ಎಂಥ ಪವಾಡ! ಮುಂಬೈಯಲ್ಲಿ ಮಗುವನ್ನು ಬದುಕಿಸಿತು ಮರ!
ಮುಂಬೈ, ಜನವರಿ 04: ಕೆಲವೊಮ್ಮೆ ಪವಾಡಗಳ ಬಗ್ಗೆ ನಂಬಿಕೆ ಹುಟ್ಟಿಸುವಂಥ ಘಟನೆಗಳು ಘಟಿಸಿಬಿಡುತ್ತವೆ.
ಮುಂಬೈಯಲ್ಲಿ ಅಂಥದೇ ಒಂದು ಘಟನೆ ಗುರುವಾರ ಬೆಳಗ್ಗೆ ನಡೆಯಿತು. ಇಲ್ಲಿನ ಬಿ ಎಸ್ ದೇವಾಶಿ ರಸ್ತೆಯಲ್ಲಿ ಗೋಪಿ ಕೃಷ್ಣನ್ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದ ಹದಿನಾಲ್ಕು ತಿಂಗಳ ಮಗುವೊಂದು ಯಾವುದೇ ಪ್ರಾಣಾಪಾಯವಿಲ್ಲದೆ ಬದುಕುಳಿದ ಘಟನೆ ನಡೆದಿದೆ.
ನಾಲ್ಕನೇ ಮಹಡಿಯಿಂದ ಬಿದ್ದರೆ ದೊಡ್ಡವರೇ ಬದುಕುವುದು ಕಷ್ಟ. ಅಂಥಾದ್ದರಲ್ಲಿ ಹದಿನಾಲ್ಕು ತಿಂಗಳ ಮಗು ಬದುಕಿದ್ದು ಹೇಗೆ? ಆ ಮಗುವನ್ನು ರಕ್ಷಿಸಿದ್ದು ಯಾರು? ಅಷ್ಟು ಎತ್ತರದಿಂದ ಬಿದ್ದರೂ ಮಗು ಯಾವ ಪ್ರಾಣಾಪಾಯವಿಲ್ಲದೆ ಬದುಕಿದ್ದು ಹೇಗೆ? ಇಲ್ಲಿದೆ ವಿವರ ಕೇಳಿ...

ನಾಲ್ಕನೇ ಮಹಡಿಯಿಂದ ಬಿದ್ದ ಮಗು
ನಾಲ್ಕನೇ ಮಹಡಿಯಲ್ಲಿದ್ದ ಮನೆಯ ಹಾಲ್ ನಲ್ಲಿ ಆಟವಾಡುತ್ತಿದ್ದ ಅಥರ್ವ ಎಂಬ ಮಗು ಕಿಟಕಿಯ ಸ್ಲೈಡಿಂಗ್ ಬಾಗಿಲು ತೆರೆದಿದ್ದಿದ್ದನ್ನು ಕಂಡು ಅಲ್ಲಿಗೆ ಆಟವಾಡಲು ತೆರಳಿದ್ದಾನೆ. ಈ ಸಂದರ್ಭದಲ್ಲಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಕಿಟಕಿಯ ಬಾಗಿಲು ತೆರೆದಿದೆ ಎಂಬುದು ತಿಳಿಯದ ಕುಟುಂಬದ ಇತರರು ಆ ಮಗುವಿನ ಬಗ್ಗೆ ಹೆಚ್ಚು ಗಮನ ನೀಡಿರಲಿಲ್ಲ. ಆದರೆ ಮಗ ಜೋರಾಗಿ ಕೋಗುತ್ತಿದ್ದಂತೆಯೇ ಗಾಬರಿಗೊಂಡ ತಂದೆ ಅಜಿತ್ ಬಾರ್ಕಡೆ, ತಾಯಿ ಜ್ಯೋತಿ ಮತ್ತು ಇತರರು ಓಡಿ ಬಂದು ನೋಡಿದರೆ ಮಗು ರಸ್ತೆಯಲ್ಲಿ ಬಿದ್ದಿದೆ!

ಪವಾಡದ ಮರ!
ಹತ್ತಿರ ಬಂದು ನೋಡಿದರೆ ಮಗುವಿಗೆ ಚಿಕ್ಕಪುಟ್ಟ ಗಾಯವಲ್ಲದೆ ಏನೂ ಆಗಿಲ್ಲ! ಮಗುವಿನ ಪಕ್ಕದಲ್ಲೇ ಮರದ ಟೊಂಗೆಯೊಂದು ಮುರಿದು ಬಿದ್ದಿತ್ತು. ಕಿಟಕಿಯಿಂದ ಆಯತಪ್ಪಿ ಕೆಳಗೆ ಬಿದ್ದ ಮಗು ಮರದ ಟೊಂಗೆಯ ಮೇಲೆ ಬಿದ್ದಿದೆ. ನಂತರ ಮರದ ಟೊಂಗೆ ಮುರಿದು ಮಗುವಿನ ಸಮೇತ ಕೆಳಗೆ ಬಿದ್ದಿದೆ. ಮಗು ಯಾವ ಪ್ರಾಣಾಪಾಯವಿಲ್ಲದೆ ಪಾರಾಗಿದ್ದು ಅಚ್ಚರಿ ಮೂಡಿಸಿದೆ.

ಅಚಾತುರ್ಯ ನಡೆದಿದ್ದು ಹೇಗೆ?
ಬಟ್ಟೆ ಒಣಗಿಸುವುದಕ್ಕೆಂದು ಕಿಟಕಿಯ ಬಳಿ ತೆರಳಿದ್ದ ಅಥರ್ವನ ಅಜ್ಜಿ ಕಿಟಕಿ ಮುಚ್ಚುವುದನ್ನು ಮರೆತಿದ್ದರು. ಕುಟಕಿಯ ಬಾಗಿಲನ್ನು ಸರಿಯಾಗಿ ಮುಚ್ಚಿಲ್ಲ ಎಂಬುದು ತಿಳಿಯದ ಮಗು ಕಿಟಕಿಯಿಂದ ಆಚೆ ಇಣುಕುವುದಕ್ಕೆ ಹೋಗಿ ಆಯತಪ್ಪಿ ಬಿದ್ದುಬಿಟ್ಟಿದೆ. ಆದ್ದರಿಂದಲೇ ಈ ಅಚಾತುರ್ಯ ನಡೆದಿದೆ ಎಂದು ಕುಟುಂಬ ತಿಳಿಸಿದೆ.

ಮಕ್ಕಳಿರುವ ಮನೆಯಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರೂ ಕಡಿಮೆಯೇ!
ಚಿಕ್ಕ ಮಕ್ಕಳಿರುವ ಮನೆಯಲ್ಲಿ ಎಷ್ಟೇ ಎಚ್ಚರಿಕೆಯಿಂದಿದ್ದರೂ ಕಡಿಮೆಯೇ. ಕಿಟಕಿ ಬಾಗಿಲು ತೆರೆದಿಡುವುದು, ಗ್ಯಾಸ್ ಸ್ಟೋವ್ ಗಳು ಅವರ ಕೈಗೆ ಸಿಕ್ಕುವಂತೆ ಇಡುವುದು, ಚಾಕು ಇನ್ನಿತರ ಅಪಾಯಕಾರಿ ವಸ್ತುಗಳು ಅವರಿಗೆ ಎಟಕುವಂತೆ ಎಲ್ಲೆಂದರಲ್ಲಿ ಬಿಸಾಡುವುದು... ಇತ್ಯಾದಿಗಳಿಂದ ಎಷ್ಟೋ ಅನಾಹುತಗಳು ಸಂಭವಿಸುತ್ತವೆ. ಆದ್ದರಿಂದ ಮನೆಯಲ್ಲಿ ಚಿಕ್ಕ ಮಕ್ಕಳಿರುವಾಗ ಮೈತುಂಬ ಕಣ್ಣಾಗಿರುವುದು ಒಳ್ಳೆಯದು.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ









Click it and Unblock the Notifications