ಮೈಸೂರಿಗೆ ಬಂದ ಮುದ್ದು ರಾಜಕುಮಾರ: ಒಂದಷ್ಟು ಚಿತ್ರಗಳು
Recommended Video

ರಾಜಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗುತ್ತಿದೆ ಎಂಬುದೇನು ಕಡಿಮೆ ಸಂತೋಷದ ವಿಷಯವೇ? ಮೈಸೂರು ಮಹಾರಾಜ ಯದುವೀರ ಪತ್ನಿ, ರಾಣಿ ತ್ರಿಷಿಕಾ ಗರ್ಭವತಿ ಎಂಬ ಸುದ್ದಿ ಕೇಳುತ್ತಿದ್ದಂತೆಯೇ ಇಡಿ ರಾಜ್ಯವೂ ಸಿಹಿ ತಿಂದಷ್ಟು ಸಂತಸಪಟ್ಟಿತ್ತು. ಡಿ.6 ರಾತ್ರಿ ತ್ರಿಷಿಕಾ ಗಂಡುಮಗುವಿಗೆ ಜನ್ಮ ನೀಡುತ್ತಿದ್ದಂತೆಯೇ, 'ಸದ್ಯ, ಅಲಮೇಲಮ್ಮನ ಶಾಪವಿಮೋಚನೆಯಾಯ್ತೇನೋ' ಎಂದು ನಿಟ್ಟುಸಿರಿಟ್ಟವರು ಹಲವರು. ಆದರೆ ದತ್ತುಪುತ್ರರಿಗೆ ಈ ಶಾಪ ತಟ್ಟೋಲ್ಲ ಎಂಬ ವಿಷಯ ಹಲವರಿಗೆ ಗೊತ್ತಿರಲಿಕ್ಕಿಲ್ಲ!
ಅದೇನೇ ಇರಲಿ, ಮೈಸೂರು ರಾಜರ ಮನೆತನದಿಂದ ಸಿಹಿ ಸುದ್ದಿಯೊಂದು ಬಂದಿದೆ. ತ್ರಿಷಿಕಾ, ಮುದ್ದಾದ ಗಂಡುಮಗುವಿಗೆ ಜನ್ಮವಿತ್ತಿದ್ದಾರೆ. ಬಾಣಂತಿ-ಶಿಶು ಆರೋಗ್ಯವಾಗಿದ್ದಾರೆ.
ಬೆಂಗಳೂರಿನ ಇಂದಿರಾನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ತ್ರಿಷಿಕಾ ಕುಮಾರಿ, ಗಂಡುಮಗುವನ್ನು ಹೆತ್ತಿದ್ದಾರೆ ಎಂಬ ಸುದ್ದಿ ಬರುತ್ತಿದ್ದಂತೆಯೇ ಮೈಸೂರಿನ ಅಂಬಾವಿಲಾಸ ಅರಮನೆಯ ತುಂಬ ಸಂಭ್ರಮದ ಜಾತ್ರೆ ಶುರುವಾಗಿತ್ತು.
ಮೈಸೂರಿನ ಮುದ್ದು ರಾಜಕುಮಾರನ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಷ್ಟೇ ಅಲ್ಲ, ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ತಮ್ಮ ಮಗುವನ್ನು ಎತ್ತಿ ಮುದ್ದಿಸುತ್ತಿರುವ ದೃಶ್ಯವೂ ಹರಿದಾಡುತ್ತಿದೆ.

ಯದುವೀರ್ ಪಡಿಯಚ್ಚು!
ಆಗಷ್ಟೇ ಹುಟ್ಟಿದ ಮೈಸೂರು ರಾಜಕುಮಾರನ ಕೆಂಪು ಕೆಂಪು ಮುಖದ ಚಿತ್ರ ನೋಡಿ. ತ್ರಿಷಿಕಾ ಥರಾನೇ ಇದ್ದಾನೆ ಅಂತಲೋ, ಯದುವೀರ್ ದೇ ಪಡಿಯಚ್ಚು ಅಂತಲೋ ಕಮೆಂಟ್ ಕೊಡುವುದಕ್ಕೆ ಮರೆಯಬೇಡಿ!

ಖುಷಿಯಲ್ಲಿ ತೇಲಿದ ರಾಜಮಾತೆ ಪ್ರಮೋದಾದೇವಿ
ತ್ರಿಷಿಕಾ ಅವರಿಗೆ ಹೆರಿಗೆ ನೋವು ಶುರುವಾಗಿ ಅವರು ಬೆಂಗಳೂರಿನ ಇಂದಿರಾ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಮೈಸೂರಿನಿಂದ ಬೆಂಗಳೂರಿಗೆ ಹೊರಟ ರಾಜಮಾತೆ ಪ್ರಮೋದಾ ದೇವಿ, ಮೊಮ್ಮಗ ಮತ್ತು ರಾಜಕುಮಾರನ ಆಗಮನದ ಖುಷಿ ಹಂಚಿಕೊಂಡರು.

ಮುದ್ದುಕಂದನ ನೋಡಿ ತೃಪ್ತರಾದ ಯದುವೀರ್
ತಮ್ಮ ಮುದ್ದುಕಂದನನ್ನು ನೋಡಲು ಸಂತೋಷದಿಂದ ವಾರ್ಡಿನತ್ತ ತೆರಳುತ್ತಿರುವ ಮಹಾರಾಜ ಯದುವೀರ. ತಾಯಿ-ಮಗು ಆರೋಗ್ಯದಿಂದಿದ್ದಾರೆ ಎಂಬ ವೈದ್ಯರ ಮಾತು ಕೇಳಿ ನಿಟ್ಟುಸಿರುಬಿಟ್ಟರು ಯದುವೀರ್.

ದೃಷ್ಟಿ ತೆಗೆಯೋಕೆ ಮರೀಬೇಡಿ!
ನೋಡಿದರೆ ಎಲ್ಲಿ ದೃಷ್ಟಿಯಾಗಿಬಿಡುತ್ತೇನೋ ಅನ್ನಿಸುವ ಪುಟ್ಟ ಕಂದ ಮೈಸೂರಿನ ರಾಜಮನೆತನದ ಕೇಂದ್ರಬಿಂದು ಈಗ. ಚಿತ್ರವನ್ನು ನೋಡಿ ಮಗುವಿಗೆ ದೃಷ್ಟಿ ತೆಗೆಯೋಕೆ ಮರೀಬೇಡಿ!
-
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ











Click it and Unblock the Notifications