ಮೈಸೂರು ದಸರಾ ಸಿದ್ಧತೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿಶೇಷ ಸಭೆ
ಮೈಸೂರು, ಜುಲೈ 22 : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸುವಂತೆ ಉನ್ನತ ಮಟ್ಟದ ಸಮಿತಿ ತೀರ್ಮಾನಿಸಿದರೆ ಮಾತ್ರ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜು.21 ರಂದು ವಿವಿಧ ಪ್ರಮುಖ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಅವರು, ದಸರಾ ಮಹೋತ್ಸವನ್ನು ಅದ್ಧೂರಿಯಾಗಿ ಅಥವಾ ಸರಳವಾಗಿ ಆಚರಿಸಬೇಕೆ ಎನ್ನುವುದನ್ನು ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ. ಒಂದು ವೇಳೆ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದರೆ ಕಳೆದ ಬಾರಿಗಿಂತಲೂ ಸ್ವಲ್ಪ ಹೆಚ್ಚುವರಿಯಾಗಿ ಹಣದ ಪಸ್ತಾವನೆ ಸಲ್ಲಿಸಬೇಕಾಗುತ್ತದೆ ಎಂದರು.
ಕಳೆದ ವರ್ಷ ಸರ್ಕಾರ ದಸರಾ ವೆಚ್ಚಕ್ಕಾಗಿ 14.25 ಕೋಟಿ ರೂ. ಬಿಡುಗಡೆ ಮಾಡಿತ್ತು. ಅದರಲ್ಲೇ 12.25 ಖರ್ಚು ಮಾಡಲಾಗಿದ್ದು, ಇನ್ನೂ 2 ಕೋಟಿ ರೂ. ಉಳಿದಿದೆ. ಈ ವಿಚಾರವನ್ನು ಉನ್ನತ ಮಟ್ಟದ ಸಭೆಯಲ್ಲಿ ಪಸ್ತಾಪಿಸಿ ವಿವರಿಸಲಾಗುವುದು ಎಂದು ಹೇಳಿದರು.
ಕೊನೆಯ ಆಷಾಢ ಶುಕ್ರವಾರ: ಮೈಸೂರಿನಲ್ಲಿ ಚಾಮುಂಡಿಗೆ ವಿಶೇಷ ಪೂಜೆ
ಗಜಪಯಣದಿಂದ
ಮಹೋತ್ಸವ
ಆರಂಭ
ಈ
ಬಾರಿ
ದಸರಾ
ಮಹೋತ್ಸವಕ್ಕೆ
ವೀರನಹೊಸಹಳ್ಳಿಯಿಂದ
ಹೊರಡುವ
ಗಜಪಯಣದಿಂದಲೇ
ವಿಶೇಷ
ಕಾರ್ಯಕ್ರಮ
ನಿಗದಿಪಡಿಸಲಾಗುವುದು
ಎಂದರು.
ದಸರಾ
ಮಹೋತ್ಸವ
ಸೆ.21ರಿಂದ
30ರವರೆಗೆ
ನಡೆಯಲಿದ್ದು,
ಆ.10
ಅಥವಾ
14ರಂದು
ಗಜಪಯಣ
ಕಾರ್ಯಕ್ರಮ
ನಡೆಸಲಾಗುವುದು.
ಅರಮೆನೆಗೆ
ಆನೆಗಳು
ಬಂದಾಗ
ಅಲ್ಲಿಯೂ
ಅದ್ಧೂರಿಯಾಗಿ
ಸ್ವಾಗತಿಸಲು
ಕ್ರಮ
ವಹಿಸಲಾಗುವುದು
ಎಂದರು.
ಸ್ವಚ್ಛತೆಗೆ ಹೆಚ್ಚುವರಿ ಕಾರ್ಮಿಕರು
ದಸರಾ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳ 30 ದಿನ ನಗರದ ಸ್ವಚ್ಛತೆಗೆ ಹೆಚ್ಚವರಿಯಾಗಿ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು. ಇದಕ್ಕೆ 45 ಲಕ್ಷ ರೂ., ಗೋಡೆಗಳಿಗೆ ಬಣ್ಣ ಬಳಿಯಲು 10 ಲಕ್ಷ ರೂ. ಹಾಗೂ ಪುರಭವನದಲ್ಲಿ ಪಾರ್ಕಿಂಗ್ ಗಾಗಿ 10 ಲಕ್ಷ ರೂ. ಮಂಜೂರು ಮಾಡುವುದಾಗಿ ಹೇಳಿದರು.
ವಾರ್ತಾ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳು ತಮ್ಮ ಸ್ವಂತ ಖರ್ಚಿನಿಂದಲೇ ಸ್ವಾಗತ ಹಾಗೂ ಪ್ರಚಾರದ ಕೆಲಸಗಳನ್ನು ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಇದೇ ವೇಳೆ ಕೆ.ಆರ್.ವೃತ್ತದಿಂದ ಆಯುರ್ವೇದ ಆಸ್ಪತೆ ವೃತ್ತದವರೆಗೆ ಸಾಂಪ್ರದಾಯಿಕ ದೀಪಾಲಂಕಾರ ಮಾಡಲಾಗುವುದು. ಉಳಿದಂತೆ ಬೇರೆ ಬೇರೆ ಕಡೆಗಳಲ್ಲಿ ಎಲ್ಇಡಿ ದೀಪಗಳನ್ನು ಬಳಕೆ ಮಾಡಲಾಗುವುದು ಎಂದು ತಿಳಿಸಿದರು.