ಕೊನೆಯ ಕಾರ್ತಿಕ ಸೋಮವಾರದ ಸಂಭ್ರಮಕ್ಕೆ ಸಜ್ಜಾದ ಗದ್ದಿಗೆ
ಮೈಸೂರು, ನವೆಂಬರ್ 13: ಹುಣಸೂರು ತಾಲೂಕಿನ ಶ್ರೀಕೆಂಡಗಣ್ಣಸ್ವಾಮಿ ಗದ್ದಿಗೆಯಲ್ಲಿ ಕಡೇ ಕಾರ್ತಿಕ ಸೋಮವಾರದ(ನ.13) ಅಂಗವಾಗಿ ಭಾನುವಾರದಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ಆರಂಭಗೊಂಡಿವೆ. ಎರಡು ದಿನಗಳ ಕಾಲ ನಡೆಯುವ ಜಾತ್ರಾಮಹೋತ್ಸವದಲ್ಲಿ ಪಲ್ಲಕ್ಕಿ ಉತ್ಸವ-ದೀಪೋತ್ಸವ, ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಸುಮಾರು ನಲವತ್ತರಿಂದ ಐವತ್ತು ಸಾವಿರ ಭಕ್ತರು ಭಾಗವಹಿಸಲಿದ್ದಾರೆ.
ಹಾಗೆನೋಡಿದರೆ ಶ್ರೀಕೆಂಡಗಣ್ಣಸ್ವಾಮಿ ಗದ್ದಿಗೆಯು ರಾಜ್ಯದಾದ್ಯಂತ ಹೆಸರುವಾಸಿಯಾಗಿದ್ದು, ಮೈಸೂರು ಜಿಲ್ಲೆಯ ಪ್ರಮುಖ ಕ್ಷೇತ್ರವಾಗಿಯೂ ಗಮನಸೆಳೆಯುತ್ತಿದೆ. ಅರಕಲಗೂಡು ತಾಲೂಕಿನ ಬಸವಾಪಟ್ಟಣದ ಅಡಿಕೆ ವ್ಯಾಪಾರಿ ತೊಟ್ಟಿಮನೆ ಕುಟುಂಬದವರು ಪುನರುಜ್ಜೀವನಗೊಳಿಸಿ ಸುಂದರವಾದ ಭವ್ಯ ದೇವಸ್ಥಾನವನ್ನು ನಿರ್ಮಿಸಿಕೊಟ್ಟಿರುವುದನ್ನು ಕಾಣಬಹುದಾಗಿದೆ.
ವರ್ಷ ಪೂರ್ತಿ ಹಬ್ಬ ಹರಿದಿನಗಳಲ್ಲಿ ಇಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆಯಾದರೂ ಕಡೇ ಕಾರ್ತಿಕದಂದು ಕೆಂಡಗಣ್ಣಸ್ವಾಮಿ ಹಾಗೂ ಮಹದೇಶ್ವಸ್ವಾಮಿಗೆ ವಿಶೇಷಪೂಜಾ ಕಾರ್ಯಗಳು ನಡೆಯುತ್ತಿದ್ದು, ಈ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬರುವುದು ಮಾಮೂಲಿಯಾಗಿದೆ.

ಮುಂಜಾನೆಯಿಂದಲೇ ಪೂಜಾಕಾರ್ಯ
ಕಾರ್ತಿಕ ಸೋಮವಾರದಂದು ಮುಂಜಾನೆಯಿಂದಲೇ ದೇವರ ಪೂಜಾ ಕೈಂಕರ್ಯಗಳು ಆರಂಭವಾಗಿ ತಡರಾತ್ರಿವರೆಗೂ ನಡೆಯಲಿದೆ. ಗದ್ದಿಗೆಯ ಲಕ್ಷ್ಮಿ ಸೌಂಡ್ಸ್ ಸಿಸ್ಟಂನ ಮೀನಾಕ್ಷಿ-ಗೌರೀಶ್ ಕುಟುಂಬದವರು ಸಂಜೆ ಗದ್ದಿಗೆಯ ರಾಜಬೀದಿಯಲ್ಲಿ ಬೆಳ್ಳಿಪಲ್ಲಕ್ಕಿ ಉತ್ಸವ ನಡೆಸಿಕೊಡಲಿದ್ದಾರೆ.

ಸಿಡಿಮದ್ದು ಪ್ರದರ್ಶನ
ಸುಮಾರು 30 ಸಾವಿರ ಭಕ್ತರಿಗೆ ತಿಂಡಿ-ಊಟದ ವ್ಯವಸ್ಥೆ ಹಾಗೂ ರಾತ್ರಿ ದೀಪೋತ್ಸವ, ಸಿಡಿಮದ್ದು ಪ್ರದರ್ಶನವನ್ನು ಮೈಸೂರಿನ ಬೋಗಾದಿಯ ನಳಿನಿ-ಬಿ.ಕೆ.ರಾಜು ಕುಟುಂಬದವರು ಕಳೆದ 20 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.
ಗದ್ದಿಗೆಯ ದೇವಸ್ಥಾನದಲ್ಲಿ ನಡೆಯುವ ಎಲ್ಲ ಪೂಜಾ, ಜಾತ್ರಾಮಹೋತ್ಸವ ಸೇರಿದಂತೆ ಎಲ್ಲಕಾರ್ಯಕ್ರಮಕ್ಕೂ ಮೈಸೂರಿನ ದೇವರಾಜಮಾರುಕಟ್ಟೆಯ ಗಾಯಿತ್ರಿ ಫ್ಲವರ್ ಸ್ಟಾಲ್ ನವರು ಉಚಿತವಾಗಿಯೇ ಹೂವಿನ ಅಲಂಕಾರವನ್ನು ಮಾಡಿಕೊಡುತ್ತಾರೆ.

ಕುಸ್ತಿಪಂದ್ಯಾವಳಿ, ನಾಟಕ
ಜಾತ್ರೆಯ ಅಂಗವಾಗಿ ನ.13 ಸೋಮವಾರ ಮಧ್ಯಾಹ್ನ 3ಕ್ಕೆ ದೇವಸ್ಥಾನದ ಹೊರ ಆವರಣದಲ್ಲಿ 25 ಜೊತೆ ಕುಸ್ತಿಪಂದ್ಯಾವಳಿ ನಡೆಯಲಿದೆ. ರಾತ್ರಿ ಮೈಸೂರು ತಾಲೂಕು ದಾಸನಕೊಪ್ಪಲಿನ ಗ್ರಾಮಸ್ಥರಿಂದ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.

ನ.19ರಂದು ಸರಳ ಮದುವೆ
ಜಾತ್ರಾ ಯಶಸ್ವಿಗೆ ದುಡಿದವರಿಗೆ ಹಾಗೂ ಅವರ ಸ್ನೇಹಿತರು, ನೆಂಟರಿಷ್ಟರಿಗೆ ಪ್ರತಿವರ್ಷದಂತೆ ನಳಿನಿರಾಜು ಕುಟುಂಬದವರು ವಿಶೇಷ ದಾಸೋಹದ ಜೊತೆಗೆ ಒಂದು ಜೋಡಿಯ ಸರಳ ವಿವಾಹವನ್ನು ಸಹ ನಡೆಸಿಕೊಡಲಿದ್ದಾರೆ.
ಜಾತ್ರಾ ಸಂದರ್ಭ ಗದ್ದಿಗೆಗೆ ಮೈಸೂರು, ಹುಣಸೂರು, ಎಚ್.ಡಿ.ಕೋಟೆಗಳಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications