ಮೈಸೂರು ಮೇಯರ್ ಸ್ಥಾನ ಜೆಡಿಎಸ್‌ ಕೈತಪ್ಪಿದ್ದಕ್ಕೆ ಜಿ.ಟಿ.ದೇವೇಗೌಡ ಬೇಸರ

Recommended Video

      ಸಿದ್ದರಾಮಯ್ಯನವರ ಮೇಲೆ ಜಿ ಟಿ ದೇವೇಗೌಡ ಅಸಮಾಧಾನ | Oneindia Kannada

      ಮೈಸೂರು, ನವೆಂಬರ್ 17: ಮೈಸೂರು ಮೇಯರ್ ಸ್ಥಾನ ಜೆಡಿಎಸ್‌ ಕೈತಪ್ಪಿದ್ದಕ್ಕೆ ಸಚಿವ ಜಿ.ಟಿ.ದೇವೇಗೌಡ ಅವರು ಬೇಸರಗೊಂಡಿದ್ದಾರೆ.

      'ಮೈಸೂರಿನಲ್ಲಿ ನಮ್ಮದೇನೂ ನಡೆಯುವುದಿಲ್ಲ, ಎಲ್ಲಾ ಹೈಕಮಾಂಡ್ ಹೇಳಿದಂತೆಯೇ ಆಗಬೇಕು' ಎಂದು ಮಾಧ್ಯಮಗಳ ಮುಂದೆ ಅವರು ಅಸಮಾಧಾನ ಹೊರಹಾಕಿದ್ದಾರೆ.

      ಹೈಕಮಾಂಡ್ ಹೇಳಿದಂತೆ ಕೇಳಲೇಬೇಕು, ದೊಡ್ಡವರ ಮಾತಿಗೆ ತಲೆ ಬಾಗುತ್ತೇವೆ ಎಂದು ಜಿ.ಟಿ.ದೇವೇಗೌಡ ಹೇಳಿದ್ದಾರೆ. ಅವರ ಮಾತಿನಲ್ಲಿ ಸ್ಪಷ್ಟ ಅಸಮಾಧಾನ ಇತ್ತೆಂಬುದು ಖಾತ್ರಿ.

      GT Deve gowda unhappy with JDS highcommand

      ಮೇಯರ್ ಸ್ಥಾನ ಜೆಡಿಎಸ್‌ಗೆ ಬೇಕು ಎಂದು ಜಿ.ಟಿ.ದೇವೇಗೌಡ ಅವರು ಪಟ್ಟು ಹಿಡಿದಿದ್ದರು. ಅವರೊಂದಿಗೆ ಸಾ.ರಾ.ಮಹೇಶ್ ಸಹ ಮೇಯರ್ ಸ್ಥಾನ ಜೆಡಿಎಸ್‌ಗೆ ಬೇಕೆಂದು ಹಠ ತೊಟ್ಟಿದ್ದರು. ಆದರೆ ಸಿದ್ದರಾಮಯ್ಯ ಅವರು ಎಚ್‌ಡಿ.ದೇವೇಗೌಡ ಅವರೊಂದಿಗೆ ಮಾತನಾಡಿ ಕಾಂಗ್ರೆಸ್‌ಗೆ ಮೇಯರ್‌ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

      ಸಿದ್ದರಾಮಯ್ಯ ಅವರ ಹಠಕ್ಕೆ ಜಯವಾಗಿರುವುದು ಜಿ.ಟಿ.ದೇವೇಗೌಡ ಅವರ ಅಸಮಾಧಾನಕ್ಕೆ ಕಾರಣ ಎನ್ನಲಾಗುತ್ತಿದೆ. ಈಗಾಗಲೇ ಎರಡು ಸಚಿವ ಸ್ಥಾನವನ್ನು ಮೈಸೂರಿನಲ್ಲಿ ಜೆಡಿಎಸ್‌ಗೆ ನೀಡಲಾಗಿದೆ ಹಾಗಾಗಿ ಮೇಯರ್ ಕಾಂಗ್ರೆಸ್‌ಗೆ ನೀಡಿರೆಂದು ಸಿದ್ದರಾಮಯ್ಯ ವಾದ ಮಂಡಿಸಿದ್ದರು.

      ಮೊದಲ ಹಂತದಲ್ಲಿ ಕಾಂಗ್ರೆಸ್‌ ಸದಸ್ಯರು ಮೇಯರ್ ಆಗಲಿದ್ದಾರೆ. ಎರಡನೇ ಹಂತಕ್ಕೆ ಜೆಡಿಎಸ್‌ಗೆ ಮೇಯರ್ ಪಟ್ಟ ಒಲಿಯಲಿದೆ. ಹೀಗೆ ಅಧಿಕಾರವನ್ನು ಎರಡೂ ಪಕ್ಷದವರು ಹಂಚಿಕೊಳ್ಳಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+