ಸೂರ್ಯಗ್ರಹಣ; ಅಕ್ಟೋಬರ್ 25ರಂದು ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧ
ಮೈಸೂರು, ಅಕ್ಟೋಬರ್, 24: ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಚಾಮುಂಡಿ ಬೆಟ್ಟಕ್ಕೆ ದೂರದ ಊರುಗಳಿಂದ ಸಾಕಷ್ಟು ಭಕ್ತರು ಹರಿದುಬರುತ್ತಾರೆ. ಆದರೆ ಅಕ್ಟೋಬರ್ 25ರಂದು ಸೂರ್ಯ ಗ್ರಹಣ ಇರುವುದರಿಂದ ಈ ಬಾರಿ ಭಕ್ತರಿಗೆ ದರ್ಶನ ಸಮಯದಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ.
ರಾಜ್ಯದ ಎಲ್ಲೆಡೆ ದೀಪಾವಳಿ ಸಂಭ್ರಮ ಮನೆಮಾಡಿದೆ. ಮಾರುಕಟ್ಟೆಯಲ್ಲಿ ಹೂ-ಹಣ್ಣು ಹಾಗೂ ಪಟಾಕಿ ಖರೀದಿ ಭರಾಟೆಯೂ ಜೋರಾಗಿದೆ. ಈ ಬಾರಿ ಹಬ್ಬದ ಜೊತೆಗೆ ಗ್ರಹಣವೂ ಬಂದಿದೆ. ಹಾಗಾಗಿ ಚಾಮುಂಡಿ ಬೆಟ್ಟದಲ್ಲಿ ಅಕ್ಟೋಬರ್ 25ರಂದು ವಿಶೇಷ ಪೂಜೆ ನಡೆಯಲಿದೆ. ಗ್ರಹಣದ ಪೂಜೆ ನಂತರ ಮಧ್ಯಾಹ್ನ 1 ಗಂಟೆ ಬಳಿಕ ದೇವಾಲಯಕ್ಕೆ ಭಕ್ತರ ಪ್ರವೇಶ ನಿಷೇಧಿಸಿಗೊಳಿಸಿದೆ. ಹಬ್ಬದ ಹಿನ್ನೆಲೆಯಲ್ಲಿ ಸಾಲು ಸಾಲು ಸರ್ಕಾರಿ ರಜೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರಿನ ಕಡೆ ಮುಖ ಮಾಡಿದ್ದಾರೆ. ಗುರುವಾರದವರಗೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಪ್ರವಾಸಿಗರು ಮುಂದಾಗಿದ್ದಾರೆ. ದಸರೆ ನಂತರ ಮೈಸೂರು ಮತ್ತೆ ಪ್ರವಾಸಿಗರಿಂದ ತುಂಬು ತುಳುಕುತ್ತಿದೆ. ದಸರಾ ಮುಗಿದರೂ ಕೂಡ ಮೈಸೂರಿಗೆ ಇನ್ನು ಪ್ರವಾಸಿಗರು ಕಿಕ್ಕಿರಿದು ಬರುತ್ತಲೇ ಇದ್ದಾರೆ.
ಕರಾವಳಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೋಸ್ಕರ ದೀಪಾವಳಿ ಆಚರಣೆ
ಚಾಮುಂಡಿ
ಬೆಟ್ಟಕ್ಕೆ
ಭಕ್ತರ
ಪ್ರವೇಶ
ನಿಷೇಧ
ಅಕ್ಟೋಬರ್
25ರಂದು
ಸೂರ್ಯಗ್ರಹಣ
ಇರುವುದರಿಂದ
ಅನೇಕ
ಜಿಲ್ಲೆಗಳ
ದೇವಾಸ್ಥಾನಗಳಲ್ಲಿ
ಭಕ್ತರಿಗೆ
ಪ್ರವೇಶಕ್ಕೆ
ನಿರ್ಬಂಧ
ಹೇರಲಾಗಿದೆ.
ಅದರಂತೆಯೇ
ಸಾಂಸ್ಕೃತಿಕ
ನಗರಿ
ಮೈಸೂರಿನಲ್ಲೂ
ಕೂಡ
ಚಾಮುಂಡೇಶ್ವರಿ
ತಾಯಿಯ
ದೇವಿ
ದರ್ಶನಕ್ಕೆ
ಭಕ್ತರಿಗೆ
ನಿರ್ಬಂಧ
ಹೇರಲಾಗಿದೆ.
ದೀಪಾವಳಿ
ಹಬ್ಬ
ಬಂತೆಂದರೆ
ಸಾಕು
ತಾಯಿ
ಚಾಮುಂಡಿ
ದರ್ಶನ
ಪಡೆಯಲು
ರಾಜ್ಯದ
ವಿವಿಧ
ಮೂಲೆಗಳಿಂದ
ಭಕ್ತರು
ಆಗಮಿಸುತ್ತಾರೆ.
ಆದರೆ
ಈ
ಬಾರಿ
ದೀಪಾವಳಿ
ಹಬ್ಬದ
ದಿನದಂದೇ
ಸೂರ್ಯಗ್ರಹಣ
ಬಂದಿರುವುದರಿಂದ
ಪ್ರವಾಸಿಗರಿಗೆ
ನಿರ್ಬಂಧ
ಹೇರಲಾಗಿದೆ.