ಮೈಸೂರಿನಲ್ಲಿ ಪ್ರತಿಮೆಗಳಿಗೂ ಮಾಸ್ಕ್ ಹಾಕುವ ಮೂಲಕ ಜಾಗೃತಿ
ಮೈಸೂರು, ಮೇ 22: ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ವೈರಸ್ ಸೋಂಕನ್ನು ನಿಯಂತ್ರಿಸಲು ಇಡೀ ದೇಶವೇ ಒಂದಾಗಿದೆ. ಕೋವಿಡ್-19 ಸೋಂಕಿನ ವಿರುದ್ಧ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಇವುಗಳಲ್ಲಿ ಜನ ಜಾಗೃತಿ ಮೂಡಿಸುವುದೂ ಒಂದಾಗಿದೆ.
Recommended Video
Karnataka Budget 2020 : CM B S Yediyurappa to present 7th Budget today
ಮೈಸೂರು ರೈಲ್ವೇ ಇಲಾಖೆಯು ನಿಲ್ದಾಣದಲ್ಲಿರುವ ಪ್ರತಿಮೆಗಳಿಗೆ ಮಾಸ್ಕ್ ಹಾಕುವ ಮೂಲಕ ವಿನೂತನವಾಗಿ ಜಾಗೃತಿ ಮೂಡಿಸುತ್ತಿದೆ. ಈ ಮೂಲಕ ಕೊರೊನಾ ವೈರಸ್ ನಿಂದ ದೂರವಿರಲು ಮಾಸ್ಕ್ ಧರಿಸೋಣ ಎಂಬ ಸಂದೇಶ ಸಾರುತ್ತಿದೆ.


ಇಂದಿನಿಂದ ರೈಲು ಸಂಚಾರ ಆರಂಭವಾಗಲಿದ್ದು, ಇದರಿಂದ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಕೂಡ ಆಗಲಿದೆ. ಆಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕಷ್ಟವಾಗುತ್ತದೆ. ಜನರು ಜಾಗೃತರಾಗಲಿ ಎಂಬ ಉದ್ದೇಶದಿಂದ ನಿಲ್ದಾಣದಲ್ಲಿರುವ 6 ಪ್ರತಿಮೆಗಳಿಗೆ ಮಾಸ್ಕ್ ತೊಡಿಸಲಾಗಿದೆ. ಇದು ಜನರ ಗಮನ ಸೆಳೆಯುತ್ತಿದೆ.











Click it and Unblock the Notifications