ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಯಡಿಯೂರಪ್ಪ ಅಳಿಯನಿಂದ ಐಪಿಎಸ್‌ ಅಧಿಕಾರಿಗಳಿಗೇ ಆವಾಜ್

|
Google Oneindia Kannada News

ಮಂಡ್ಯ, ಆಗಸ್ಟ್ 29 : ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸಿಎಂ ಯಡಿಯೂರಪ್ಪ ಅವರ ತಂಗಿ ಮಗ ರಾಜೇಶ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆವಾಜ್ ಹಾಕಿದ ಘಟನೆ ನಡೆದಿದೆ.

'ಯಾರಿಗೂ ಒಲ್ಲದ' ಗೃಹಸಚಿವ ಸ್ಥಾನದಲ್ಲಿರುವ ಬಸವರಾಜ್ ಬೊಮ್ಮಾಯಿ ಸಂದರ್ಶನ'ಯಾರಿಗೂ ಒಲ್ಲದ' ಗೃಹಸಚಿವ ಸ್ಥಾನದಲ್ಲಿರುವ ಬಸವರಾಜ್ ಬೊಮ್ಮಾಯಿ ಸಂದರ್ಶನ

ಸಾರ್ವಜನಿಕ ಸ್ಥಳದಲ್ಲೇ ದರ್ಪ ತೋರಿಸಿ ಏಕ ವಚನದಲ್ಲಿ ಆವಾಜ್ ಹಾಕಿರುವ ಸಿಎಂ ಯಡಿಯೂರಪ್ಪ ಅಳಿಯ ರಾಜೇಶ್ ವರ್ತನೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಯಡಿಯೂರಪ್ಪನವರು ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ವೇಳೆ ಅವರ ಅಳಿಯ ರಾಜೇಶ್ ತಮ್ಮ ಕಾರ್ಯಕರ್ತರ ಜೊತೆ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದಾರೆ. ಆದರೆ, ಸಿಎಂ ಪ್ರೊಟೋಕಾಲ್ ಹಾಗೂ ಅವರ ರಕ್ಷಣೆ ದೃಷ್ಟಿಯಿಂದ ಚಾಮುಂಡಿ ಬೆಟ್ಟದ ದೇವಾಲಯದ ಒಳಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ರಾಜೇಶ್‌ಗೆ ತಿಳಿಸಿದ್ದಾರೆ.

CM Yediyurappa son inlaw used singular word on Police and DCP

ಈ ವೇಳೆ ಕುಪಿತಗೊಂಡ ರಾಜೇಶ್ ಎಸಿಪಿ ಹಾಗೂ ಡಿಸಿಪಿ ಅಧಿಕಾರಿಗಳ ವಿರುದ್ಧವೇ "ಏಯ್, ತೆಗೆಯೋ ಕೈಯಿ..ನನ್ನನ್ನೇ ಒಳಗೆ ಬಿಡಲ್ಲ ಅಂತೀಯ. ನೋಡ್ತಾ ಇರಿ ನೀವೆಲ್ಲ ಎಲ್ಲೆಲ್ಲಿಗೆ ಹೋಗ್ತೀರ?," ಎಂದು ಏಕ ವಚನದಲ್ಲಿ ಕೂಗಾಡಿ ದರ್ಪ ಮೆರೆದಿದ್ದಾರೆ. ಆದರೆ, ಪೊಲೀಸರು ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ನಿಂತಿರುವ ವಿಡಿಯೋ ಇದೀಗ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

English summary
CM Yediyurappa son in law rajesh used singular words on police officers at Chamundi hills Mysuru. This video gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X