ಮಾಂಸ ಮಾರಾಟ ನಿಷೇಧ: ಮುಂಬೈ ಈಗ 'ಬ್ಯಾನ್- ಇಸ್ತಾನ್'
ಮುಂಬೈ, ಸೆ. 08: ಕಾಸ್ಮೋಪಾಲಿಟನ್ ಸಿಟಿ ಎನಿಸಿಕೊಂಡಿರುವ ಮುಂಬೈ ನಗರದಲ್ಲಿ ಈಗ 'ಬ್ಯಾನ್' ಹಾವಳಿ ಶುರುವಾಗಿದೆ. ಜೈನ ಸಮುದಾಯದ ಉಪವಾಸ ವ್ರತ ಜಾರಿಯಲ್ಲಿರುವುದರಿಂದ ಬಿಜೆಪಿ ಆಡಳಿತವಿರುವ ಮುಂಬೈ ನಗರ ಪಾಲಿಕೆ ಕೆಲದಿನಗಳ ಮಟ್ಟಿಗೆ ಮಾಂಸ ಮಾರಾಟ ನಿಷೇಧಿಸಿದೆ. #meatban ಬಗ್ಗೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಭಾರಿ ಚರ್ಚೆ ಶುರುವಾಗಿದೆ.
ಜೈನ ಸಮುದಾಯದವರ ಪರ್ಯೂಷನ್ ಋತುವಿನ ಉಪವಾಸ ವ್ರತ ಆರಂಭವಾಗಿರುವುದರಿಂದ ನಾಲ್ಕು ದಿನಗಳ ಮಟ್ಟಿಗೆ ಮಾಂಸ ಮಾರಾಟವನ್ನು ನಿಷೇಧಿಸಿ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಆದೇಶ ಹೊರಡಿಸಿದೆ.
ಬಿಎಂಸಿಯಲ್ಲಿ ಬಿಜೆಪಿ ಆಡಳಿತವಿದೆ. ಜೊತೆಗೆ ನಿಷೇಧ ಹೇರುವಂತೆ ಬಿಜೆಪಿ ಶಾಸಕರಲ್ಲಿ ಜೈನ ಸಮುದಾಯ ಮನವಿ ಮಾಡಿಕೊಂಡಿತ್ತು ಎಂಬುದನ್ನು ಮರೆಯುವಂತಿಲ್ಲ. ಈ ಹಿಂದೆ ಗೋಹತ್ಯೆ ನಿಷೇಧ ಜಾರಿ ಸುದ್ದಿ ಬಂದಾಗಲೂ ಇದೇ ರೀತಿ ಗೋಮಾಂಸ ಮಾರಾಟಕ್ಕೆ 8 ದಿನಗಳ ನಿಷೇಧ ಹೇರಲಾಗಿತ್ತು.
ಮಾಂಸ ಮಾರಾಟ ನಿಷೇಧದ ಬಗ್ಗೆ ಸೋಮವಾರದಿಂದ ಆರಂಭವಾದ ಚರ್ಚೆ ಮಂಗಳವಾರವೂ ಮುಂದುವರೆದಿದ್ದು, ಭಾರತದಲ್ಲಿ ಟಾಪ್ ಟ್ರೆಂಡಿಂಗ್ ಆಗಿಬಿಟ್ಟಿದೆ.

ನಾಲ್ಕು ದಿನಗಳ ಮಟ್ಟಿಗೆ ನಿಷೇಧ
ಜೈನ ಸಮುದಾಯದವರ ಪರ್ಯೂಷನ್ ಋತುವಿನ ಉಪವಾಸ ವ್ರತ ಆರಂಭವಾಗಿರುವುದರಿಂದ ಸೆ.11 ರಿಂದ ಸೆ.18ರೊಳಗೆ ನಾಲ್ಕು ದಿನಗಳ ಮಟ್ಟಿಗೆ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.
|
ಬೀಫ್ ಬ್ಯಾನ್, ಮೀಟ್ ಬ್ಯಾನ್ ಎಲ್ಲವೂ ಬ್ಯಾನ್
ಬೀಫ್ ಬ್ಯಾನ್, ಮೀಟ್ ಬ್ಯಾನ್ ಎಲ್ಲವೂ ಬ್ಯಾನ್, ಮುಂಬೈ ಈಗ ಭಾರತ ಬ್ಯಾನ್ ರಾಜಧಾನಿ.
|
ಮೂಲ ಸೌಕರ್ಯದ ಚಿಂತೆ ಮಾಡ್ಬೇಡಿ. ಬ್ಯಾನ್ ಮಾಡಿ
ಮೂಲ ಸೌಕರ್ಯದ ಚಿಂತೆ ಮಾಡ್ಬೇಡಿ. ಊಟ ತಿಂಡಿ ಬ್ಯಾನ್ ಮಾಡಿ, ಶೌಚಾಲಯ, ಆಸ್ಪತ್ರೆ, ರಸ್ತೆ, ರೈಲ್ವೆ, ಮಹಿಳಾ ಸುರಕ್ಷತೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ
|
ಬಾಂದ್ರಾ ಆಹಾರ ಮೇಳದಲ್ಲಿ ಏನು ಸಿಗಲಿದೆ?
ಬಾಂದ್ರಾ ಆಹಾರ ಮೇಳದಲ್ಲಿ ಏನು ಸಿಗಲಿದೆ? ಚನ್ನಾ ಮಸಲಾ ಅಷ್ಟೇ. ನಾನ್ ವೆಜ್ ಹೆಸರೆತ್ತಬೇಡಿ.
|
ಒಂದು ಸಮುದಾಯ ಮೆಚ್ಚಿಸುವುದರಲ್ಲಿ ಅರ್ಥವಿಲ್ಲ
ಒಂದು ಸಮುದಾಯ ಮೆಚ್ಚಿಸುವುದರಲ್ಲಿ ಅರ್ಥವಿಲ್ಲ, ಬೇರೆ ಸಮುದಾಯಕ್ಕೆ ಮಾಂಸ ಇಷ್ಟವಾದರೆ ಮಿಕ್ಕವರು ಏಕೆ ಅದನ್ನೇ ಫಾಲೋ ಮಾಡುವುದಿಲ್ಲ?
|
ಆಹಾರ ಕ್ರಮವನ್ನೇ ಉಲ್ಟಾ ಮಾಡಿ ಬಿಡಿ
ಆಹಾರ ಕ್ರಮವನ್ನೇ ಉಲ್ಟಾ ಮಾಡಿ ಬಿಡಿ, ಎಲ್ಲರೂ ಹುಲ್ಲು ತಿನ್ನಿ
|
ನಾನ್ ವೆಜಿಟೆರಿಯನ್ ಗಳ ತಾಳ್ಮೆಗೂ ಮಿತಿ ಇದೆ
ನಾನ್ ವೆಜಿಟೆರಿಯನ್ ಗಳ ತಾಳ್ಮೆಗೂ ಮಿತಿ ಇದೆ, ಸುಮ್ಮನೆ ಕೆದಕಬೇಡಿ.
|
ಹೋ ಹಾಗಾದರೆ ಬೇರೆ ದಿನಗಳಲ್ಲಿ ಏನ್ಮಾಡ್ತೀರಾ?
ಹೋ ಹಾಗಾದರೆ ಬೇರೆ ದಿನಗಳಲ್ಲಿ ಏನ್ಮಾಡ್ತೀರಾ? ಜೈನ ಸಮುದಾಯದ ಭಾವನೆಗಳಿಗೆ ಬೇರೆ ದಿನಗಳಲ್ಲಿ ಧಕ್ಕೆ ಉಂಟಾಗುವುದಿಲ್ಲವೇ?
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications