ಮೈಸೂರಿನಲ್ಲಿ ಇನ್ನು ಸಿಗೋದು 3 ಆನೆಗಳು ಮಾತ್ರ!
ಮೈಸೂರು, ಫೆ.17 : ಆನೆಗಳನ್ನು ನೋಡಲು ಮೈಸೂರು ಮೃಗಾಲಯಕ್ಕೆ ಹೋಗುವ ಪ್ರವಾಸಿಗರ ಇನ್ನುಮುಂದೆ ನಿರಾಸೆ ಕಾದಿದೆ. ಹೌದು, ಮೃಗಾಲಯದಲ್ಲಿನ ಆನೆಗಳ ಸಂಖ್ಯೆಯನ್ನು ಕಡಿತಗೊಳಿಸಲು ಮೃಗಾಲಯದ ಆಡಳಿತ ಮಂಡಳಿ ನಿರ್ಧರಿಸಿದೆ. ಇದರಿಂದಾಗಿ ಮೃಗಾಲಯದಲ್ಲಿ ಮೂರು ಆನೆಗಳ ದರ್ಶನ ಭಾಗ್ಯ ಮಾತ್ರ ದೊರೆಯಲಿದೆ.
ಕೇಂದ್ರ ಮೃಗಾಲಯ ಪ್ರಾಧಿಕಾರ 2009ರಲ್ಲಿ ಹೊರಡಿಸಿದ್ದ ಆದೇಶವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಮೈಸೂರು ಮೃಗಾಲಯ ಆಡಳಿತ ಮಂಡಳಿ ಸಜ್ಜಾಗಿದೆ. ಸದ್ಯ ಝೂನಲ್ಲಿ ಏಷ್ಯಾದ ಆರು ಮತ್ತು ಆಫ್ರಿಕಾದ 2 ಆನೆಗಳಿವೆ. ಇವುಗಳಲ್ಲಿ ಎರಡರಿಂದ ಮೂರು ಆನೆಗಳನ್ನು ಮಾತ್ರ ಮೃಗಾಲಯದಲ್ಲಿ ಇಟ್ಟುಕೊಳ್ಳಲು ನಿರ್ಧರಿಸಲಾಗಿದ್ದು, ಉಳಿದವುಗಳನ್ನು ಪುನರ್ವಸತಿ ಕೇಂದ್ರಕ್ಕೆ ರವಾನಿಸಲು ಸಿದ್ಧತೆ ನಡೆಸಿದೆ. [ಮೃಗಾಲಯದಲ್ಲಿ ಇನ್ನು ವಾಲಿ ಇಲ್ಲ]

ಮೃಗಾಲಯದ ಆನೆಗಳ ಉಪಚಾರಕ್ಕಾಗಿ ಮೈಸೂರು ಹೊರವಲಯದ ಕೂರ್ಗಳ್ಳಿ ಬಳಿ ಪುನರ್ವಸತಿ ಕೇಂದ್ರವೊಂದನ್ನು ತೆರೆಯಲಾಗಿದೆ. ಮೃಗಾಲಯದಲ್ಲಿ ಎರಡು ಅಥವ ಮೂರು ಆನೆಗಳನ್ನು ಇಟ್ಟುಕೊಂಡು ಉಳಿದ ಆನೆಗಳ ಈ ಕೇಂದ್ರದಲ್ಲಿ ನೋಡಿಕೊಳ್ಳಲಾಗುತ್ತದೆ. ಐದು ತಿಂಗಳಿಗೊಮ್ಮೆ ಮೃಗಾಲಯದಲ್ಲಿ ಆನೆಗಳನ್ನು ಕೇಂದ್ರಕ್ಕೆ, ಕೇಂದ್ರದ ಆನೆಗಳನ್ನು ಮೃಗಾಲಯಕ್ಕೆ ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ. [ಮೈಸೂರು ಝೂ ವೆಬ್ ಸೈಟ್ ನೋಡಿ]
ಕೇಂದ್ರ ಮೃಗಾಲಯ ಪ್ರಾಧಿಕಾರ 2009ರಲ್ಲಿ ಮೃಗಾಲಯದಲ್ಲಿ ಆನೆಗಳನ್ನು ಇಟ್ಟುಕೊಳ್ಳುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿದ್ದ ಮೈಸೂರು ಮೃಗಾಲಯ, ಆನೆಗಳ ಸಂಖ್ಯೆಯಲ್ಲಿ ಕಡಿಮೆ ಮಾಡುತ್ತೇವೆ. ಜನರನ್ನು ಆಕರ್ಷಿಸಲು ಮೃಗಾಲಯದಲ್ಲಿ ಆನೆಗಳು ಅಗತ್ಯವಾಗಿವೆ ಎಂದು ತಿಳಿಸಿತ್ತು.
ಈ ನಿಯಮವನ್ನು ಜಾರಿಗೆ ತರಲು ಮೃಗಾಲಯದ ಆಡಳಿತ ಮಂಡಳಿ ಕೂರ್ಗಳ್ಳಿ ಬಳಿ ಪುನರ್ವಸತಿ ಕೇಂದ್ರವೊಂದನ್ನು ತೆರೆದಿದೆ. ಮೃಗಾಲಯದಲ್ಲಿ ಎರಡು ಅಥವ ಮೂರು ಆನೆಗಳನ್ನು ಇಟ್ಟುಕೊಂಡು ಉಳಿದ ಆನೆಗಳನ್ನು ಕೂರ್ಗಳ್ಳಿಗೆ ಸ್ಥಳಾಂತರಿಸಲಾಗುವುದು ಎಂದು ಮೃಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ರವಿ ಹೇಳಿದ್ದಾರೆ. ಕೂರ್ಗಳ್ಳಿ ಕೇಂದ್ರ ಉತ್ತಮವಾಗಿದ್ದು, ಆನೆಗಳಿಗೆ ಅಲ್ಲಿ ಸಂಚರಿಸಲು ಹೆಚ್ಚಿನ ಸ್ಥಳಾವಕಾಶವಿದೆ ಎಂದು ಅವರು ಹೇಳಿದ್ದಾರೆ.
ಈ ಪ್ರಕ್ರಿಯೆ ಈ ತಿಂಗಳ ಅಂತ್ಯದಲ್ಲಿ ಆರಂಭವಾಗುವ ಸಾಧ್ಯತೆ ಇದ್ದು, ನಂತರ ನೀವು ಮೃಗಾಲಯಕ್ಕೆ ಮಕ್ಕಳೊಂದಿಗೆ ಹೋದಾಗ ಅಲ್ಲಿ ಮೂರು ಆನೆಗಳು ಮಾತ್ರ ಕಾಣಿಸಲಿವೆ. ಉಳಿದ ಆನೆಗಳು ಪುನರ್ವಸತಿ ಕೇಂದ್ರದಲ್ಲಿರುತ್ತವೆ.
-
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಏರಿಕೆ: ಇಲ್ಲಿದೆ ಏಪ್ರಿಲ್ 9ರ ದರಪಟ್ಟಿ












Click it and Unblock the Notifications