ಮಹಾರಾಷ್ಟ್ರ: ಆಟೋರಿಕ್ಷಾ ಲೈಸನ್ಸ್ ವಿವಾದಕ್ಕೆ ವಿಧ ವಿಧ ಪ್ರತಿಕ್ರಿಯೆ
ಮುಂಬೈ, ಸೆ. 16: ಜೈನರ ಓಲೈಕೆಗಾಗಿ ಮಾಂಸ ಮಾರಾಟ ನಿಷೇಧ ಹೇರಿದ್ದ ಮಹಾರಾಷ್ಟ್ರ ಸರ್ಕಾರ ಈಗ ಮತ್ತೊಂದು ವಿವಾದಿತ ಅದೇಶ ಹೊರಡಿಸಿದೆ. ನವೆಂಬರ್ 1 ರಿಂದ ಮರಾಠಿ ಮಾತನಾಡುವ ಜನರಿಗೆ ಮಾತ್ರ ಆಟೋರಿಕ್ಷಾಗಳ ಪರವಾನಿಗೆಗಳನ್ನು ನೀಡುವುದಾಗಿ ಮಂಗಳವಾರ ಆದೇಶವನ್ನು ಹೊರಡಿಸಿದೆ. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವಿಧವಿಧವಾದ ಪ್ರತಿಕ್ರಿಯೆಗಳು ಬಂದಿವೆ.
ಮಹಾರಾಷ್ಟ್ರದ ಸಾರಿಗೆ ಸಚಿವ ದಿವಾಕರ ರಾವೊತೆ ಅವರು, ಮುಂಬೈ ಮಹಾನಗರ ಪ್ರದೇಶಕ್ಕೆ ಒಂದು ಲಕ್ಷ ನೂತನ ಆಟೋರಿಕ್ಷಾ ಪರವಾನಿಗೆಗಳನ್ನು ಪ್ರಕಟಿಸಿದ್ದಾರೆ. [ಮಾಂಸ ಮಾರಾಟ ನಿಷೇಧ: ಮುಂಬೈ ಈಗ 'ಬ್ಯಾನ್- ಇಸ್ತಾನ್']
ಜೊತೆಗೆ ಈ ಪರವಾನಿಗೆಗಳನ್ನು ಮರಾಠಿ ಮಾತನಾಡುವವರಿಗೆ ಮಾತ್ರ ನೀಡಲಾಗುವುದು. ಅರ್ಜಿದಾರರು ಕಳೆದ 15 ವರ್ಷಗಳಿಂದಲೂ ಮಹಾರಾಷ್ಟ್ರದ ನಿವಾಸವಾಗಿರುವ ಬಗ್ಗೆ ವಸತಿ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಮರಾಠಿ ಗೊತ್ತಿಲ್ಲದವರಿಗೆ ಪರವಾನಿಗೆಗಳನ್ನು ನೀಡಲಾಗುವುದಿಲ್ಲ ಎಂದು ಷರತ್ತುಗಳನ್ನು ವಿಧಿಸಿದ್ದಾರೆ.
ಪರವಾನಿಗೆ ಪಡೆಯುವವರಿಗೆ ಸ್ಥಳೀಯ ಭಾಷೆ ತಿಳಿದಿರಬೇಕು ಎಂಬ ನಿಯಮ ಹಿಂದಿನಿಂದಲೂ ಇದೆ. ಆದರೆ ಅದು ಪಾಲನೆಯಾಗುವುದು ಮಾತ್ರ ಅಪರೂಪವಾಗಿತ್ತು. ಮಹಾರಾಷ್ಟ್ರ ಸರ್ಕಾರ ಇದು ಮರಾಠಿಗರಿಗೆ ನೀಡುತ್ತಿರುವ ದೀಪವಾಳಿ ಕೊಡುಗೆ ಎಂದು ಪ್ರಚಾರ ಆರಂಭಿಸಿದೆ.
ಆದೇಶಕ್ಕೆ ಬೆಲೆ ಇಲ್ಲ: ಇದೆಲ್ಲ ಕೆಲ ದಿನಗಳ ಆಟ ಅಷ್ಟೇ 2017ರ ಮುಂಬೈ ಪಾಲಿಕೆ ಚುನಾವಣೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಈ ತಂತ್ರ ಹೂಡುತ್ತಿದೆ. ಮರಾಠಿ ಮಾನೂಸ್ ಗಳು ಈಗ ಇವರ ಕಣ್ಣಿಗೆ ಬಿದ್ದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಂಜಯ ನಿರುಪಮ್ ಪ್ರತಿಕ್ರಿಯಿಸಿದ್ದಾರೆ.
ಅರ್ಜಿದಾರರಿಗೆ ಸ್ಥಳೀಯ ಭಾಷೆ ತಿಳಿದಿರಬೇಕು ಎನ್ನುವುದು ನಿಜ. ಆದರೆ ಮರಾಠಿ ಭಾಷೆ ಗೊತ್ತಿಲ್ಲವೆಂದ ಮಾತ್ರಕ್ಕೆ ಸರಕಾರವು ಪರವಾನಿಗೆಗಳನ್ನು ನಿರಾಕರಿಸುವಂತಿಲ್ಲ ಎಂದು ಎನ್ ಸಿಪಿ ನಾಯಕ ಸಚಿನ್ ಆಹಿರ್ ಟೀಕಿಸಿದ್ದಾರೆ. (ಪಿಟಿಐ)

ಗೋಮಾಂಸದ ಮೇಲಿನ ನಿಷೇಧವಿದ್ದಂತೆ
ಸರ್ಕಾರದ ಈ ಆದೇಶ ಹೆಚ್ಚು ಕಡಿಮೆ ಗೋಮಾಂಸದ ಮೇಲಿನ ನಿಷೇಧವಿದ್ದಂತೆ. ನಿಯಮವೇನೋ ಇರುತ್ತದೆ, ಆದರೆ ಅದು ಪಾಲನೆಯಾಗುವುದಿಲ್ಲ ಎಂದು ಸಾರಿಗೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
|
ಇದು ಐತಿಹಾಸಿಕ ನಿರ್ಣಯ, ಮರಾಠಿಗರಿಗೆ ಜೈ
ಸರ್ಕಾರ ತೆಗೆದುಕೊಂಡ ಐತಿಹಾಸಿಕ ನಿರ್ಣಯ, ಮರಾಠಿಗರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ.
|
ಬೆಳಗ್ಗೇನೆ ಎಂಥಾ ಸುದ್ದಿಗಳು ಕಣ್ಣಿಗೆ ಬಿದ್ದವು
ಬೆಳಗ್ಗೇನೆ ಎಂಥಾ ಸುದ್ದಿಗಳು ಕಣ್ಣಿಗೆ ಬಿದ್ದವು, ಫೇಸ್ ಬುಕ್ ಡಿಸ್ ಲೈಕ್ ಬಟನ್ ನಂತೆ, ಮರಾಠಿಗರಿಗೆ ಮಾತ್ರ ಲೈಸನ್ಸ್ ಅಂತೆ
|
ಯುಪಿಎಸ್ ಸಿ ಪರೀಕ್ಷೆ ಮಾತ್ರ ಬರೆಯಬಹುದು ಆದ್ರೆ
ಯುಪಿಎಸ್ ಸಿ ಪರೀಕ್ಷೆ ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಮಾತ್ರ ಬರೆಯಬಹುದು ಆದ್ರೆ ಲೈಸನ್ಸ್ ಮಾತ್ರ ಮರಾಠಿಗರಿಗೆ ಎಂದರೆ ಹೇಗೆ?
|
ಪ್ರಜಾಪ್ರಭುತ್ವ ನಮ್ಮ ಮುಂಬೈನಲ್ಲಿ ಮಾತ್ರ ಇದೆ
ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೇ? ಮಾಂಸ ನಿಷೇಧ, ಗೋಹತ್ಯೆ ನಿಷೇಧ, ಲೈಸನ್ಸ್ ವಿವಾದ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications