ಮೈಸೂರಿನಲ್ಲಿ ಪ್ರತಿಮೆಗಳಿಗೂ ಮಾಸ್ಕ್ ಹಾಕುವ ಮೂಲಕ ಜಾಗೃತಿ
ಮೈಸೂರು, ಮೇ 22: ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ವೈರಸ್ ಸೋಂಕನ್ನು ನಿಯಂತ್ರಿಸಲು ಇಡೀ ದೇಶವೇ ಒಂದಾಗಿದೆ. ಕೋವಿಡ್-19 ಸೋಂಕಿನ ವಿರುದ್ಧ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಇವುಗಳಲ್ಲಿ ಜನ ಜಾಗೃತಿ ಮೂಡಿಸುವುದೂ ಒಂದಾಗಿದೆ.
Recommended Video
Karnataka
Budget
2020
:
CM
B
S
Yediyurappa
to
present
7th
Budget
today
ಮೈಸೂರು ರೈಲ್ವೇ ಇಲಾಖೆಯು ನಿಲ್ದಾಣದಲ್ಲಿರುವ ಪ್ರತಿಮೆಗಳಿಗೆ ಮಾಸ್ಕ್ ಹಾಕುವ ಮೂಲಕ ವಿನೂತನವಾಗಿ ಜಾಗೃತಿ ಮೂಡಿಸುತ್ತಿದೆ. ಈ ಮೂಲಕ ಕೊರೊನಾ ವೈರಸ್ ನಿಂದ ದೂರವಿರಲು ಮಾಸ್ಕ್ ಧರಿಸೋಣ ಎಂಬ ಸಂದೇಶ ಸಾರುತ್ತಿದೆ.
ಮಂಡ್ಯದಿಂದ ಬರುವವರ ಮೇಲೆ ಕಣ್ಣಿಟ್ಟಿರುವ ಮೈಸೂರು ಜಿಲ್ಲಾಡಳಿತ
ಇಂದಿನಿಂದ ರೈಲು ಸಂಚಾರ ಆರಂಭವಾಗಲಿದ್ದು, ಇದರಿಂದ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಕೂಡ ಆಗಲಿದೆ. ಆಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕಷ್ಟವಾಗುತ್ತದೆ. ಜನರು ಜಾಗೃತರಾಗಲಿ ಎಂಬ ಉದ್ದೇಶದಿಂದ ನಿಲ್ದಾಣದಲ್ಲಿರುವ 6 ಪ್ರತಿಮೆಗಳಿಗೆ ಮಾಸ್ಕ್ ತೊಡಿಸಲಾಗಿದೆ. ಇದು ಜನರ ಗಮನ ಸೆಳೆಯುತ್ತಿದೆ.
Comments
mysuru statue coronavirus awareness railway department kannada news ಮೈಸೂರು ಪ್ರತಿಮೆ ವೈರಸ್ ಜಾಗೃತಿ ರೈಲ್ವೇ ಇಲಾಖೆ ಕನ್ನಡ ಸುದ್ದಿ
English summary
The Mysuru Railway Department is creating a unique awareness by masking the statues at the Railway station.