ದಸರಾ ಫಲ- ಪುಷ್ಪ ಪ್ರದರ್ಶನ: ಅರಳುತ್ತಿದೆ ಕಮಲ ದೇವಸ್ಥಾನ
ಮೈಸೂರು, ಸೆಪ್ಟೆಂಬರ್.21: ಅಕ್ಟೋಬರ್ 10ರಿಂದ 19ರವರೆಗೆ ನಡೆಯಲಿರುವ ವಿಶ್ವವಿಖ್ಯಾತ ದಸರೆಗೆ ಇನ್ನೇನು ದಿನಗಣನೆ ಆರಂಭವಾಗಿದೆ. ಈ ಬಾರಿಯ ದಸರೆಯ ಆಕರ್ಷಣೆ ಕೇಂದ್ರ ಬಿಂದು ಗಾಜಿನ ಅರಮನೆ. ಇದಕ್ಕೆ ಮತ್ತಷ್ಟು ಮೆರಗು ಕೊಡಲು ಕಮಲ ದೇವಸ್ಥಾನದ ಹೂವಿನ ಮಾದರಿ ನಿರ್ಮಿಸಲಾಗುತ್ತಿದೆ.
ಪ್ರತಿ ವರ್ಷ ದಸರಾ ಮಹೋತ್ಸವ ಸಂದರ್ಭದಲ್ಲಿ ಕುಪ್ಪಣ್ಣ ಪಾರ್ಕ್ ನಲ್ಲಿ ಒಂದಲ್ಲ ಒಂದು ಹೂವಿನ ಮಾದರಿಯನ್ನು ಪ್ರದರ್ಶಿಸಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಫಲ- ಪುಷ್ಪ ಪ್ರದರ್ಶನದಲ್ಲಿ ಈ ಬಾರಿಯ ವಿಶೇಷ ಕಮಲ ದೇವಸ್ಥಾನ.
ಕಮಲ ದೇವಸ್ಥಾನದ ಮಾದರಿಯನ್ನು ನಿರ್ಮಿಸಲು ಮೈಸೂರು ಜಿಲ್ಲಾಡಳಿತ ಮತ್ತು ತೋಟಗಾರಿಕೆ ಇಲಾಖೆ ನಿರ್ಧರಿಸಿದ್ದು, 1986ರ ಡಿಸೆಂಬರ್ನಲ್ಲಿ ಬಹಾಯಿ ಪೂಜಾ ಮನೆಯಾಗಿ ಸಮರ್ಪಿಸಲ್ಪಟ್ಟ ಕಮಲ ದೇವಸ್ಥಾನದ ಹೂವಿನ ಮಾದರಿ ಈ ಬಾರಿ ಪ್ರವಾಸಿಗರನ್ನು ಸೆಳೆಯಲಿದೆ.

ತಂಪಾದ ವಾತಾವರಣ ಒದಗಿಸುವ ಗಾಜಿನ ಮನೆಯಲ್ಲಿ ಹೂವುಗಳ ತಾಜಾತನ ದೀರ್ಘಕಾಲ ಉಳಿಯಲಿದೆ. ಸಾವಿರಾರು ಗುಲಾಬಿ ಹೂವು, ಆರ್ಕಿಡ್ ಮತ್ತು ಕಮಲದ ಹೂವುಗಳನ್ನು ಬಳಸಿ ಈ ಕಮಲ ದೇವಸ್ಥಾನದ ಮಾದರಿ ನಿರ್ಮಿಸಲಾಗುತ್ತಿದೆ.
ಫಲ-ಪುಷ್ಪ ಪ್ರದರ್ಶನದ ಪ್ರವೇಶ ಶುಲ್ಕ ಮತ್ತು ಮಳಿಗೆಗಳ ಗುತ್ತಿಗೆಯನ್ನು ಮೈಸೂರು ಮೂಲದ ಪ್ರಮುಖ ಸಂಸ್ಥೆಯೊಂದಕ್ಕೆ 70.5 ಲಕ್ಷ ರೂ.ಗಳಿಗೆ ನೀಡಲಾಗಿದ್ದು, ಎಲ್ಲವನ್ನೂ ಸಂಸ್ಥೆಯೇ ನಿರ್ವಹಿಸಲಿದೆ.
ಬಹು ವಿಶೇಷವಾದ ಗಾಜಿನ ಮನೆ
ಮೈಸೂರಿನ ಪಾರಂಪರಿಕ ಕಟ್ಟಡಗಳ ಶೈಲಿಯ ವಿನ್ಯಾಸದಲ್ಲಿರುವ ಗಾಜಿನ ಅರಮನೆ ಕಾಮಗಾರಿ ಭರದಿಂದ ಸಾಗಿದೆ. ಪಿತೃಪಕ್ಷ ಆರಂಭಕ್ಕೂ ಮುನ್ನ ಅಂದರೆ ಈ ಹುಣ್ಣಿಮೆಯ ಒಳಗಾಗಿ ಶುಭ ದಿನ ನೋಡಿ ಗುತ್ತಿಗೆದಾರ ಗಾಜಿನ ಅರಮನೆಯನ್ನು ತೋಟಗಾರಿಕೆ ಇಲಾಖೆ ಸುಪರ್ದಿಗೆ ಒಪ್ಪಿಸಲಿದ್ದಾರೆಂದು ಹೇಳಲಾಗಿದೆ.
ಗಾಜಿನ ಮನೆಗೆ SAINT-GOBAIN GLASS ಬಳಸಿದ್ದು, ಮಧ್ಯ ಪದರದಲ್ಲಿ 1.52 ಎಂಎಂ ಅಳತೆಯ ಪಿವಿಸಿ ಫಿಲ್ಮ್ ಉಳ್ಳ 13.52 ಎಂಎಂ ದಪ್ಪದ ಒಡೆಯದ ಗಾಜು ಬಳಸಲಾಗಿದೆ. ನಾಲ್ಕು ದಿಕ್ಕಿನಲ್ಲಿ ದೊಡ್ಡ ಸೆನ್ಸಾರ್ ಯುಕ್ತ ಗಾಜಿನ ದ್ವಾರಗಳಿವೆ.

ತಳಮಟ್ಟದಿಂದ 21 ಮೀಟರ್ ಎತ್ತರ, 36 ಮೀಟರ್ ಸುತ್ತಳತೆ, 18 ಮೀಟರ್ ಡೂಮ್, 6 ಮೀಟರ್ ಎತ್ತರದ ಗೋಡೆ ಎಲ್ಲವೂ ಗಾಜಿನಲ್ಲಿಯೇ ನಿರ್ಮಾಣವಾಗಿದೆ.
ಮೈಸೂರಿಗೆ ಬರುವ ಪ್ರವಾಸಿಗರು ಮೈಸೂರು ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಜಗನ್ಮೋಹನ ಅರಮನೆ, ಸಂತ ಫಿಲೋಮಿನಾ ಚರ್ಚ್ ಇನ್ನಿತರೆ ಪ್ರವಾಸಿ ತಾಣಗಳನ್ನು ನೋಡುವುದರ ಜೊತೆಗೆ ಈ ಸುಂದರ ಗಾಜಿನ ಅರಮನೆಯನ್ನೂ ನೋಡಬಹುದು.
ಒಟ್ಟಾರೆ 7.45 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯ ಮೇಲುಸ್ತುವಾರಿಯಲ್ಲಿ ಬೆಂಗಳೂರಿನ ನಿಖಿತಾ ಬಿಲ್ಡ್ ಟೆಕ್ ಕಂಪನಿಗೆ ಗಾಜಿನ ಅರಮನೆ ಗುತ್ತಿಗೆ ನೀಡಲಾಗಿದ್ದು, ಕಾಮಗಾರಿ ಪೂರ್ಣವಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications