ಪ್ರತಾಪ್ ಸಿಂಹ ಅಭಿಮಾನಿಗಳೇ ತಪ್ಪದೇ ಹಣ ಹಾಕಿ
ಮೈಸೂರು, ಏ.10: ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಪ್ರತಾಪ್ ಸಿಂಹ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತಯಾಚನೆ ಮಾಡಿದ್ದಾರೆ. ಮಹಿಳಾ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ತಮ್ಮ ಪ್ರಚಾರದ ವೇಳಾಪಟ್ಟಿ, ಪ್ರಚಾರದ ಚಿತ್ರಗಳನ್ನು ಸಮಯ ಸಿಕ್ಕಾಗಲೆಲ್ಲ ಫೇಸ್ ಬುಕ್ ಪುಟಕ್ಕೆ ಹಾಕುತ್ತಾ ಯುವಕರನ್ನು ಸೆಳೆಯುತ್ತಿದ್ದಾರೆ.
ಏಪ್ರಿಲ್ 14ನೇ ಶುಕ್ರವಾರ ಪ್ರತಾಪ ಸಿಂಹ ಅವರು ಕೊಡಗು ಪ್ರವಾಸದಲ್ಲಿರುತ್ತಾರೆ ಎಂದು ತಿಳಿದು ಬಂದಿದೆ. ಬೆಳಿಗ್ಗೆ 10: ಮಡಿಕೇರಿಯಲ್ಲಿ ರೋಡ್ ಶೋ ಮುಗಿಸಿಕೊಂಡು 1.30ರ ವೇಳೆಗೆ ಅಮ್ಮತ್ತಿ ಕಾವಡಿ ಹಬ್ಬಕ್ಕೆ ಭೇಟಿ ನೀಡಲಿದ್ದಾರೆ.
2.00 ಗಂಟೆ ಸುಮಾರಿಗೆ ಚೆಂಬೆಬೆಳ್ಳೂರು 3.30: ಕಾಕೋಟುಪರಂಬು 3.45: ಕೆದಮುಳ್ಳೂರು 4.30: ಬೇಟೋಳಿ 5.30: ವೀರಾಜಪೇಟೆಯಲ್ಲಿ ರೋಡ್ ಶೋ ಮತ್ತು ಬಹಿರಂಗ ಸಮಾವೇಶ 7.00: ಗೋಣಿಕೊಪ್ಪಕ್ಕೆ ಬರಲಿದ್ದಾರೆ. [ಇನ್ನಷ್ಟು ಚಿತ್ರಗಳನ್ನು ಗ್ಯಾಲರಿಯಲ್ಲಿ ನೋಡಿ]
ಈ ನಡುವೆ ಪ್ರತಾಪ್ ಸಿಂಹ ಅವರು ಪತ್ನಿ ಅರ್ಪಿತಾ ಅವರೊಂದಿಗೆ ಮೈಸೂರಿನ ಅರಮನೆಗೆ ಭೇಟಿ ನೀಡಿದ್ದರು. ದಿವಂಗತ ಶ್ರೀಕಂಠದತ್ತ ಒಡೆಯರ್ ಅವರ ಪತ್ನಿ ಪ್ರಮೋದಾ ದೇವಿ ಅವರೊಂದಿಗೆ ಮಾತುಕತೆ ನಡೆಸಿ ಅವರ ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ. ಅರ್ಪಿತಾ ಅವರು ಸಾಹಿತಿ ಎಸ್ ಎಲ್ ಭೈರಪ್ಪ ಅವರೊಂದಿಗೆ ಸಮಾಲೋಚನೆ ನಡೆಸಿದ ಚಿತ್ರಗಳು ಇಲ್ಲಿವೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಾಪ್ ಸಿಂಹ ಹಾಗೂ ಅವರ ಅಭಿಮಾನಿಗಳು ಮೈಸೂರು-ಕೊಡಗು ಕ್ಷೇತ್ರದ ಜನತೆಯಲ್ಲಿ ಮಾಡಿಕೊಂಡಿರುವ ಮನವಿ ಇಲ್ಲಿದೆ ಓದಿ...

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತಯಾಚನೆ
ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಪ್ರತಾಪ್ ಸಿಂಹ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತಯಾಚನೆ ಮಾಡಿದ್ದಾರೆ. ಮಹಿಳಾ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ.

ಈ ಕೆಳಕಂಡ ಖಾತೆಗೆ ದೇಣಿಗೆ ನೀಡಬೇಕಾಗಿ ವಿನಂತಿ
ಎಲ್ಲರಿಗೂ ನಮಸ್ಕಾರ ಕಳೆದ ಕೆಲವು ದಿನಗಳಿಂದ ತುಂಬಾ ಜನ ಪ್ರತಾಪ್ ಸಿಂಹ ಅವರ ಅಭಿಮಾನಿಗಳು, ಹಿತೈಷಿಗಳು ಪ್ರತಾಪ್ ಸಿಂಹ ಅವರ ಚುನಾವಣಾ ವೆಚ್ಚಕ್ಕೆ ಹಣ ಸಹಾಯ ಮಾಡಲು ಇಚ್ಚಿಸಿದ್ದಾರೆ. ಆದ್ದರಿಂದ ಖಾತೆಯನ್ನು ತೆರೆಯಲಾಗಿದೆ.
ಹಣ ಸಹಾಯ ಮಾಡಲು ಇಚ್ಛಿಸುವರು ಈ ಕೆಳಕಂಡ ಖಾತೆಗೆ ದೇಣಿಗೆ ನೀಡಬೇಕಾಗಿ ವಿನಂತಿ. ಹಣ ಸಂದಾಯ ಮಾಡುವ ಮೊದಲು ಈ ಕೆಳಕಂಡ ಮೊಬೈಲ್ ಸಂಖ್ಯೆಗೆ ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬೇಕಾಗಿ ವಿನಂತಿ (9343217888).
ಖಾತೆಯ ವಿವರ
Account Details NAME - PRATHAP SIMHA
AC /NO - 00540110022993
Bank Name - UCO Bank Branch -
Devaraja Urs Road, Mysore
IFSC Code - UCBA0000054

ಮೈಸೂರಿನ ಅರಮನೆಗೆ ಭೇಟಿ ನೀಡಿದ್ದರು
ಈ ನಡುವೆ ಪ್ರತಾಪ್ ಸಿಂಹ ಅವರು ಪತ್ನಿ ಅರ್ಪಿತಾ ಅವರೊಂದಿಗೆ ಮೈಸೂರಿನ ಅರಮನೆಗೆ ಭೇಟಿ ನೀಡಿದ್ದರು. ದಿವಂಗತ ಶ್ರೀಕಂಠದತ್ತ ಒಡೆಯರ್ ಅವರ ಪತ್ನಿ ಪ್ರಮೋದಾ ದೇವಿ ಅವರೊಂದಿಗೆ ಮಾತುಕತೆ ನಡೆಸಿ ಅವರ ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ.

ಪ್ರತಾಪ್ ಯುವಕರನ್ನು ಸೆಳೆಯುತ್ತಿದ್ದಾರೆ
ತಮ್ಮ ಪ್ರಚಾರದ ವೇಳಾಪಟ್ಟಿ, ಪ್ರಚಾರದ ಚಿತ್ರಗಳನ್ನು ಸಮಯ ಸಿಕ್ಕಾಗಲೆಲ್ಲ ಫೇಸ್ ಬುಕ್ ಪುಟಕ್ಕೆ ಹಾಕುತ್ತಾ ಯುವಕರನ್ನು ಸೆಳೆಯುತ್ತಿದ್ದಾರೆ.

ಪ್ರತಾಪ್ ಸಿಂಹ ಅವರು ಪತ್ನಿ ಅರ್ಪಿತಾ
ಅರ್ಪಿತಾ ಅವರು ಸಾಹಿತಿ ಎಸ್ ಎಲ್ ಭೈರಪ್ಪ ಅವರೊಂದಿಗೆ ಸಮಾಲೋಚನೆ ನಡೆಸಿದ ಚಿತ್ರ












Click it and Unblock the Notifications