South Western Railway: ಮೈಸೂರು ವಿಮಾನ ನಿಲ್ದಾಣ ಬಳಿ ರೈಲ್ವೆಯ ಯೋಜನೆ
ಮೈಸೂರು, ಮೇ 29: ಸಾಂಸ್ಕೃತಿಕ ನಗರಿ ಮೈಸೂರು ವಿಮಾನ ನಿಲ್ದಾಣ ಬಳಿ 'ಗತಿ ಶಕ್ತಿ' ಯೋಜನೆಯಡಿ ನೈಋತ್ಯ ರೈಲ್ವೆಗೆ ಸಂಬಂಧಿಸಿದ ಪ್ರಮುಖ ಯೋಜನೆಗೆ ಕಾಮಗಾರಿ ನಡೆಸಲು ಕಾರ್ಯಸಾಧ್ಯತೆಯ ಸಮೀಕ್ಷೆ ಟೆಂಡರ್ ಆಹ್ವಾನಿಸಲಾಗಿದೆ.
ಮೈಸೂರು-ಚಾಮರಾಜನಗರ ವ್ಯಾಪ್ತಿಯಲ್ಲಿ ಅದರಲ್ಲೂ ವಿಶೇಷವಾಗಿ ಮೈಸೂರು ವಿಮಾನ ನಿಲ್ದಾಣದ ಬಳಿ 8/147 ರಿಂದ 12/576 ಕಿಲೋಮೀಟರ್ಗಳ ಮಧ್ಯೆ ಕಾಮಗಾರಿಗೆ ಉದ್ದೇಶಿಸಲಾಗಿದೆ. ಇಲ್ಲಿ ಅಸ್ತಿತ್ವದಲ್ಲಿರುವ ರೈಲ್ವೆ ಜೋಡಣೆ ಬದಲಾಯಿಸಬೇಕು ಅಥವಾ ಭೂಗತ ಮಾರ್ಗ ನಿರ್ಮಿಸಬೇಕಿದೆ.

ಈ ಕಾಮಗಾರಿ ನಡೆಸಲು ಕಾರ್ಯಸಾಧ್ಯತೆಯ ಸಮೀಕ್ಷೆಯ ನಡೆಸುವ ಉದ್ದೇಶದಿಂದ ನೈಋತ್ಯ ರೈಲ್ವೆಯ ಸಿಗ್ನಲ್ಗಳು ಮತ್ತು ದೂರ ಸಂಪರ್ಕಗಳ ಉಪಮುಖ್ಯ ಯೋಜನಾ ವ್ಯವಸ್ಥಾಪಕರು ಟೆಂಡರ್ ಆಹ್ವಾನಿಸಿದ್ದಾರೆ.
ಈ ಪ್ರದೇಶದಲ್ಲಿ ಒಟ್ಟು 21.99 ಲಕ್ಷ ಮೌಲ್ಯದ ಯೋಜನೆ ಆರಂಭಿಸಲು ತೀರ್ಮಾನಿಸಲಾಗಿದೆ. ಇದನ್ನು ಒಟ್ಟು ಒಂದೂವರೆ ತಿಂಗಳಲ್ಲಿ (45 ದಿನ) ಪೂರ್ಣಗೊಳಿಸಲು ಗುರಿ ಹಾಕಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಯೋಜನೆಗೆ ಎದುರಾದ ಕೆಲವು ಸವಾಲುಗಳು
ಮೈಸೂರು ಹಾಗೂ ಚಾಮರಾಜನಗರ ಸದರಿ ರೈಲು ಮಾರ್ಗದಲ್ಲಿ ಮೈಸೂರು ವಿಮಾನ ನಿಲ್ದಾಣದ ಕಾರ್ಯಾಚರಣೆ ಪ್ರದೇಶಕ್ಕೆ ಹತ್ತಿರದಲ್ಲಿದೆ. ಇಲ್ಲಿ ವಿದ್ಯುದ್ದೀಕರಣಕ್ಕೆ ಬೇಕಾದ ಓವರ್ಹೆಡ್ ಸಲಕರಣೆ (OHE) ಸ್ಥಾಪಿಸಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಿಂದ (AAI) ನಿರಾಕ್ಷೇಪಣಾ ಪ್ರಮಾಣಪತ್ರ (NOC) ಪಡೆಯಲು ಒಂದಷ್ಟು ಸವಾಲುಗಳು ಎದುರಾಗಿವೆ.
AAI ಹೇಳುತ್ತಿರುವುದು ಏನು?
ಭಾರತೀಯ ರೈಲ್ವೆಯ ಓವರ್ಹೆಡ್ ಎಲೆಕ್ಟ್ರಿಕ್ ಲೈನ್ಗಳು ಮತ್ತು ಏರ್ಕ್ರಾಫ್ಟ್ ರಾಡಾರ್ ಮತ್ತು ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ಐಎಲ್ಎಸ್) ಸಿಗ್ನಲ್ ವ್ಯವಸ್ಥೇ ಜೊತೆಗೆ ರೈಲುಗಳನ್ನು ಚಲಿಸುವಂತೆ ಮಾಡಲಾಗುತ್ತಿದೆ. ಈ ಬಗ್ಗೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಿಂದ (AAI) ಗಮನಾರ್ಹ ಕಳವಳ ವ್ಯಕ್ತವಾಗಿದೆ. ಏಕೆಂದರೆ ಇಲ್ಲಿನ ಓವರ್ಹೆಡ್ ಎಲೆಕ್ಟ್ರಿಕ್ ಲೈನ್ಗಳು ಸುರಕ್ಷಿತ ವಿಮಾನ ಕಾರ್ಯಾಚರಣೆಗೆ ಅಪಾಯ ಉಂಟು ಮಾಡಬಹುದೆಂದು ಎಎಐ ಕಳವಳ ವ್ಯಕ್ತಪಡಿಸಿದೆ.

ರೈಲ್ವೆ ಟ್ರ್ಯಾಕ್ ಮರು ಜೋಡಣೆ ಇಲ್ಲವೇ ಇಂಡಕ್ಷನ್ ಶೀಲ್ಡಿಂಗ್ ಪರಿಕಲ್ಪನೆಯ ಬಗ್ಗೆ ಮೈಸೂರು ವಿಭಾಗೀಯ ಗತಿ ಶಕ್ತಿ ಉಪಕ್ರಮದ ಸಭೆಯಲ್ಲಿ ಪ್ರತಾಪ್ ಸಿಂಹ ಸಲಹೆ ನೀಡಿದ್ದಾರೆ. ಏಕೆಂದರೆ ಈ ಪರಿಕಲ್ಪನೆಯನ್ನು ಈಗಾಗಲೇ ಚೆನ್ನೈ ವಿಮಾನ ನಿಲ್ದಾಣದ ಬಳಿ ಅಲ್ಲಿನ CMRL ಮೆಟ್ರೋ ಸಂಸ್ಥೆ ಯಶಸ್ವಿಯಾಗಿ ಜಾರಿಗೊಳಿಸಿದೆ. ಇದರಿಂದ ವಿಮಾನಗಳ ಸಮರ್ಪಕ ಕಾರ್ಯಾಚರಣೆಗೆ ತೊಂದರೆ ಆಗದಂತೆ ನೋಡಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
ರೈಲ್ವೆ ಹಳಿ ಮರುಜೋಡಣೆ ಸೂಕ್ತ?
ಒಂದು ವೇಳೆ ಇಂಡಕ್ಷನ್ ಶೀಲ್ಡಿಂಗ್ ಅಸಾಧ್ಯ ಎಂದಾದರೆ, ಮೈಸೂರು ಏರ್ಪೋರ್ಟ್ ಗಡಿಯಿಂದ ಸುರಕ್ಷಿತ ಕಾರ್ಯಾಚರಣೆ ಅನುಕೂಲವಾಗುವಂತೆ ದೂರದ ಪ್ರದೇಶ ಗುರುತಿಸಬೇಕು. ನಂತರ ಅಲ್ಲಿ ರೈಲ್ವೆ ಹಳಿಗಳನ್ನು ಮರು ಜೋಡಣೆ ಮಾಡಿ, ರೈಲು ಸಂಚಾರಕ್ಕೆ ಅನುಕೂಲ ಆಗುವಂತೆ ಮಾಡಬೇಕೆಂಬುದನ್ನು ಪ್ರಸ್ತಾಪಿಸಿದರು.
ಏರ್ಪೋರ್ಟ್ ಸಮೀಪ ಕಾಮಗಾರಿ ಕೈಗೊಳ್ಳುವ ಬದಲು ಬೇರೆಡೆಗೆ ರೈಲ್ವೆ ಹಳಿ ಬದಲಾಯಿಸಬೇಕು ಎಂಬ ಪ್ರಸ್ತಾವದಿಂದ ಯಾವುದೇ ತೊಂದರೆ ಆಗುವುದಿಲ್ಲ. ಇದು ಸಮಂಜಸವಾಗಿದೆ. ಇದನ್ನು ಅನುಮೋದಿಸಬಹುದು ಎಂದು ಎಎಐ ಅಭಿಪ್ರಾಯಪಟ್ಟಿದೆ. ಮೈಸೂರು ಭಾಗದಲ್ಲಿ ರೈಲ್ವೆ ಕಾರ್ಯಾಚರಣೆಗಳ ಸುರಕ್ಷತೆ ಮತ್ತು ದಕ್ಷತೆಯನ್ನು ನೈಋತ್ಯ ರೈಲ್ವೆ (SWR) ಖಚಿತಪಡಿಸಿಕೊಳ್ಳಲು ಮಹತ್ವದ ಹೆಜ್ಜೆ ಇಟ್ಟಿದೆ ಎಂದು ತಿಳಿದು ಬಂದಿದೆ.
ಸದ್ಯ ಉದ್ದೇಶಿತ ಕಾಮಗಾರಿಯು ಅನುಮೋದನೆಯ ಹಂತದಲ್ಲಿದೆ. ಪ್ಲಾನ್ ರೂಪಿಸಲಾಗಿದೆ. ಸವಾಲು, ಸಮಸ್ಯೆಗಳಿಗೆ ಪರಿಹಾರ ಸಿಕ್ಕ ಕೂಡಲೇ ಸೂಕ್ತ ತೀರ್ಮಾನಕ್ಕೆ ಬಂದು ಕೆಲಸ ಆರಂಭಿಸಲಾಗುವುದು. ಸದ್ಯ ಕಾರ್ಯಸಾಧ್ಯತಾ ವರದಿ ನಡೆಯಬೇಕಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications