ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನೆಗೆ ಸೇರುವ ಮೂಲಕ ಪತಿಗೆ ಗೌರವ ಸಲ್ಲಿಸುತ್ತಿರುವ ಪತ್ನಿ ಗೌರಿ ಮಹದಿಕ್

|
Google Oneindia Kannada News

ಮುಂಬೈ, ಫೆಬ್ರವರಿ 25: ಭಾರತ- ಚೀನಾ ಗಡಿಯಲ್ಲಿ 2017ರಲ್ಲಿ ನಡೆದ ಅಗ್ನಿ ಅವಘಡದಲ್ಲಿ ತಮ್ಮ ಪತಿ ಮೇಜರ್ ಪ್ರಸಾದ್ ಗಣೇಶ್ ಅವರನ್ನು ಕಳೆದುಕೊಂಡಾಗ ಗೌರಿ ಅವರ ಪ್ರಪಂಚವೇ ಅಲ್ಲೋಲಕಲ್ಲೋಲ ಆದಂತಾಗಿತ್ತು. ಆದರೆ ಆ ಕ್ಷಣಕ್ಕೇ ಅವರು ನಿರ್ಧಾರ ತೆಗೆದುಕೊಂಡರು. ತಾವು ಮಾಡುತ್ತಿದ್ದ ಕೆಲಸ ಬಿಟ್ಟು, ಸೇನೆ ಸೇರುವ ತೀರ್ಮಾನ ಮಾಡಿದರು.

ಒಂದು ವರ್ಷದ ನಂತರ ಇದೀಗ ಅಧಿಕಾರಿಗಳ ತರಬೇತಿ ಸಂಸ್ಥೆಗೆ ಸೇರಲು ಎಲ್ಲ ಸಿದ್ಧತೆ ನಡೆಸಿದ್ದಾರೆ. "ನಾನು ವಕೀಲೆ ಹಾಗೂ ಕಂಪನಿ ಸೆಕ್ರೆಟರಿ. ಉದ್ಯೋಗ ಮಾಡಿಕೊಂಡಿದ್ದೆ. ನನ್ನ ಪತಿಯ ಮರಣದ ನಂತರ ಉದ್ಯೋಗವನ್ನು ಬಿಟ್ಟೆ. ಸೇನೆಗೆ ಸೇರಲು ತಯಾರಿ ನಡೆಸಿದೆ. ಆ ಮೂಲಕ ನನ್ನ ಪತಿಗೆ ಗೌರವ ಸಲ್ಲಿಸಬೇಕು ಅಂದುಕೊಂಡೆ. ಆ ನಂತರ ಧರಿಸುವ ಸಮವಸ್ತ್ರ ನಮ್ಮದು (ನಾನು ಹಾಗೂ ನನ್ನ ಪತಿಯದು)" ಎಂದು ಗೌರಿ ಮಹದಿಕ್ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ನಾನೂ ಸೇನೆಗೆ ಸೇರಿ ಉಗ್ರರ ರುಂಡ ಚೆಂಡಾಡುತ್ತೇನೆ:ಹುತಾತ್ಮ ಗುರು ಪತ್ನಿ ಕಲಾವತಿನಾನೂ ಸೇನೆಗೆ ಸೇರಿ ಉಗ್ರರ ರುಂಡ ಚೆಂಡಾಡುತ್ತೇನೆ:ಹುತಾತ್ಮ ಗುರು ಪತ್ನಿ ಕಲಾವತಿ

2015ರಲ್ಲಿ ಗೌರಿ ಅವರು ಮೇಜರ್ ಪ್ರಸಾದ್ ರನ್ನು ವಿವಾಹ ಆದರು. ಆ ನಂತರ ಮುಂಬೈನ ವಿರಾರ್ ಪ್ರದೇಶದಲ್ಲಿ ತನ್ನ ಮಾವನ ಮನೆಯಲ್ಲಿ ಇದ್ದರು. ಎರಡನೇ ಪ್ರಯತ್ನದಲ್ಲಿ ಸರ್ವೀಸ್ ಸೆಲೆಕ್ಷನ್ ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದಾರೆ. ಇತರ ಹದಿನಾರು ಅಭ್ಯರ್ಥಿಗಳ ಜತೆಗೆ ಸೆಣೆಸಿ, ಅತ್ಯುತ್ತಮ ಅಂಕ ಪಡೆದಿದ್ದಾರೆ.

Wife of Major killed in fire set to join army, Its her tribute

ಇದೀಗ ಚೆನ್ನೈನಲ್ಲಿರುವ ಅಧಿಕಾರಿಗಳ ತರಬೇತಿ ಸಂಸ್ಥೆ ಸೇರಲು ಎಲ್ಲ ಸಿದ್ಧತೆ ನಡೆಸಿದ್ದಾರೆ. ಈ ಏಪ್ರಿಲ್ ನಲ್ಲಿ ಸೇರ್ಪಡೆ ಆಗಲಿದ್ದು, 49 ವಾರಗಳ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಒಂದು ವರ್ಷದ ಈ ಕಡ್ಡಾಯ ತರಬೇತಿಯನ್ನು ಅಕಾಡೆಮಿಯಲ್ಲಿ ಪೂರ್ಣ ಮಾಡಿದ ಬಳಿಕ ಮೂವತ್ತೊಂದು ವರ್ಷದ ಗೌರಿ ಮಹದಿಕ್ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಸೇರ್ಪಡೆ ಆಗಲಿದ್ದಾರೆ.

ಇನ್ನೊಬ್ಬ ಮಗನನ್ನೂ ಸೈನ್ಯಕ್ಕೆ ಕಳುಹಿಸುವೆ, ಆದರೆ ಪಾಕಿಸ್ತಾನವನ್ನು ಬಿಡಬೇಡಿಇನ್ನೊಬ್ಬ ಮಗನನ್ನೂ ಸೈನ್ಯಕ್ಕೆ ಕಳುಹಿಸುವೆ, ಆದರೆ ಪಾಕಿಸ್ತಾನವನ್ನು ಬಿಡಬೇಡಿ

ಕೆಲಸ ಬಿಡುವ ಅವರ ನಿರ್ಧಾರದ ಬಗ್ಗೆ ಪ್ರಶ್ನೆ ಮಾಡಿದರೆ, ನಾನು ಸುಮ್ಮನೆ ಕೂತು, ಅಳುವುದು ಇಷ್ಟವಿರಲಿಲ್ಲ. ನನ್ನ ಪತಿಗೆ ಹೆಮ್ಮೆ ತರುವ ಕೆಲಸ ಮಾಡಬೇಕು ಅಂದುಕೊಂಡೆ. ನಾನು ಯಾವಾಗಲೂ ನಗುತ್ತಾ ಸಂತೋಷದಿಂದ ಇರಬೇಕು ಅನ್ನೋದು ಅವರ ಆಸೆಯಾಗಿತ್ತು. ಸೇನೆ ಸೇರಿಕೊಳ್ಳಬೇಕು ಎಂದು ನಿರ್ಧರಿಸಿದೆ. ಅವರ ಸಮವಸ್ತ್ರ ಧರಿಸುತ್ತೇನೆ, ಅವರ ಸ್ಟಾರ್ ಅನ್ನು ನಮ್ಮ ಸಮವಸ್ತ್ರದಲ್ಲಿ ಹಾಕಿಕೊಳ್ಳುತ್ತೇನೆ. ನಮ್ಮ ಸಮವಸ್ತ್ರ ಏಕೆಂದರೆ, ಅದು ಅವರದು ಹಾಗೂ ನನ್ನದು ಇಬ್ಬರದೂ ಸಮವಸ್ತ್ರ ಎಂದಿದ್ದಾರೆ ಗೌರಿ.

English summary
Gauri Prasad Mahadik's world came crashing down in 2017 when Army Major Prasad Ganesh died in a fire accident near the India-China border. She decided to quit her job and serve in the Army. A year later, she is all set to join the Officers Training Academy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X