ದಸರಾ ಚಲನಚಿತ್ರೋತ್ಸವಕ್ಕೆ ಮೆರಗು ತಂದ ಸ್ಯಾಂಡಲ್ ವುಡ್ ಸ್ಟಾರ್ಸ್
ಮೈಸೂರು, ಅಕ್ಟೋಬರ್. 10 : ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆದ ಚಲನಚಿತ್ರೋತ್ಸವಕ್ಕೆ ಇಂದು ಬುಧವಾರ (ಅ.10) ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.
ಕಲಾಮಂದಿರದಲ್ಲಿ ದೀಪ ಬೆಳಗುವ ಮೂಲಕ ದಸರಾ ಚಲನಚಿತ್ರೋತ್ಸವಕ್ಕೆ ಕುಮಾರಸ್ವಾಮಿ ಚಾಲನೆ ನೀಡಿದರು. ಕಾರ್ಯಕ್ರಮದ ನಂತರ ಕಿರುಚಿತ್ರದ ಇತಿಹಾಸ, ಸ್ವರೂಪ ಮತ್ತು ಸಂವಿಧಾನ ಪ್ರಸ್ತುತತೆ ಇದರೊಟ್ಟಿಗೆ ಕಿರುಚಿತ್ರಗಳ ಮಹತ್ವ ಮತ್ತು ಮಾರುಕಟ್ಟೆ ವಿಷಯದ ಬಗ್ಗೆ ಉಪನ್ಯಾಸ ನಡೆಯಿತು.
408ನೇ ಮೈಸೂರು ದಸರಾ: ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭ
ಈ ವೇಳೆ ನಾಗತಿಹಳ್ಳಿ ಚಂದ್ರಶೇಖರ್, ಚೆನ್ನೇಗೌಡ, ವಿಜಯ ರಾಘವೇಂದ್ರ, ರಿಷಬ್ , ಹರ್ಷಿಕಾ ಶೆಟ್ಟಿ , ಪಾರುಲ್ ಯಾದವ್ , ಸತ್ಯಪ್ರಕಾಶ್ , ತಿಥಿ ಸಿನಿಮಾ ಖ್ಯಾತಿಯ ಸೆಂಚುರಿ ಗೌಡ , ಗಡ್ಡಪ್ಪ, ಶ್ರೀರಂಗಪಟ್ಟಣದ ಶ್ರೀದೇವಿ ಚಿತ್ರಮಂದಿರದ ಮಾಲೀಕರಾದ ಲಕ್ಷ್ಮೀದೇವಮ್ಮ , ವಿತರಕರಾದ ರಾಜೇಂದ್ರ, ನಿರ್ಮಾಪಕ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.
ದಸರೆಗೆ ವೈಭವದ ಚಾಲನೆ: ಕೊಡಗು ಸಂತ್ರಸ್ತರಿಗೆ 25 ಕೋಟಿ ರೂ. ಘೋಷಿಸಿದ ಸುಧಾ ಮೂರ್ತಿ
ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಐವರು ಟಾಂಗಾ ಚಾಲಕರಿಗೆ ಸಮವಸ್ತ್ರ ಸಹ ವಿತರಿಸಲಾಯಿತು. ಹಾಗೆಯೇ ದಸರಾ ಚಲನಚಿತ್ರೋತ್ಸವ ಮಾಹಿತಿ ಪುಸ್ತಕ ಬಿಡುಗಡೆಗೊಳಿಸಲಾಯಿತು. ಸಚಿವರಾದ ಜಯಮಾಲಾ, ಜಿಟಿ ದೇವೇಗೌಡ , ಸಾರಾ ಮಹೇಶ್ , ಎನ್.ಮಹೇಶ್, ಶಾಸಕರಾದ ನಾಗೇಂದ್ರ, ನಿರಂಜನ್ , ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ್ , ನಜೀರ್ ಅಹಮದ್ , ಶ್ರೀಕಂಠೇಗೌಡ , ಅಶ್ವಿನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಮೈಸೂರು ದಸರಾ ಉದ್ಘಾಟನೆ LIVE: ಇದು ನನ್ನ ಪೂರ್ವಜನ್ಮದ ಪುಣ್ಯ ಎಂದ ಸುಧಾಮೂರ್ತಿ
ನಂತರ ಕಲಾಮಂದಿರ ಆವರಣದಲ್ಲಿ ಸಿಎಂ ಒಂದು ಸುತ್ತು ಸುತ್ತಿ ಬಂದರು. ಇದೇ ವೇಳೆ ನೀಲ ಮೇಘ ಶ್ಯಾಮ , ಕಾಣದ ಕಡಲಿಗೆ ಸೇರಿದಂತೆ ದಶಕದ ಹಿಂದಿನ ಹಳೆಯ ಗೀತೆಗಳು ಕಾರ್ಯಕ್ರಮದಲ್ಲಿ ಮೂಡಿ ಬಂದಿದ್ದು , ಯುವ ಸಮೂಹ ಹರ್ಷೋದ್ಗಾರದಿಂದ ಚಪ್ಪಾಳೆ ಹಾಕಿ ಸಂಭ್ರಮಿಸಿದರು.