ಮೈಸೂರು: ಕೊರೊನಾ ಸಂಕಷ್ಟದ ನಡುವೆ ಕಾರ್ಖಾನೆ ಬಂದ್, ಕಾರ್ಮಿಕರಿಗೆ ಶಾಕ್
ಮೈಸೂರು, ಸೆಪ್ಟೆಂಬರ್ 2: ಮಾಹಾಮಾರಿ ಕೊರೊನಾ ವೈರಸ್ ಸಂಕಷ್ಟದ ನಡುವೆಯೇ ದಿಢೀರ್ ಆಗಿ ನಂಜನಗೂಡಿನಲ್ಲಿ ಕಾರ್ಖಾನೆ ಬಂದ್ ಆಗಿದ್ದರಿಂದ ಕಾರ್ಮಿಕರಿಗೆ ಆತಂಕ ಎದುರಾಗಿದೆ.
Recommended Video
ಆಸ್ಪತ್ರೆಯಿಂದ
ಕೆಲಸ
ಮಾಡುತ್ತಿರುವ
Minister
|
Oneindia
Kannada
ಕಳೆದ ಹದಿನೈದು ವರ್ಷಗಳಿಂದ ನಡೆಯುತ್ತಿದ್ದ ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯ ಬಾಗಿಲು ಹಾಕಿರುವುದರಿಂದ 35 ಮಂದಿ ಕಾರ್ಮಿಕರು ಬೀದಿಪಾಲಾಗಿದ್ದಾರೆ.
ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಆದಾಯದಲ್ಲಿ ಭಾರೀ ಇಳಿಕೆ
ನಂಜನಗೂಡಿನ ಜೆ ಜೇಸ್ ಪೇಪರ್ ರಿಸೈಕ್ಲಿಂಗ್ ಕಾರ್ಖಾನೆ ಬಂದ್ ಘೋಷಣೆಯನ್ನು ಸೂಕ್ತ ಕಾರಣ ನೀಡದೆ ಹಾಗೂ ಯಾವುದೇ ಮುನ್ಸೂಚನೆ ನೀಡದೆ ಮಾಲೀಕರು ಬೀಗ ಜಡಿದಿದ್ದಾರೆ.
ಬೆಳ್ಳಂಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಬಂದ ಕಾರ್ಮಿಕರಿಗೆ ಆಘಾತ ಕಾದಿತ್ತು, ಕಾರ್ಖಾನೆಯ ಮುಂಭಾಗದಲ್ಲಿ ನೋಟೀಸ್ ಅಳವಡಿಸಿದ್ದರು. ಕಾರ್ಖಾನೆ ಪುನರಾರಂಭಕ್ಕೆ ಒತ್ತಾಯಿಸಿದ್ದು, ಕುಟುಂಬ ಸಮೇತ ಪ್ರತಿಭಟನೆಗೆ ಕಾರ್ಮಿಕರು ಮುಂದಾಗಿದ್ದಾರೆ.
Comments
English summary
J Jace Paper Recycling Factory Closed Amid Coronavirus In Nanjanagud, Labourers Facing Crisis.
Story first published: Wednesday, September 2, 2020, 12:18 [IST]