ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂದವರ ತಾಳ್ಮೆಗೆಡಿಸಬೇಡಿ ಎಂದು ಗರಂ ಆದ ಶ್ರೀನಿವಾಸ್ ಪ್ರಸಾದ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 30: ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದು ಒಂದೆಡೆಯಾದರೆ, ಸಚಿವ ಸ್ಥಾನದ ಕುರಿತು ಹಲವು ಹೇಳಿಕೆಗಳು ವ್ಯಕ್ತವಾಗುತ್ತಿರುವುದು ಮತ್ತೊಂದೆಡೆ. ಈ ಕುರಿತು ಪ್ರತಿಕ್ರಿಯಿಸಿರುವ ಸಂಸದ ಶ್ರೀನಿವಾಸ್ ಪ್ರಸಾದ್, "ಬಂದವರ ತಾಳ್ಮೆ ಪರೀಕ್ಷೆ ಮಾಡಬೇಡಿ. ಬೇಗ ಸಚಿವ ಸಂಪುಟ ವಿಸ್ತರಣೆ ಮಾಡಿ, ಒಳ್ಳೆಯ ಆಡಳಿತ ಕೊಡಿ" ಎಂದು ಆಗ್ರಹಿಸಿದ್ದಾರೆ.

"ಪಕ್ಷ ಬಿಟ್ಟು ಬಂದ ಶಾಸಕರು ಇನ್ನೆಷ್ಟು ದಿನ ಕಾಯ್ತಾರೆ? ಪಾಪ, 17 ಜನರು ನಮ್ಮ ಪಕ್ಷಕ್ಕೆ ಬಂದು ಸರ್ಕಾರ ರಚನೆಗೆ ಕಾರಣ ಆಗಿದ್ದಾರೆ. ಅವರಿಗೆ ಸ್ಥಾನಮಾನ ‌ಕೊಡುವುದು ಪಕ್ಷದ ಜವಾಬ್ದಾರಿ. ಪಕ್ಷಾಂತರಿ ಶಾಸಕರ ಜತೆ ಮಾತನಾಡಿರೋದು ಮುಖ್ಯಮಂತ್ರಿ. ಭರವಸೆ ಕೊಟ್ಟಿರೋದು ಸಿಎಂ ಅವರೇ‌. ಹಾಗಾಗಿ ಸಿಎಂ ಹೈಕಮಾಂಡ್ ಜತೆ ಮಾತನಾಡಲಿ. ಅವರು ಕೊಟ್ಟ ಭರವಸೆ ಬಗ್ಗೆ ಹೈಕಮಾಂಡ್ ‌ಗೆ ಮನವರಿಕೆ ಮಾಡಿಕೊಡಲಿ" ಎಂದು ಹೇಳಿದ್ದಾರೆ.

Srinivas Prasad Statement On Cabinet Expansion

 ಶೀಘ್ರವೇ ಎರಡನೇ ಹಂತದ ಪರಿಹಾರ ಗ್ಯಾರಂಟಿ; ಶ್ರೀನಿವಾಸ್ ಪ್ರಸಾದ್ ಶೀಘ್ರವೇ ಎರಡನೇ ಹಂತದ ಪರಿಹಾರ ಗ್ಯಾರಂಟಿ; ಶ್ರೀನಿವಾಸ್ ಪ್ರಸಾದ್

"ಯಾರು ಯಾರಿಗೆ ಯಾವ ರೀತಿ ಮಾತು ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ. ವಿಶ್ವನಾಥ್ ಆಗಲಿ‌, ಇನ್ನೊಬ್ಬರ ಬಗ್ಗೆ ಆಗಲಿ ನಾನು ಮಾತನಾಡಲ್ಲ. ಬಂದ ಎಲ್ಲರಿಗೂ ಯಡಿಯೂರಪ್ಪ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿ" ಎಂದಿರುವ ಅವರು, "ಸಂಪುಟ ವಿಸ್ತರಣೆ ತಡವಾದರೆ ಏನೂ ಆಗಲ್ಲ. ಆ ಬಗ್ಗೆ ಇನ್ನೇನು ಹೇಳುವುದಿಲ್ಲ‌" ಎಂದು ಹೇಳಿದ್ದಾರೆ.

English summary
"Dont test the patience of party members. Expand the cabinet and give good governance" said MP Srinivas Prasad in mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X