ಮೈಸೂರು ಕಲಾಮಂದಿರದಲ್ಲಿ 'ಮಧ್ಯರಾತ್ರಿಯ ತಿಗಣೆಗಳು'
ಮೈಸೂರು, ಸೆಪ್ಟೆಂಬರ್ 1: ಎಸ್. ಎನ್. ಕಿತ್ತೂರು ಅವರು ರಚಿಸಿರುವ ಸುಮಾರು 20 ನಿಮಿಷಗಳ ರೇಡಿಯೋ ನಾಟಕ 'ಮಧ್ಯರಾತ್ರಿಯ ತಿಗಣೆಗಳು' ಮೈಸೂರಿನ ಕಲಾಮಂದಿರದಲ್ಲಿ ಸೆಪ್ಟೆಂಬರ್ 3, ಭಾನುವಾರದಂದು ಸಂಜೆ 7 ಕ್ಕೆ ನಡೆಯಲಿದೆ.
ನಾಟಕವನ್ನು ಹೆಚ್.ಕೆ.ದ್ವಾರಕನಾಥ್ ವಿನ್ಯಾಸಗೊಳಿಸಿದ್ದು, ಸಂಗೀತ ಪ್ರಶಾಂತ್ ಹಿರೇಮಠ್, ವಸ್ತ್ರವಿನ್ಯಾಸ ಸುಷ್ಮಾ ನಾಣಯ್ಯ, ಪ್ರಸಾದನ ರಾಘವೇಂದ್ರ ಬೂದನೂರು ಬೆಳಕು ರಾಜೇಶ್ ತಲಕಾಡು, ಸಹಾಯ ಮಹೇಶ್ ನಂಜುಂಡಯ್ಯ ಮತ್ತು ನಿರ್ವಹಣೆಯ ಹೊಣೆ ರಾಜೇಶ್ ಅವರದು.

ಸಹೃದಯರು ಭಾಗವಹಿಸುವಂತೆ ಕೋರಲಾಗಿದೆ.
ನಾಟಕದ ಬಗ್ಗೆ: ಇದು ಎಸ್. ಎನ್. ಕಿತ್ತೂರು ಅವರು ರಚಿಸಿರುವ ಸುಮಾರು 20 ನಿಮಿಷಗಳ ರೇಡಿಯೋ ನಾಟಕ. ಪ್ರದರ್ಶನದ ದೃಷ್ಟಿಯಿಂದ ನಾಟಕದ ಮೂಲ ಉದ್ದೇಶಕ್ಕೆ ಚ್ಯುತಿ ಬಾರದಂತೆ ನಿರ್ದೇಶಕ ಪ್ರಭುಸ್ವಾಮಿ ಮಳಿಮಠ ಅವರು ಒಂದು ಗಂಟೆಗೆ ವಿಸ್ತರಿಸಿದ್ದಾರೆ. ಗೋಪಿ ಒಬ್ಬ ಬ್ರಹ್ಮಚಾರಿ ಯುವಕ. ಒಂದು ಓಣಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿರುತ್ತಾನೆ. ಆ ಮನೆ ಮಾಲೀಕ ಹತ್ತು ಹಲವು ಷರತ್ತುಗಳನ್ನು ವಿಧಿಸಿ ಮನೆ ನೀಡಿರುತ್ತಾನೆ. 'ಬಾಗಿಲು ಬಡಿಯಬಾರದು', 'ರಾತ್ರಿ 10 ಗಂಟೆ ಮೇಲೆ ನಿಶ್ಯಬ್ದವಾಗಿರಬೇಕು', 'ಬಾಗಿಲು ಬಡಿಯಬಾರದು ಅನ್ನೊ ಬೋರ್ಡ್ ಹಾಕಿ ಅದು ಕಾಣೂ ಹಂಗೆ ಒಂದು ಬಲ್ಬ್ ಹಾಕಬೇಕು', 'ರಾತ್ರಿ 10 ಗಂಟೆ ಮೇಲೆ ದೀಪ ಹಚ್ಚಬಾರದು' ಹೀಗೆ...

ನಾಲ್ಕು ದಿನಗಳ ನೈಟ್ ಶಿಫ್ಟ್ ಕೆಲಸದಿಂದ ನಿದ್ರೆಗೆಟ್ಟ ಗೋಪಿಗೆ ನಿದ್ರೆ ಬರದಂತೆ ಕಾಡುವ ಎದುರು ಮನೆ ವಿಶ್ವಂಭರ, ಚಹಾಗೆ ಸಕ್ಕರೆಗಾಗಿ ಅಪರ ರಾತ್ರಿಯಲ್ಲಿ ಮನೆ ಬಾಗಿಲು ತಟ್ಟುತ್ತಾನೆ. ಅವನ ಹಿಂದೆಯೇ ಬೆಳಗಾವಿ ಬಸ್ಸಿನ ವ್ಯಾಳಾ (ಟೈಮ್) ಕೇಳಿಕೊಂಡು ಬರುವ ಗುಂಡ್ಯಾ. ಗಂಡನನ್ನು ಹುಡುಕಿಕೊಡಿ ಎಂದು ಬರುವ ಗೌರಿ. ಷರತ್ತನ್ನು ಮುರಿದು ನಿದ್ದೆಗೆಡಿಸಿದ್ದಕ್ಕಾಗಿ ಬಂದು ವಿಚಾರಿಸಿಕೊಳ್ಳುವ ಯಂಗ್ ಅಂಡ್ ಎನೆರ್ಜಟಿಕ್ ಮನೆ ಮಾಲೀಕ. ಹೀಗೆ ಎಲ್ಲರೂ ಗೋಪಿಗೆ ನಿದ್ರೆ ಬರದಂತೆ ತಿಗಣೆಗಳಾಗಿ ಕಾಡುವ ಹಾಸ್ಯ ಪ್ರಸಂಗಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿಬಿಡುತ್ತವೆ.

ಹೆಚ್ಚಿನ ಮಾಹಿತಿಗೆ ಹಾಗು ಟಿಕೆಟ್ಗಳಿಗೆ ಸಂಪಕರ್ಕಿಸಿ: 9448871815 / 9964656482
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications