Yaduveer wadiyar: ಮೈಸೂರು ಅರಮನೆಯಲ್ಲಿ ಯುದುವೀರ್ ಒಡೆಯರ್- ತ್ರಿಷಿಕಾ ಜಗಳ ಆಡ್ತಾರಾ?
ಬೆಂಗಳೂರು, ಅಕ್ಟೋಬರ್ 19: ಈ ಬಾರಿ ನಾಡಹಬ್ಬ ದಸರಾದ ಸಂಭ್ರಮದ ಜೊತೆಗೆ ಮತ್ತೊಂದು ಸಂತೋಷ ಮನೆ ಮಾಡಿತ್ತು. ಮೈಸೂರು ಒಡೆಯರ್ ರಾಜಪರಿವಾರಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಪತ್ನಿ ತ್ರಿಷಿಕಾ ದಂಪತಿಗೆ ಎರಡನೇ ಗಂಡು ಮಗು ಜನಿಸಿದೆ. ಸದ್ಯ ಅರಮನೆಯಲ್ಲಿ ಮಗು ಆಗಮನದ ಸಂತೋಷ ತುಂಬಿದೆ.
ಮೈಸೂರಿನ ಅರಮನೆಯ ಮಹಾರಾಜ ಸದ್ಯ ಸಂಸದರಾಗಿರುವ ಯದುವೀರ್ ಒಡೆಯರ್ ಅವರ ಕೆಲವು ವೈಯಕ್ತಿಕ ಮಾಹಿತಿ ಇಲ್ಲಿದೆ. ಈ ಬಗ್ಗೆ ಸ್ವತಃ ಯದುವೀರ್ ಒಡೆಯರ್ ನ್ಯೂಸ್ಫಸ್ಟ್ ವಾಹಿನಿ ಜೊತೆ ಮಾತನಾಡಿದ್ದಾರೆ.

ಅರಮನೆಯಲ್ಲಿ ಮಹರಾಜರು ಹಾಗೂ ಅವರ ಪತ್ನಿ ಜಗಳ ಆಡುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಯುದುವೀರ್ ಒಡೆಯರ್, ಸಾಮಾನ್ಯವಾಗಿ ನಾವು ಜಗಳ, ಗಲಾಟೆ ಮಾಡಲ್ಲ ಅನಿಸುತ್ತದೆ. ಆದರೆ ಇದ್ದೇ ಇರುತ್ತದೆ. ಎಲ್ಲಾ ಮನೆಗಳಲ್ಲಿ ಅದು ಸಹಜ. ಅರಮನೆ ಇರಬಹುದು, ಸಾಮಾನ್ಯರ ಮನೆ ಇರಬಹುದು, ಶ್ರೀಮಂತರಿರಬಹುದು, ಬಡವರಿರಬಹುದು ಯಾರೇ ಇರಬಹುದು ಮನೆಯಲ್ಲಿ ಸಂಕಷ್ಟ, ಸಂಘರ್ಷ ಇಲ್ಲದೇ ಜೀವನ ನಡೆಸಲು ಸಾಧ್ಯವಿಲ್ಲ ಎಂದರು.
ತಮ್ಮ ಇಷ್ಟದ ಆಹಾರದ ಬಗ್ಗೆ ಮಾತನಾಡಿದ ಯುದುವೀರ್, ನನಗೆ ಸಾಮಾನ್ಯವಾಗಿ ಹುರುಳಿ ಸಾರು ತುಂಬಾನೇ ಇಷ್ಟ. ಅಂದರೆ ಹುರುಳಿ ಸಾರು ಅನ್ನ, ಹುರುಳಿ ಸಾರು ರಾಗಿ ಮುದ್ದೆ ಬಹಳ ಇಷ್ಟ. ಆದರೆ ದಸರಾ ಸಮಯದಲ್ಲಿ ಹುರುಳಿ ಸಾರನ್ನು ಹೆಚ್ಚು ಮಾಡುವುದಿಲ್ಲ. ಸಾಮಾನ್ಯವಾಗಿ ಎಲ್ಲಾ ಊಟಗಳು, ಎಲ್ಲಾ ಆಹಾರ ಪದ್ಧತಿಗಳೂ ನನಗೆ ಇಷ್ಟ. ಊಟದಲ್ಲಿ ನನಗೆ ಅದು-ಇದು ಅಂತಾ ಏನಿಲ್ಲ. ಆದರೆ ಒಂದೇ ಒಂದು ಊಟ ತಿನ್ನಲು ಅವಕಾಶ ಎಂದರೆ ನಾನು ಹುರುಳಿ ಸಾರನ್ನು ಆಯ್ಕೆ ಮಾಡುತ್ತೇನೆ ಎಂದು ಹೇಳಿದರು.

ನನಗೆ ಅಡುಗೆ ಮಾಡಲು ಹೆಚ್ಚಾಗಿ ಬರುವುದಿಲ್ಲ. ಅಡುಗೆ ಭಟ್ಟರಾಗಿ ನನಗೆ ಅಡುಗೆ ಮಾಡಲು ಗೊತ್ತಿಲ್ಲ. ಆದರೆ ನಾನು ಯುಎಸ್ನಲ್ಲಿ ಇರುವಾಗ ಸ್ವಲ್ಪ ಆದ್ರೂ ಕಲಿತಿರಲೇ ಬೇಕಿತ್ತು. ಅಲ್ಲಿ ಕಲಿತಿರುವುದು ಗೊತ್ತಿದೆ ನನಗೆ. ಇಲ್ಲಿಗೆ ಬಂದ ಮೇಲೆ ನಾನು ಜಾಸ್ತಿ ಮಾಡಿಲ್ಲ. ಬಹುಶಃ ಎರಡು ಮೂರು ಸರಿ ಮಾಡಿರಬಹುದು ಎಂದರು.
ತಮ್ಮ ಹವ್ಯಾಸದ ಬಗ್ಗೆ ಮಾತನಾಡಿದ ಯುದುವೀರ್, ಹಿಂದೆ ಎಲ್ಲಾ ನಾನು ಟೆನ್ನಿಸ್ ಆಡುತ್ತಿದೆ. ರನ್ನಿಂಗ್, ವರ್ಕ್ಔಟ್ ಎಲ್ಲಾ ಮಾಡುತ್ತಿದೆ ಆದರೆ ಈಗ ಅದಕ್ಕೆಲ್ಲಾ ಸಮಯ ಇಲ್ಲ. ಈಗ ಫ್ರೀ ಸಮಯ ಇದ್ದರೂ ಕೂಡ ಸುದ್ದಿ ಫಾಲೋ ಅಪ್ ಮಾಡುವುದರಲ್ಲಿಯೇ ಕಳೆದು ಹೋಗುತ್ತದೆ. ಏನಾದರೂ ನಿರಂತರ ಕೆಲಸ ನಡೆಯುತ್ತಲೇ ಇರುತ್ತದೆ. ಆಫೀಸ್ ಕೆಲಸ, ಆಫೀಸ್ ಇಲ್ಲ ಅಂದರೆ ಪ್ರವಾಸ, ಪ್ರವಾಸ ಇಲ್ಲ ಅಂದರೆ ಕಾರ್ಯಕ್ರಮ ಇರುತ್ತದೆ. ಹೀಗೆ ನಿರಂತರವಾಗಿ ಬ್ಯೂಸಿಯಾಗಿರುತ್ತೇನೆ ಎಂದು ಹೇಳಿದರು.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications