ಶತಮಾನಗಳ ಇತಿಹಾಸವಿರುವ ಮೈಸೂರಿನ ರೈಲ್ವೆ ವರ್ಕ್ ಶಾಪ್ ಮತ್ತಷ್ಟು ಮೇಲ್ದರ್ಜೆಗೆ
ಮೈಸೂರು, ಅಕ್ಟೋಬರ್. 24: ಮೈಸೂರು ನಗರದ ಅಶೋಕಪುರಂನಲ್ಲಿರುವ ರೈಲ್ವೆ ಕಾರ್ಯಾಗಾರ (ರೈಲ್ವೆ ವರ್ಕ್ಶಾಪ್) ವನ್ನು 35.44 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಹಾಗೂ ಆಧುನೀಕರಣಗೊಳಿಸುವ ಕಾರ್ಯ ನಡೆಯುತ್ತಿದ್ದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಇಂದು ಬುಧವಾರ ಪರಿಶೀಲನೆ ನಡೆಸಿದರು.
ಕೇಂದ್ರ ರೈಲ್ವೆ ಕಾರ್ಯಾಗಾರದ ವ್ಯವಸ್ಥಾಪಕ ಅಜಯ್ ಕುಮಾರ್, ಉಪ ವ್ಯವಸ್ಥಾಪಕ ಎಂ.ರವೀಂದ್ರನ್, ಉಪ ಮುಖ್ಯ ಇಂಜಿನಿಯರ್ ಬಿ.ರಮೇಶ್ ಚಂದ್ರ ಅವರೊಂದಿಗೆ ರೈಲ್ವೆ ಕಾರ್ಯಾಗಾರಕ್ಕೆ ಭೇಟಿ ನೀಡಿದ ಪ್ರತಾಪ್ ಸಿಂಹ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಕೇಂದ್ರ ರೈಲ್ವೆ ಕಾರ್ಯಾಗಾರದಲ್ಲಿ ನಡೆಯುತ್ತಿರುವ ಆಧುನೀಕರಣ ಕಾಮಗಾರಿ 2019ರ ಜೂನ್ ಗೆ ಪೂರ್ಣಗೊಳ್ಳಲಿದೆ.
ಆರ್ಥಿಕ ಬೆಳವಣಿಗೆಯಲ್ಲಿ ರೈಲ್ವೆಯ ಪ್ರಾಮುಖ್ಯತೆ ಹೆಚ್ಚಿರುವುದರ ಹಿನ್ನೆಲೆಯಲ್ಲಿ ರೈಲ್ವೆ ಸಂಸದೀಯ ಸ್ಥಾಯಿ ಸಮಿತಿ ಮೈಸೂರು ರೈಲ್ವೆ ಕಾರ್ಯಾಗಾರದ ಆಧುನೀಕರಣಕ್ಕೆ ಪ್ರಬಲವಾಗಿ ಮನವಿ ಮಾಡಿತ್ತು. ಇದರ ಫಲವಾಗಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿತು.
ಕೇಂದ್ರ ರೈಲ್ವೆ ಕಾರ್ಯಾಗಾರ 500 ಕೆ.ವಿ.ಸಾಮರ್ಥ್ಯದ ಸೋಲಾರ್ ವಿದ್ಯುತ್ ಪ್ಯಾನೆಲ್ ಹೊಂದಿದ್ದು, ಪ್ರತಿವರ್ಷ 50,000 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಉಳಿದ 35,000 ಮೆ.ವ್ಯಾಟ್ ವಿದ್ಯುತ್ ಸೆಸ್ಕ್ ನಿಂದ ಪಡೆಯುತ್ತಿದೆ ಎಂದು ತಿಳಿಸಿದರು.

1,600 ಮಂದಿ ಕಾರ್ಯನಿರ್ವಹಣೆ
ಪ್ರಸ್ತುತ ರೈಲ್ವೆ ಕಾರ್ಯಾಗಾರದಲ್ಲಿ 1,600 ಮಂದಿ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 300 ಮಂದಿಯನ್ನು ನೇಮಕಾತಿ ಮಾಡಿಕೊಳ್ಳುವ ಯೋಜನೆ ಇದೆ.
ಭಾರತೀಯ ರೈಲ್ವೆಯ ಸಾಧನೆಯನ್ನು ಉತ್ತಮಗೊಳಿಸುವ ಹಿನ್ನೆಲೆಯಲ್ಲಿ ರೈಲ್ವೆ ಕೋಚ್ ಗಳನ್ನು ದುರಸ್ತಿಗೊಳಿಸುವ ಹಾಗೂ ಅದನ್ನು ಆಧುನೀಕರಣಗೊಳಿಸುವ ಕಾರ್ಯವನ್ನು ನಡೆಸುವ ರೈಲ್ವೆ ಕಾರ್ಯಾಗಾರದ ಸಾಮರ್ಥ್ಯ ಹೆಚ್ಚಿಸಲು ಹಾಗೂ ಮೂಲಸೌಕರ್ಯಗಳನ್ನು ಒದಗಿಸಲು ಕೇಂದ್ರ ಸರ್ಕಾರ 2016ರ ಮುಂಗಡಪತ್ರದಲ್ಲಿ 35.44 ಕೋಟಿ ರೂ.ಗಳನ್ನು ನೀಡಿತ್ತು ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.

ರೈಲ್ವೆ ಕೋಚ್ ಪರಿಶೀಲನೆ
ನಿಯತಕಾಲಿಕವಾಗಿ ಕೂಲಂಕುಷವಾಗಿ ರೈಲ್ವೆ ಕೋಚ್ ಗಳನ್ನ ಬಳಕೆಗೆ ಯೋಗ್ಯವಾಗಿ ಹಾಗೂ ಸೇವೆಗೆ ಅನುಕೂಲವಾಗಿ ನಿರ್ವಹಣೆ ಮಾಡುವುದು ಇಲ್ಲಿನ ಮುಖ್ಯ ಕಾರ್ಯವಾಗಿದ್ದು, ಎಲ್ಲ ಭಾಗಗಳನ್ನೂ ಬೇರ್ಪಡಿಸಿ ಅವುಗಳನ್ನು ದುರಸ್ತಿ ಮಾಡಿ ಮತ್ತೆ ಜೋಡಿಸುವುದು, ಹಳಿಯ ಮೇಲೆ ಅವು ಸಂಚರಿಸಲು ಯೋಗ್ಯವಾಗಿದೆಯೇ ಎಂಬುದನ್ನು ಪರಿಶೀಲಿಸಿ ನೀಡುವುದು ಸೇರಿದೆ ಎಂದು ಪ್ರತಾಪ್ ಸಿಂಹ ಮಾಹಿತಿ ನೀಡಿದರು.

70 ಕೋಚ್ ಗಳು ಸಿದ್ಧವಾಗುತ್ತಿವೆ
12 ಅಥವಾ 18 ತಿಂಗಳಿಗೊಮ್ಮೆ ಇಲ್ಲವೇ ಅವು ಕ್ರಮಿಸಿರುವ ಮಾರ್ಗದ ಆಧಾರದ ಮೇಲೆ ರೈಲ್ವೆ ಕೋಚ್ ಗಳ ನಿರ್ವಹಣೆ ಮಾಡಲಾಗುವುದು. ನೈಋತ್ಯ ರೈಲ್ವೆ ವಲಯದಲ್ಲಿ ಇದು ಎರಡನೇ ಕಾರ್ಯಾಗಾರವಾಗಿದ್ದು, ಮತ್ತೊಂದು ಹುಬ್ಬಳ್ಳಿಯಲ್ಲಿದೆ. ಪ್ರಸ್ತುತ ತಿಂಗಳಿಗೆ 70 ಕೋಚ್ ಗಳನ್ನು ಇಲ್ಲಿ ಸಿದ್ಧಪಡಿಸಲಾಗುತ್ತಿದೆ.

1932ರಲ್ಲಿ ಮೇಲ್ದರ್ಜೆಗೆ
ಮೇಲ್ದರ್ಜೆಗೇರಿದ ನಂತರ ಇದರ ಸಾಮರ್ಥ್ಯ 80ಕ್ಕೇರಲಿದೆ. ರೈಲ್ವೆ ವರ್ಕ್ಶಾಪ್ ಅನ್ನು 1924ರಲ್ಲಿ ಸ್ಥಾಪಿಸಿದ್ದು, 1932ರಲ್ಲಿ ಇದನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications