ಬೆಂಕಿಯುಗುಳುವ ಭೂಮಿ ಪ್ರಕರಣ: ಸ್ಥಳದ ನಿಷೇಧಾಜ್ಞೆ ವಿಸ್ತರಣೆ
ಮೈಸೂರಿನಲ್ಲಿ ಬೆಂಕಿಯುಗುಳುವ ಭೂಮಿಯಲ್ಲಿ ಬಿದ್ದು ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 5ರವರೆಗೆ ನಿಷೇಧಾಜ್ಞೆಯನ್ನು ಮುಂದುವರೆಸಿ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಆದೇಶ ಹೊರಡಿಸಿದ್ದಾರೆ.
ಮೈಸೂರು, ಮೇ 04: ಮೈಸೂರಿನಲ್ಲಿ ಬೆಂಕಿಯುಗುಳುವ ಭೂಮಿಯಲ್ಲಿ ಬಿದ್ದು ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 5ರವರೆಗೆ ನಿಷೇಧಾಜ್ಞೆಯನ್ನು ಮುಂದುವರೆಸಿ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಆದೇಶ ಹೊರಡಿಸಿದ್ದಾರೆ. ದಿನನಿತ್ಯವೂ ಸಾವಿರಾರು ಮಂದಿ ಘಟನಾ ಸ್ಥಳದ ಬಳಿಗೆ ಭೇಟಿ ನೀಡುತ್ತಿದ್ದ ಹಿನ್ನೆಲೆಯಲ್ಲಿ ಅನಾಹುತ ಸಂಭವಿಸಿಬಹುದೆಂಬ ಮುನ್ನೆಚ್ಚರಿಕೆಯಿಂದ ರಂದೀಪ್ ಅವರು ನಿನ್ನೆಯಿಂದ ಮತ್ತೆ ನಿಷೇಧಾಜ್ಞೆಯನ್ನ ಮುಂದುವರೆಸಿದ್ದಾರೆ.
ಇನ್ನು ಘಟನಾ ಸ್ಥಳದಲ್ಲಿ ತನಿಖೆ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಜಾರಿಯಾದ ಈ ನಿಷೇಧಾಜ್ಞೆ, ಘಟನಾ ಸ್ಥಳದಿಂದ 200 ಮೀಟರ್ ವರೆಗೆ ಅನ್ವಯಿಸಲಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ ಜಯಪ್ರಕಾಶ್ ನೇತೃತ್ವದ ಮಧ್ಯಂತರ ವರದಿ ಸಲ್ಲಿಕೆಗೆ ಸಂಬಂಧಿಸಿದಂತೆ ಮಧ್ಯಂತರ ವರದಿ ಅಂತಿಮ ವರದಿಯೇನಲ್ಲ.[ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣ : ತಜ್ಞರ ತಂಡದಿಂದ ವರದಿ ಸಲ್ಲಿಕೆ]
ಮಧ್ಯಂತರ ವರದಿಯಲ್ಲಿ ಇದೊಂದು ಮಾನವ ನಿರ್ಮಿತ ಘಟನೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಉಲ್ಲೇಖಿಸಲಾಗಿದೆ. ಕೆಮಿಕಲ್ ದುರ್ವಾಸನೆ ಕಂಡು ಬಂದಿಲ್ಲ ಎಂದೂ ವರದಿಯಲ್ಲಿ ತಿಳಿಸಲಾಗಿದೆ.
ಯುವಕ ಹರ್ಷಿಲ್ ಸಾವಿನ ಶವ ಪರೀಕ್ಷೆಯ ವರದಿ ಬಂದ ಬಳಿಕ , ಪೊಲೀಸ್ ತನಿಖೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಮೇ.3 ನೇ ವಾರದಲ್ಲಿ ಅಂತಿಮ ವರದಿ ಸಿದ್ಧವಾಗಲಿದೆ. ಮಧ್ಯಂತರ ವರದಿ ಕುರಿತು ಹರ್ಷಿಲ್ ಪೋಷಕರ ಆಕ್ರೋಶ ಹಿನ್ನಲೆಗೆ ಸಂಬಂಧಿಸಿದಂತೆ ಅಂತಿಮ ವರದಿ ಬರುವವರೆಗೂ ಮಧ್ಯಂತರ ವರದಿ ಕುರಿತು ನಾನು ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದು ಜಿಲ್ಲಾಧಿಕಾರಿ ರಂದೀಪ್ ಪ್ರತಿಕ್ರಿಯಿಸಿದ್ದಾರೆ.
ಇತ್ತ
ಜಯಪ್ರಕಾಶ್
ವರದಿ
ಹಿಂಪಡೆಯುವಂತೆ
ಆಗ್ರಹ
:
ಇತ್ತ
'ರಾಸಾಯನಿಕ
ಬೆಂಕಿ
ಪ್ರಕರಣ'ಕ್ಕೆ
ಸಂಬಂಧಿಸಿದಂತೆ
ಬೆಂಗಳೂರಿನ
ಪರಿಸರ
ಮಾಲಿನ್ಯ
ನಿಯಂತ್ರಣ
ಮಂಡಳಿಯ
ಜಯಪ್ರಕಾಶ್
ಮತ್ತು
ತಜ್ಞರ
ತಂಡ
ನೀಡಿದ
ವರದಿ
ಸತ್ಯಕ್ಕೆ
ದೂರವಾಗಿದ್ದು,
ಜಿಲ್ಲಾಧಿಕಾರಿಗಳು
ತಿರಸ್ಕರಿಸಬೇಕು
ಹಾಗೂ
ಗಾಯಾಳುಗಳ
ಚಿಕಿತ್ಸೆ
ವೆಚ್ಚ
ಸೇರಿದಂತೆ
ಪರಿಹಾರ
ನಿಧಿಯನ್ನು
ಸರ್ಕಾರದಿಂದ
ನೀಡಬೇಕೆಂದು
ಕರ್ನಾಟಕ
ರಾಜ್ಯ
ದಲಿತ
ಸಂಘರ್ಷ
ಸಮಿತಿ
ಜಿಲ್ಲಾ
ಸಂಘಟನಾ
ಸಂಚಾಲಕ
ಬೆಲವತ್ತ
ರಾಮಚಂದ್ರ
ಸರ್ಕಾರವನ್ನು
ಒತ್ತಾಯಿಸಿದರು.
ಬುಧವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತ ಹರ್ಷಿಲ್ ಕುಟುಂಬಕ್ಕೆ 10 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 5 ಲಕ್ಷ ರೂ. ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.