ಪೇಜಾವರ ಶ್ರೀಗಳಿಂದ ಪ್ರೊ.ಎಸ್.ಎಲ್ ಭೈರಪ್ಪ ಮೆಚ್ಚುಗೆ
ಮೈಸೂರು, ಜೂನ್ 1: ನನ್ನನ್ನು ಗೊಡ್ಡು ಭಾರತೀಯನೆಂದು ಕರೆದಿದ್ದನ್ನು ನಾನೆಂದಿಗೂ ಮರೆಯಲಾರೆ. ಎಡಪಂಥೀಯರು ಹಾಗೂ ನವ್ಯರು ನನ್ನ ಸಾಹಿತ್ಯದ ಮೇಲೆ ಗೊಡ್ಡು ಭಾರತೀಯ ಲೇಖಕನೆಂದು ದಾಳಿ ಮಾಡಿದರು ಎಂದರು ಸಾಹಿತಿ ಎಸ್.ಎಲ್. ಭೈರಪ್ಪ.
ಮೈಸೂರಿನಲ್ಲಿ ಕೃಷ್ಣಾನುಗ್ರಹ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಅಂದಿನ ಪತ್ರಿಕೆಗಳು ಕೂಡ ಎಡಪಂಥೀಯರು ಹಾಗೂ ನವ್ಯರ ಪರವಾಗಿಯೇ ಇದ್ದವು. ಆದರೆ ನಾನು ಯಾವುದಕ್ಕೂ ಎದೆಗುಂದಲಿಲ್ಲ. ಅದರ ನಡುವೆಯೇ ನಾನು ಉತ್ತಮ ಲೇಖಕನಾಗಿ ಹೊರಹೊಮ್ಮಿದೆ. ಐದಾರು ವರ್ಷಗಳಲ್ಲಿ ದೇಶದ ಹಲವು ಭಾಷೆಗಳಲ್ಲಿ ನನ್ನ ಕಾದಂಬರಿಗಳು ಭಾಷಾಂತರಗೊಂಡು ಅತ್ಯುತ್ತಮ ಕಾದಂಬರಿಗಳು ಮಾರಾಟಗೊಂಡ ಲೇಖಕನೆಂದು ಹೆಸರು ಗಳಿಸಿದೆ. ನಾನು ಸಾಹಿತಿ ಆಗಬೇಕೆಂದು ಮನಸ್ಸು ಮಾಡಿರಲಿಲ್ಲ. ಬೆಳೆಯುತ್ತ ಅದೆಲ್ಲ ಸಾಗಿತು ಎಂದರು.
ಶ್ರೀಗಳು ಪರಂಪರೆ ಹಾಗೂ ಆಧುನಿಕತೆಯನ್ನು ಚೆನ್ನಾಗಿ ಅಧ್ಯಯನ ಮಾಡಿದ್ದಾರೆ. ಅವರು ಸಮರ್ಥವಾಗಿ ಚರ್ಚೆ ಮಾಡುವುದರಿಂದ ಅವರ ಬಳಿ ಯಾರೂ ಹೋಗುವುದಿಲ್ಲ ಎಂದು ಪೇಜಾವರ ಶ್ರೀಗಳ ಬಗ್ಗೆ ಮಾತನಾಡಿದರು.

ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಮಾತನಾಡಿ, ಸಾಹಿತಿ ಪ್ರೊ.ಎಸ್.ಎಲ್.ಭೈರಪ್ಪ ಅವರು ತಮ್ಮ ಸಾಹಿತ್ಯದ ಮೂಲಕ ಭಾರತದ ಇತಿಹಾಸ ದುರಂತಗಳನ್ನು ಪಾರದರ್ಶಕವಾಗಿ ಚಿತ್ರಿಸಿದ್ದಾರೆ. ಭಾರತೀಯತೆಯನ್ನು ಧೈರ್ಯವಾಗಿ ಬರೆದ ಸಾಹಿತಿ ಭೈರಪ್ಪ. ಇದಕ್ಕೆ 'ಬುದ್ಧಿಜೀವಿ' ಸಾಹಿತಿಗಳಿಂದ ವಿರೋಧವೂ ವ್ಯಕ್ತವಾಯಿತು. ಯಾರು ಎಷ್ಟೇ, ಏನೇ ಹೇಳಿದರೂ ನಾನು ಬರೆದೇ ಬರೆಯುತ್ತೇನೆ ಎಂದು ಭೈರಪ್ಪ ತಮ್ಮ ಕರ್ತವ್ಯ ನಿರ್ವಹಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನನಗೆ ಕಾದಂಬರಿಗಳನ್ನು ಓದುವ ಹವ್ಯಾಸವಿದೆ. ಭೈರಪ್ಪ ರಚಿಸಿರುವ ಕಾದಂಬರಿಗಳನ್ನು ಹೆಚ್ಚು ಓದಿದ್ದೇನೆ. ಅವರ 'ಪರ್ವ' ಕಾದಂಬರಿಯಲ್ಲಿ ನಾನು ಭಗವಂತನನ್ನು ಕಂಡಿರುವೆ ಎಂದು ಅವರು ವಿವರಿಸಿದರು.
-
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!












Click it and Unblock the Notifications