ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೆಸ್ಸೆಸ್ ಅನ್ನು 'ವಿಷ' ಎಂದು ನಿಂದಿಸಿದ ಮಲ್ಲಿಕಾರ್ಜುನ ಖರ್ಗೆ

|
Google Oneindia Kannada News

ಮುಂಬೈ, ಆಗಸ್ಟ್ 29: 'ಆರೆಸ್ಸೆಸ್ ಸಿದ್ಧಾಂತ ದೇಶಕ್ಕೆ ವಿಷವಿದ್ದಂತೆ' ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಮುಂಬೈಯಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಅವರು, 'ಬಿಜೆಪಿಯು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತವನ್ನು ಅಳವಡಿಸಿಕೊಳ್ಳುತ್ತಿದೆ. ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ಚಾಚೂ ತಪ್ಪದೆ ಜಾರಿಗೆ ತರುತ್ತಿದ್ದಾರೆ. ನಾವು ಆ ಸಿದ್ಧಾಂತದ ವಿರುದ್ಧ ಹೋರಾಡುತ್ತಿದ್ದೇವೆ. ಏಕೆಂದರೆ ನಮಗೆ ಗೊತ್ತು ಆರೆಸ್ಸೆಸ್ ಸಿದ್ಧಾಂತ ಯಾವತ್ತಿದ್ದರೂ ದೇಶಕ್ಕೆ ವಿಷವೇ' ಎಂದು ಖರ್ಗೆ ಹೇಳಿದ್ದಾರೆ.

RSS ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿಗೆ ಆಮಂತ್ರಣ ಬಂದಿಲ್ಲ: ಕಾಂಗ್ರೆಸ್RSS ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿಗೆ ಆಮಂತ್ರಣ ಬಂದಿಲ್ಲ: ಕಾಂಗ್ರೆಸ್

'ವಿಷ ಯಾವತ್ತಿದ್ದರೂ ವಿಷವೇ. ಅದು ಹೌದೋ ಅಲ್ಲವೋ ಎಂದು ಪರೀಕ್ಷಿಸುತ್ತೇನೆ ಎಂದರೆ ಫಲಿತಾಂಶ ಏನಾಗುತ್ತದೆ? ನಾವು ಯಾವುದೇ ವ್ಯಕ್ತಿ ಅಥವಾ ಮೋದಿಯವರ ವಿರೋಧಿಯಲ್ಲ. ನಾವು ಆರೆಸ್ಸೆಸ್ ಸಿದಧಾಂತದ ವಿರೋಧಿಗಳು. ನಮ್ಮ ಹೋರಾಟವೇನಿದ್ದರೂ ಅದರ ವಿರುದ್ಧ, ಮತ್ತಉ ಈ ಹೋರಾಟ ಹೀಗೆಯೇ ಮುಂದುವರಿಯುತ್ತದೆ' ಎಂದು ಖರ್ಗೆ ಹೇಳಿದ್ದಾರೆ.

ಗಾಂಧಿ ಕುಟುಂಬದಲ್ಲಿ ಹುಟ್ಟಿದ್ದೇನೆ ಎಂಬ ವಿನಾಯ್ತಿ ಬೇಡ: ರಾಹುಲ್ ಗಾಂಧಿ ಕುಟುಂಬದಲ್ಲಿ ಹುಟ್ಟಿದ್ದೇನೆ ಎಂಬ ವಿನಾಯ್ತಿ ಬೇಡ: ರಾಹುಲ್

RSS ideology is poison for the country

ಇತ್ತೀಚೆಗಷ್ಟೇ ಲಂಡನ್ನಿನಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ರುಲ್ ಗಾಂಧಿ, ಆರೆಸ್ಸೆಸ್ ಅನ್ನು ಉಗ್ರ ಸಂಘಟನೆಗೆ ಹೋಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Congress leader Mallikarjun Kharge said that the ideology of RSS, which is being adopted by the Bharatiya Janata Party (BJP) and implemented by Prime Minister Narendra Modi, is a poison for the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X