ಶ್ರೀದೇವಿಯನ್ನು 'ಪಾರ್ಥಿವ ಶರೀರ' ಎಂದಿದ್ದಕ್ಕೆ ಹರಿಹಾಯ್ದ ರಿಷಿ ಕಪೂರ್!
ನವದೆಹಲಿ, ಫೆಬ್ರವರಿ 26: ಸಿನಿರಸಿಕರ ಹೃದಯದಲ್ಲಿ ನಿರಂತರವಾಗಿ ಕಚಗುಳಿಯಿಡುತ್ತಿದ್ದ ಶ್ರೀದೇವಿ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಇನ್ನೂ ಹಲವು ವರ್ಷಗಳೇ ಬೇಕಾಗಬಹುದು. 54 ರ ಹರೆಯದಲ್ಲೂ ಪಾದರಸದಂತೆ ಓಡಾಡುತ್ತಿದ್ದ ಶ್ರೀದೇವಿ ಇಹಲೋಕತ್ಯಜಿಸಿದ್ದಾರೆ ಎಂದರೆ ಏನೋ ಕಸಿವಿಸಿ. ಹೇಳಲಾರದ ತಳಮಳ.
"ಅಯ್ಯೋ, ಮೊನ್ನೆ ತಾನೇ ಮಗಳ ಜೊತೆ ದುಬೈಯಲ್ಲಿ ಮದುವೆ ಸಮಾರಂಭವೊಂದರಲ್ಲಿ ಮಿಂಚುತ್ತಿದ್ದ ಬಾಲಿವುಡ್ ರಾಣಿಯನ್ನು ಕಂಡು, ಈಕೆಗೆ ವಯಸ್ಸೇ ಆಗಲ್ವಾ' ಎಂದುಕೊಂಡಿದ್ದೇವೆ. ಆದ್ರೆ ಈಗ ಆಕೆ ಭೂಮಿ ಮೇಲೆ ಇಲ್ಲ ಅಂದ್ರೆ ನಂಬೋದು ಹೇಗೆ?" ಎಂದು ಹಲವರು ಹಲುಬಿಕೊಂಡಿದ್ದಾರೆ. ಆದರೆ ಸತ್ಯ ಸತ್ಯವೇ. ಶ್ರೀದೇವಿ ಇನ್ನಿಲ್ಲ. ಆದರೆ ಕೋಟ್ಯಂತರ ಅಭಿಮಾನಿಗಳ ಹೃದಯ ಸಾಮ್ರಾಜ್ಯದಲ್ಲಿ ಆಕೆ ಎಂದಿಗೂ ಪಟ್ಟದ ರಾಣಿಯೇ!
ಶ್ರೀದೇವಿ ಅಗಲಿಕೆ ಬಾಲಿವುಡ್ ರಂಗವನ್ನು ಸ್ತಬ್ದವಾಗಿಸಿದೆ. ಹಲವರ ಪಾಲಿಗೆ ರೋಲ್ ಮಾಡೆಲ್ ಎನ್ನಿಸಿದ್ದ ಶ್ರೀದೇವಿ ಅವರ ಕುರಿತು ಬಾಲಿವುಡ್ ನ ಗಣ್ಯಾರಿಗಣ್ಯರು ಟ್ವೀಟ್ ಮಾಡಿದ್ದಾರೆ. ಅವರೊಂದಿಗಿನ ತಮ್ಮ ಅನುಭವವನ್ನು ಹಂಚಿಕೊಂಡು ಕಂಬನಿ ಮಿಡಿದಿದ್ದಾರೆ. ಆದರೆ ಶ್ರಿದೇವಿ ಅವರೊಂದಿಗೆ ಹಲವು ಚಿತ್ರಗಳಲ್ಲಿ ನಟಿಸಿದ ಬಾಲಿವುಡ್ ನಟ ರಿಷಿ ಕಪೂರ್, ಶ್ರೀದೇವಿಯವರನ್ನು 'ಪಾರ್ಥಿವ ಶರೀರ' ಎಂದಿದ್ದಕ್ಕಾಗಿ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ಪ್ರಕಾರ ಶ್ರೀದೇವಿ ಇನ್ನೂ ಸತ್ತಿಲ್ಲ..!
|
ಶ್ರೀದೇವಿ ಎಂದರೆ ಕೇವಲ ದೇಹ ಮಾತ್ರವೇ..?
ಶ್ರೀದೇವಿ ಇದ್ದಕ್ಕಿದ್ದಂತೆ 'ಪಾರ್ಥಿವ ಶರೀರ'ವಾಗಿಬಿಟ್ತಿದ್ದು ಹೇಗೆ? ಎಲ್ಲ ಟಿವಿ ಚಾನೆಲ್ ಗಳೂ, 'ಶ್ರೀದೇವಿ ಪಾರ್ಥಿವ ಶರೀರವನ್ನು ಮುಂಬೈಗೆ ತರಲಾಗುತ್ತಿದೆ' ಎನ್ನುತ್ತಿವೆ. ಶ್ರೀದೇವಿ ಎಂಬ ದೈತ್ಯ ಪ್ರತಿಭೆ, ಇದ್ದಕ್ಕಿದ್ದಂತೆ ಕೇವಲ 'ದೇಹ' ವಷ್ಟೇ ಎಂದುಕೊಂಡರೆ ಅದು ಸರಿಯೇ? ಎಂದು ಅವರು ಭಾವುಕರಾಗಿ ಪ್ರಶ್ನಿಸಿದ್ದಾರೆ.
|
ಆಕಾಶದಲ್ಲಿ ಬೆಳದಿಂಗಳಿಲ್ಲ!
ಇನ್ನು ಮೇಲೆ ರಾತ್ರಿ ಆಕಾಶದಲ್ಲಿ ಬೆಳದಿಂಗಳಿರೋಲ್ಲ... ಯಾಕಂದ್ರೆ ಚಾಂದಿನಿ ನಮ್ಮನ್ನೆಲ್ಲ ಬಿಟ್ಟು ಹಿಂತಿರುಗಿ ಬರಲಾರದ ಲೋಕಕ್ಕೆ ಹೋಗಿದ್ದಾರೆ ಎಂದು ಸಹ ರಿಷಿ ಕಪೂರ್ ಟ್ವೀಟ್ ಮೂಲಕ ಕಂಬನಿ ಮಿಡಿದಿದ್ದಾರೆ.

ಶ್ರೀದೇವಿಯೊಂದಿಗೆ ರಿಷಿ ನಟಿಸಿದ ಪ್ರಮುಖ ಚಿತ್ರಗಳು
ರಿಷಿ ಕಪೂರ್ ಅವರು ಶ್ರೀದೇವಿಯೊಂದಿಗೆ ಚಾಂದಿನಿ, ನಾಗಿನ, ಗುರುದೇವ್, ಬಂಜರನ್, ಕೌನ್ ಸಚ್ಚಾ, ಕೌನ್ ಜೂಟಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.

ಮದುವೆ ಸಂಭ್ರಮದಲ್ಲಿ ಸ್ಮಶಾನ ಮೌನ
ದುಬೈಯಲ್ಲಿ ನಡೆಯುತ್ತಿದ್ದ ಸಂಬಂಧಿ ಮೋಹಿತ್ ಮರ್ವಾ ಮದುವೆ ಸಂಭ್ರಮದಲ್ಲಿ ತಮ್ಮ ಮಗಳು ಖುಷಿ, ಪತಿ ಬೋನಿ ಕಪೂರ್ ಜೊತೆ ಶ್ರೀದೇವಿ ಪಾಲ್ಗೊಂಡಿದ್ದರು. ಫೆ.24 ರ ರಾತ್ರಿ ಸುಮಾರು 11 ರಿಂದ 11: 30 ರ ಸುಮಾರಿಗೆ ಹೊಟೇಲ್ ನಲ್ಲಿ ಕುಸಿದು ಬಿದ್ದ ಅವರು ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದರು. ಅವರ ಪಾರ್ಥಿವ ಶರೀರವನ್ನು ಇಂದು ದುಬೈನಿಂದ ಬಾಂಬೆಗೆ ತರಲಾಗುತ್ತಿದೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications