Breaking: ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದು, ಶಾಸಕರ ಪುತ್ರ ಸೇರಿ 7 ಮಂದಿ ಸಾವು
ಮುಂಬೈ, ಜನವರಿ 25:ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದಿದ್ದು, ಶಾಸಕರ ಪುತ್ರ ಸೇರಿ ಒಟ್ಟು 7 ಮಂದಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಕಾರು
ಸೇತುವೆ
ಮೇಲಿಂದ
ಸುಮಾರು
50
ಅಡಿ
ಕೆಳಗೆ
ಬಿದ್ದ
ಪರಿಣಾಮ
ಏಳು
ಮೆಡಿಕಲ್
ವಿದ್ಯಾರ್ಥಿಗಳು
ಸಾವನ್ನಪ್ಪಿರುವ
ಘಟನೆ
ಜಿಲ್ಲೆಯ
ಹೊರವಲಯದ
ವಾರ್ಧಾ-ಯವತ್ಮಾಲ್
ಹೆದ್ದಾರಿಯಲ್ಲಿ
ನಡೆದಿದೆ.
ವಾಹನ
ನಿಯಂತ್ರಣ
ತಪ್ಪಿ,
ಸೇತುವೆಯಿಂದ
ಸುಮಾರು
50
ಅಡಿ
ಕೆಳಗೆ
ಉರುಳಿ
ಬಿದ್ದಿದೆ
ಎಂದು
ಪೊಲೀಸರು
ಶಂಕಿಸಿದ್ದಾರೆ.
ಮೃತರನ್ನು ನೀರಜ್ ಚೌಹಾನ್ (ಪ್ರಥಮ ವರ್ಷದ MBBS), ನಿತೇಶ್ ಸಿಂಗ್ (2015 ಇಂಟರ್ನ್ MBAS), ವಿವೇಕ್ ನಂದನ್ (2018, MBBS ಅಂತಿಮ ವರ್ಷದ ಭಾಗ 1), ಪ್ರತ್ಯೂಷ್ ಸಿಂಗ್, (2017, MBBS ಅಂತಿಮ ವರ್ಷದ ಭಾಗ 2), ಶುಭಂ ಜೈಸ್ವಾಲ್ (2017 MBBS ಅಂತಿಮ ವರ್ಷದ ಭಾಗ 2), ಪವನ್ ಶಕ್ತಿ (2020, MBBS ಅಂತಿಮ ವರ್ಷದ ಭಾಗ 1) ಎಂದು ಗುರುತಿಸಲಾಗಿದೆ.
ಮೃತ
7
ಮಂದಿ
ಸಾವಂಗಿಯ
ವೈದ್ಯಕೀಯ
ಕಾಲೇಜಿನ
ವಿದ್ಯಾರ್ಥಿಗಳು
ಎಂಬುದು
ಪ್ರಾಥಮಿಕ
ತನಿಖೆಯಲ್ಲಿ
ತಿಳಿದುಬಂದಿದೆ.
ಅಪಘಾತದಲ್ಲಿ
ಗೊಂಡಿಯಾ
ಜಿಲ್ಲೆಯ
ತಿರೋಡಾ
ಶಾಸಕ
ವಿಜಯ್
ರಹಂಗ್ಡೇಲ್
ಅವರ
ಪುತ್ರ
ಆವಿಷ್ಕರ್
ಕೂಡ
ಸಾವನ್ನಪ್ಪಿದ್ದಾರೆ.
ಜಿಲ್ಲೆಯ ಸೆಲ್ಸುರಾದಲ್ಲಿ ರಾತ್ರಿ 1.30ರ ಸುಮಾರಿಗೆ ದಿಯೋಲಿಯಿಂದ ವಾರ್ಧಾ ಕಡೆಗೆ ಬರುತ್ತಿದ್ದ ಝೈಲೋ ಕಾರು ಸೇತುವೆಯಿಂದ ನೇರವಾಗಿ ಕೆಳಗೆ ಬಿದ್ದಿದೆ. ಕಾರಿನಲ್ಲಿದ್ದ ಎಲ್ಲಾ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗೊಂಡಿಯಾ ಜಿಲ್ಲೆಯ ತಿರೋಡಾ ಶಾಸಕ ವಿಜಯ್ ರಹಂಗ್ಡೇಲ್ ಅವರ ಪುತ್ರ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇತರ ಆರು ಮಂದಿ ವೈದ್ಯಕೀಯ ಕೋರ್ಸ್ಗಳಿಗಾಗಿ ದೇಶದ ವಿವಿಧ ಭಾಗಗಳಿಂದ ಬಂದವರು ಎಂದು ತಿಳಿದು ಬಂದಿದೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Recommended Video
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ಕೈಗೊಂಡಿದ್ದಾರೆ. ಬಳಿಕ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಸಂಬಂಧಿಕರು ಆಸ್ಪತ್ರೆ ಗೆ ಬಂದಿದ್ದಾರೆ. ಆಸ್ಪತ್ರೆ ಬಳಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.