ಎಚ್ ಡಿಕೆ ಅಪ್ಪಟ ಅಭಿಮಾನಿಗೆ ಧನ್ಯವಾದ ತಿಳಿಸಿದ ನಿಖಿಲ್ ಕುಮಾರಸ್ವಾಮಿ
ಮೈಸೂರು, ಮೇ 25 : ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವವರೆಗೂ ಗಡ್ಡ, ಕೂದಲು ತೆಗೆಸಲ್ಲ ಎಂದು ಕಳೆದ 11 ವರ್ಷದಿಂದ ಹರಕೆ ಹೊತ್ತಿದ್ದ ಕುಮಾರಸ್ವಾಮಿ ಅಭಿಮಾನಿಯನ್ನು ನಿನ್ನೆ ನಿಖಿಲ್ ಕುಮಾರಸ್ವಾಮಿ ಅವರು ಭೇಟಿ ಮಾಡಿ ಧನ್ಯವಾದ ತಿಳಿಸಿದ್ದಾರೆ.
ನಗರದ ಕೆ.ಆರ್.ನಗರ ತಾಲೂಕಿನ ಮೇಲೂರು ಗ್ರಾಮದ ನಿವಾಸಿಯಾಗಿರುವ ರಾಮಕೃಷ್ಣಗೌಡ, ಕುಮಾರಸ್ವಾಮಿ ಅವರ ಅಪ್ಪಟ ಅಭಿಮಾನಿ. ಕುಮಾರಸ್ವಾಮಿ ಮತ್ತೆ ಸಿಎಂ ಆಗುವವರೆಗೂ ತಲೆಕೂದಲು ಮತ್ತು ಗಡ್ಡ ತೆಗೆಸಲ್ಲ ಎಂದು ಹರಕೆ ಕಟ್ಟಿದ್ದರು.

ಗುರುವಾರ ರಾಮಕೃಷ್ಣಗೌಡ ಅವರನ್ನು ಖಾಸಗಿ ಹೋಟೆಲ್ಗೆ ಕರೆಸಿಕೊಂಡ ನಿಖಿಲ್ ಕುಮಾರಸ್ವಾಮಿ ಅವರು ರಾಮಕೃಷ್ಣಗೌಡರ ಜೊತೆ ಮಾತುಕತೆ ನಡೆಸಿ, ತಂದೆಯವರಿಗಾಗಿ ಹರಕೆ ಹೊತ್ತಿದ್ದಕ್ಕೆ ರಾಮಕೃಷ್ಣಗೌಡ ಹಾಗೂ ಅವರ ಪುತ್ರ ಗೌತಮ್ ಇಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ತಂದೆಯವರನ್ನ ಭೇಟಿ ಮಾಡಿಸುವುದಾಗಿ ನಿಖಿಲ್ ಭರವಸೆ ನೀಡಿದ್ದಾರೆ. ರಾಮಕೃಷ್ಣಗೌಡ ನಿನ್ನೆಯೇ ಕಾಶಿಗೆ ತೆರಳಿದ್ದು, ಇಂದು ಕುಮಾರಸ್ವಾಮಿಗಾಗಿ ಹೊತ್ತಿದ್ದ ಹರಕೆ ತೀರಿಸಲಿದ್ದಾರೆ.












Click it and Unblock the Notifications