ನೂರಾರು ಪ್ರಯಾಣಿಕರ ಜೀವ ಉಳಿಸಿದ ರೈಲು ಚಾಲಕ
ಬೇಸಿಗೆ
ಬಿಸಿಲು
ತೋರಿದ
ಪ್ರಕೋಪ:
ಏನಾಯಿತೆಂದರೆ
ನಿನ್ನೆ
ಬೆಳಗ್ಗೆ
9
ಗಂಟೆಗೆ
ಸರಿಯಾಗಿ
ಸದರಿ
ಚಾಮುಂಡಿ
ಎಕ್ಸ್
ಪ್ರೆಸ್
ಮೈಸೂರಿನಿಂದ
ಹೊರಟಿತ್ತು.
ಆದರೆ
ಮದ್ದೂರಿನ
ನಿಡಘಟ್ಟ
ಬಳಿಗೆ
ಬರುವ
ವೇಳೆಗೆ
ಹಳಿಯಲ್ಲಿ
ವಿಚಿತ್ರ
ಶಬ್ದ
ಕೇಳಿಬಂದಿದೆ.
ನಾಡಿಮಿಡಿತದಿಂದಲೇ
ವೈದ್ಯರು
ರೋಗಲಕ್ಷಣ
ಅರಿಯುವಂತೆ
ಹಳಿಯಲ್ಲಿನ
ಭಿನ್ನ
ರಾಗ
ಅರಿತ
ರೈಲು
ಚಾಲಕ
ತಕ್ಷಣ
ರೈಲನ್ನು
ನಿಲ್ಲಿಸಿ,
ಸ್ವಲ್ಪ
ದೂರ
ಹಳಿಗಳ
ಮೇಲೆ
ನಡೆದುಹೋಗಿದ್ದಾರೆ.
ಅನತಿ
ದೂರ
ನಡೆಯುವಷ್ಟರಲ್ಲಿ
ಹಳಿಯೊಂದು
2
ಅಂಗುಲ
ಬಿರುಕು
ಬಿಟ್ಟಿರುವುದು
ಕಣ್ಣಿಗೆ
ಬಿದ್ದಿದೆ.
ಆತಂಕಗೊಂಡ ಚಾಲಕ ತಕ್ಷಣ ರೈಲ್ವೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಮುಂದಿನ ಕಾರ್ಯಚರಣೆಯಲ್ಲಿ ಸಮೀಪದಲ್ಲೇ ಜೋಡಿ ಹಳಿ ಕಾಮಗಾರಿ ನಡೆಸುತ್ತಿದ್ದ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ, ಬಿರುಕುಬಿಟ್ಟಿದ್ದ ಹಳಿಯನ್ನು ಬದಲಾಯಿಸಿದ್ದಾರೆ, ಮುಂದಿನ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದರಿಂದ ಸುಮಾರು 1 ಗಂಟೆ ಕಾಲ ರೈಲು ಪ್ರಯಾಣ ವ್ಯತ್ಯಯಗೊಂಡಿತ್ತು. ಇತರೆ ರೈಲುಗಳ ಸಂಚಾರವೂ ಏರುಪೇರಾಯಿತು.
ಇಲಾಖೆ, ಪ್ರಯಾಣಿಕರಿಂದ ಪ್ರಶಂಸೆ: ಹಳಿ ನಾಡಿಮಿಡಿತ ಅರಿಯುವಲ್ಲಿನ ತನ್ನ ಅನುಭವ ಮತ್ತು ಸಮಯಪ್ರಜ್ಞೆಯಿಂದ ನೂರಾರು ಪ್ರಯಾಣಿಕರ ಜೀವ ಉಳಿಸಿದ್ದಕ್ಕೆ ಪ್ರಯಾಣಿಕರು ಚಾಲಕನನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ. 'ಚಾಲಕ ಕೊಂಚವೇ ನಿರ್ಲಕ್ಷ್ಯ ತೋರಿದ್ದರೂ ದೊಡ್ಡ ದುರಂತ ನಡೆದುಹೋಗುತ್ತಿತ್ತು. ಚಾಲಕನ ಸಮಯಪ್ರಜ್ಞೆ ಅನನ್ಯ' ಎಂದು ಇಲಾಖೆಯೂ ಅತೀವ ಪ್ರಶಂಸೆ ವ್ಯಕ್ತಪಡಿಸಿದೆ.
'ಪ್ರಯಾಣಿಕರು ಹೆಚ್ಚಾಗಿ ಮೈಸೂರು-ಬೆಂಗಳೂರು ಮಧ್ಯೆ ದಿನವಹಿ ಸಂಚರಿಸುವವರು. ಚಾಲಕನ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಇಂತಹ ನ್ಯೂನತೆಗಳು ಕಂಡುಬರುತ್ತವೆ' ಎಂದು ನಿಡಘಟ್ಟ ಸ್ಟೇಷನ್ ಮಾಸ್ಟರ್ ತಿಳಿಸಿದ್ದಾರೆ.