ಮೈಸೂರಿನಲ್ಲಿ ಕುಸ್ತಿಯಾಡಿದ ಆಸ್ಟ್ರೇಲಿಯ ಕ್ರಿಕೆಟಿಗ ಬ್ರೇಟ್ ಲೀ!
ಮೈಸೂರು, ಸೆಪ್ಟೆಂಬರ್ 8 : ಕುಸ್ತಿ ಅಂದ್ರೆ ಸಾಕು ಥಟ್ಟೆಂದು ನೆನಪಾಗೋದು ನಮ್ಮ ಪೈಲ್ವಾನ್ ಗಳು. ವಿದೇಶಿಯರೆಲ್ಲಿ ಕುಸ್ತಿ ಅಷ್ಟಕ್ಕಷ್ಟೆ. ಅವರೇನಿದ್ರೂ, ಡಬ್ಲ್ಯೂ ಡಬ್ಲ್ಯೂ ಎಫ್ ಅಷ್ಟೇ. ಆದರೆ ಇದಕ್ಕೆ ಸೆಡ್ಡು ಹೊಡೆಯುವಂತೆ ಇಂದು ಆಸ್ಟ್ರೇಲಿಯಾದ ಪ್ರಸಿದ್ಧ ಕ್ರಿಕೆಟಿಗ ಬ್ರೆಟ್ ಲೀ ಕುಸ್ತಿ ಅಖಾಡಕ್ಕೆ ಇಳಿದು ತೊಡೆ ತಟ್ಟಿ ನಿಂತಿದ್ರು.
ಮೈಸೂರಿನ ಮಾನಸ ಗಂಗೋತ್ರಿಯ ಗ್ಲೈಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಕೆಪಿಎಲ್ ಪಂದ್ಯಾವಳಿಯ ವೀಕ್ಷಕ ವಿವರಣೆಗಾರರಾಗಿ ಆಗಮಿಸಿದ ಆಸ್ಟ್ರೇಲಿಯಾದ ಬ್ರೆಟ್ ಲೀ. ಅವರು ಮೈಸೂರಿಗೆ ಬಂದ ದಿನದಿಂದಲೂ ಇಲ್ಲಿನ ಪ್ರತಿಯೊಂದು ವಿಷಯವನ್ನು ಅಚ್ಚರಿಯಿಂದ ಕೇಳಿ ತಿಳಿಯುತ್ತಿರುವುದಲ್ಲದೇ, ಖುದ್ದು ಪರೀಕ್ಷೆ ನಡೆಸುತ್ತಿದ್ದರು.

ಗುರುವಾರವೂ ಹಾಗೆಯೇ ನಡೆಯಿತು. ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ವಿವಿಧೋದ್ದೇಶ ಕ್ರೀಡಾಂಗಣದ ಕುಸ್ತಿ ಅಖಾಡದಲ್ಲಿ ಬ್ರೇಟ್ ಲಿ ಕೆಲವರೊಂದಿಗೆ ಕುಸ್ತಿಗಿಳಿದಿದ್ದರು. ಗುರುವಾರ ಒಂದೇ ಪಂದ್ಯವಿದ್ದ ಕಾರಣ ಸ್ವಲ್ಪ ಫ್ರೀ ಆಗಿದ್ದ ಅವರು ಮೈಸೂರಿನ ಮಲ್ಲಯುದ್ಧ ಕುಸ್ತಿಯ ಕುರಿತು ತಿಳಿದುಕೊಂಡಿದ್ದರು.
ಆದರೆ ಅಷ್ಟಕ್ಕೇ ಕೈಕಟ್ಟಿ ಕೂರದೇ ತಾವೂ ಅಖಾಡಕ್ಕಿಳಿದರು. ಮೊದಲು ಕುಸ್ತಿ ಅಖಾಡಕ್ಕಿಳಿದ ಫೈಲ್ವಾನ್ ರ ಚಲನವಲನವನ್ನು ತದೇಕಚಿತ್ತರಾಗಿ ವೀಕ್ಷಿಸಿದ ಅವರು ನಂತರ ತಾನು ಚಡ್ಡಿ ಬನಿಯನ್ ನೊಂದಿಗೆ ಅಖಾಡಕ್ಕಿಳಿದರು. ಮಟ್ಟಿಗೆ ನಮಸ್ಕರಿಸಿ ಕುಸ್ತಿಗಿಳಿದು ಎದುರಾಳಿಗಳನ್ನು ಮಣ್ಣು ಮುಕ್ಕಿಸಿದರು.

ಬ್ರೇಟ್ ಲಿ ವಿಜಯಿ ಅಂತ ಅವರ ಕೈ ಮೇಲಕ್ಕೆತ್ತುವ ಮೂಲಕ ಸೂಚಿಸಲಾಯಿತು. ಕೊನೆಗೂ ಗೆಲುವು ಸಾಧಿಸಿ ಪ್ರೇಕ್ಷಕರ ಮನಗೆದ್ದರು. ಬ್ರೇಟ್ ಲೀ ಪರ ಘೋಷಣೆಗಳು ಮೊಳಗಿದವು. ಮೈಸೂರಿಗೆ ಆಗಮಿಸಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications