ದಸರಾ ಹಿನ್ನೆಲೆಯಲ್ಲಿ ಸುರಕ್ಷತೆ, ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲ ಕ್ರಮಗಳನ್ನೂ ಕೈಗೊಂಡಿದ್ದೇವೆ. ರೌಡಿ ಶೀಟರ್ ಗಳ ಮೇಲೆ ನಿಗಾ ಇಡಲಾಗಿದೆ. ದಸರಾ ಮಹೋತ್ಸವಕ್ಕೆ ಇದುವರೆಗೂ ಯಾರಿಂದಲೂ ಬೆದರಿಕೆ ಇಲ್ಲ. ನಿಶ್ಚಿಂತೆಯಿಂದ ದಸರಾ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.












Click it and Unblock the Notifications