ಮುಂಬೈ: ಸಿಹಿನಿದ್ದೆಯಲ್ಲಿದ್ದವರು ಯಮನ ಪಾದ ಸೇರಿದರು!
ಮುಂಬೈ, ಜೂನ್ 01: ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಅರ್ನಿ ತಲುಕಾ ಬಳಿ ನಡೆದ ಭೀಕರ ಅಪಘಾತದಲ್ಲಿ 10 ಜನ ಮೃತರಾಗಿದ್ದಾರೆ.
ಇಂದು(ಜೂನ್ 01) ಬೆಳಗ್ಗಿನ ಜಾವ ನಡೆದ ವೇಗವಾಗಿ ಚಲಿಸುತ್ತಿದ್ದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಸಿಹಿ ನಿದ್ದೆಯಲ್ಲಿದ್ದ ಜನರು ಇದ್ದಕ್ಕಿದ್ದಂತೆ ಸಭವಿಸಿದ ಈ ಅನಿರೀಕ್ಷಿತ ದುರಂತದಿಂದಾದಗಿ ಯಮನ ಪಾದ ಸೇರುವಂತಾಗಿದ್ದು ದುರಂತ.

ಘಟನೆಯ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತುರ್ತು ಸೇವೆ ನೀದುತ್ತಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಮೃತರ ಗುರುತು ಪತ್ತೆಯಾಗಿಲ್ಲ.
ಕರ್ನಾಟಕದ ಯಾದಗಿರಿ ತಾಲೂಕಿನ ಮಂಡರಗಿಯಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಮೃತರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications