ದಸರಾ ದೀಪಾಲಂಕಾರ ತೆರವುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ
ಮೈಸೂರು, ಅಕ್ಟೋಬರ್ 14: ಸಾಂಕೇತಿಕ ದಸರಾ ಆಚರಣೆ ನಡೆಸಿ, ದೀಪಾಲಂಕಾರ ತೆರವುಗೊಳಿಸುವಂತೆ ಆಗ್ರಹಿಸಿ ಇಂದು ಮೈಸೂರು ಜಿಲ್ಲಾ ಸಮಿತಿಯ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭ, ದಸರಾ ಆಚರಣೆಗೆ ಮೀಸಲಿಟ್ಟ ಹಣವನ್ನು ಆಟೋ, ಟ್ಯಾಕ್ಸಿ, ಸಣ್ಣಪುಟ್ಟ ವ್ಯಾಪಾರಿಗಳಿಗೆ ಮಾಸಿಕ 7500ರೂ ನೀಡಬೇಕು ಎಂದೂ ಆಗ್ರಹಿಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜ್ ಮಾತನಾಡಿ, "ಜಿಲ್ಲೆಯಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇಂಥ ಸಂದರ್ಭದಲ್ಲಿ ಜಿಲ್ಲಾಡಳಿತ, ಸೋಂಕು ನಿಯಂತ್ರಿಸುವ ಬದಲು ದಸರಾ ಆಚರಣೆ ಮಾಡಿ ಸೋಂಕನ್ನು ಹೆಚ್ಚಿಸಲು ಹೊರಟಿದೆ. ಸರಳ ದಸರಾ ಆಚರಿಸಲು, ದೀಪಾಲಂಕಾರ ಮಾಡಲು ಹೊರಟಿರುವುದು ಸೂತಕದ ಮನೆಯಲ್ಲಿ ದೀಪಾಲಂಕಾರ ಮಾಡಿದಂತೆ" ಎಂದು ಟೀಕಿಸಿದರು.
ಸರ್ಕಾರ ಅದ್ಧೂರಿ ದಸರಾ ಉತ್ಸವವನ್ನು ಮಾಡಲೇಬೇಕು: ವಾಟಾಳ್ ನಾಗರಾಜ್
ದಸರಾ ಆಚರಿಸುವ ಬದಲು ದಸರಾ ಆಚರಣೆಗೆ ಮೀಸಲಿಟ್ಟಿರುವ ಹಣವನ್ನು ಬಡ ವ್ಯಾಪಾರಿಗಳಿಗೆ ಮೂರು ತಿಂಗಳು ಕಾಲ ನೀಡಬೇಕು. ಪ್ಯಾಂಡಮಿಕ್ ಆಕ್ಟ್ ನೀಡುವ ವಿಶೇಷಾಧಿಕಾರವನ್ನು ಜಿಲ್ಲಾಧಿಕಾರಿಗಳು ಬಳಸಿ ಖಾಸಗಿ ಆಸ್ಪತ್ರೆ, ಕೋವಿಡ್ ಸೆಂಟರ್ಗಳನ್ನು ಸರ್ಕಾರದ ವಶಕ್ಕೆ ಪಡೆದು ಜನರಿಗೆ ಉಚಿತ ಚಿಕಿತ್ಸೆ ನೀಡಬೇಕೆಂದು ಆಗ್ರಹಿಸಿದರು.