ಮೈಸೂರು : ಮಹಿಷಾಸುರನ ಹೆಬ್ಬೆರಳು ಜಜ್ಜಿದ ಪುಂಡರು

ಮೈಸೂರು, ಮಾ. 14 : ಕಿಡಿಗೇಡಿಗಳು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ. ಮಹಿಷಾಸುರನ ಹೆಬ್ಬೆರಳನ್ನು ಕಲ್ಲಿನಿಂದ ಜಜ್ಜಿ ಹಾನಿ ಮಾಡಿದ್ದು, ಪ್ರತಿಮೆಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಶುಕ್ರವಾರ ರಾತ್ರಿ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದು, ಶನಿವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಮಹಿಷಾಸುರನ ಹೆಬ್ಬೆರಳನ್ನು ಕಲ್ಲಿನಿಂದ ಸುಮಾರು 5 ಇಂಚುಗಳಷ್ಟು ಅಗಲ ಜಜ್ಜಿ ಹಾಕಲಾಗಿದೆ. ಕೃತ್ಯಕ್ಕೆ ಬಳಸಿದ ಕಲ್ಲನ್ನು ಅಲ್ಲಿಯೇ ಬಿಸಾಡಿ ಹೋಗಿದ್ದಾರೆ.

Mahishasura

ಮಹಿಷಾಸುರನ ಪ್ರತಿಮೆಯ ಸುತ್ತ ಕಬ್ಬಿಣದ ಗ್ರಿಲ್‌ಗಳನ್ನು ಆಳವಡಿಸಲಾಗಿದೆ. ಅದನ್ನು ಹತ್ತಿ ಬಂದು ಮೂರ್ತಿಯ ಎಡಗಾಲಿನ ಹೆಬ್ಬೆರಳನ್ನು ಜಜ್ಜಿ ಹಾಕಿದ್ದಾರೆ. ದೇವಾಲಯದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. [ಮೈಸೂರಿನಲ್ಲಿ ಒಡೆಯರ್ ಕತ್ತಿ ನಾಪತ್ತೆ]

ಚಾಮುಂಡಿ ಬೆಟ್ಟದಲ್ಲಿ ಮೂರ್ತಿಗಳನ್ನು ವಿರೂಪಗೊಳಿಸುತ್ತಿರುವುದು ಇದೇ ಮೊದಲಲ್ಲ. ಹಿಂದೆ ನಂದಿ ವಿಗ್ರಹವನ್ನು ಸಹ ವಿರೂಪಗೊಳಿಸಲಾಗಿತ್ತು. ಪದೇ-ಪದೇ ಬೆಟ್ಟದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ಮೂರ್ತಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.[ಬಜೆಟ್ ನಲ್ಲಿ ಮೈಸೂರಿಗೆ ಏನು ಸಿಕ್ತು]

ಒಡೆಯರ್ ಕತ್ತಿ ನಾಪತ್ತೆಯಾಗಿತ್ತು : 2014ರ ಅಕ್ಟೋಬರ್‌ನಲ್ಲಿ ಚಾಮರಾಜೇಂದ್ರ ಒಡೆಯರ್ ಪ್ರತಿಮೆಯನ್ನು ಕಿಡಿಗೇಡಿಗಳು ಭಗ್ನಗೊಳಿಸಿದ್ದರು. ಮೈಸೂರಿನ ಅಂಬಾವಿಲಾಸ ಅರಮನೆಯ ಬಲರಾಮ ದ್ವಾರದ ಬಳಿ ಇರುವ ಚಾಮರಾಜೇಂದ್ರ ಒಡೆಯರ್ ಪ್ರತಿಮೆಯ ಕತ್ತಿಯನ್ನು ಕಲ್ಲಿನಿಂದ ಹೊಡೆದು ಹಾನಿಗೊಳಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+