ಆರ್ಯನ್ ಖಾನ್‌ಗೆ ಇಂದು ಸಿಗಲಿಲ್ಲ ಬಿಡುಗಡೆ ಭಾಗ್ಯ: ನಾಳೆಗೆ ವಿಚಾರಣೆ ಮುಂದೂಡಿಕೆ

ಮುಂಬೈ, ಅಕ್ಟೋಬರ್ 27: ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಪುತ್ರನಿಗೆ ಇಂದು ಕೂಡ ಬಿಡುಗಡೆ ಭಾಗ್ಯ ಸಿಗಲಿಲ್ಲ. ಮುಂಬೈ ಕ್ರೂಸ್ ಡ್ರಗ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಆರ್ಯನ್ ಖಾನ್‌ಗೆ ಇಂದು ಜೈಲೇಗತಿ. ಇಂದು ಆರ್ಯನ್​ ಖಾನ್​, ಅರ್ಬಾಜ್ ಮರ್ಚೆಂಟ್, ಮುನ್‌ಮುನ್ ಧಮೇಚಾ ಜಾಮೀನು ಅರ್ಜಿ ವಿಚಾರಣೆ ಬಾಂಬೆ ಹೈಕೋರ್ಟ್‌ನಲ್ಲಿ ನಡೆದಿದೆ. ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಲಾಗಿದ್ದು ನಾಳೆ (ಅಕ್ಟೋಬರ್​ 28) ಮಧ್ಯಾಹ್ನ 2:30ಕ್ಕೆ ವಿಚಾರಣೆ ನಡೆಯಲಿದೆ. ಇಂದು ಆರೋಪಿಗಳ ಪರವಾಗಿ ವಕೀಲರಾದ ಅಮಿತ್ ದೇಸಾಯಿ, ಮುಕುಲ್ ರೋಹಟಗಿ ಮತ್ತು ಅಲಿ ಕಾಶಿಫ್ ಖಾನ್ ದೇಶಮುಖ್ ವಾದ ಮಂಡಿಸಿದರು.

ಮಾದಕ ದ್ರವ್ಯ ವಿರೋಧಿ ಸಂಸ್ಥೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ನಾಳೆ ಉತ್ತರಿಸಲಿದ್ದು ವಾದವನ್ನು ಮುಕ್ತಾಯಗೊಳಿಸಲು ಒಂದು ಗಂಟೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಇಂದು ಆರೋಪಿಗಳ ಪರ ವಕೀಲರು ವಾದಕ್ಕೆ ಅವಕಾಶವಿತ್ತು. ನಾಳೆ ಇದನ್ನು ಮುಂದೂಡಲಾಗಿದ್ದು ಮಧ್ಯಾಹ್ನ ವಿಚಾರಣೆ ನಡೆಯಲಿದೆ. ಇಂದು ನಡೆದ ವಿಚಾರಣೆ ವಿವರ ಹಾಗೂ ಪ್ರಕರಣದ ಹಿನ್ನೆಲೆ ಬಗ್ಗೆ ಇನ್ನಷ್ಟು ವಿವರ ಮುಂದಿದೆ ಓದಿ...

ಆರ್ಯನ್ ಪರ ವಾದ

ಆರ್ಯನ್ ಪರ ವಾದ

ಆರ್ಯನ್ ಪರ ವಕೀಲ ಮುಕುಲ್‌ ರೋಹ್ಟಗಿ ವಾದ ಮಂಡನೆ ಮಾಡಿದ್ದಾರೆ. 'ಆರ್ಯನ್ ಖಾನ್‌ ಬಂಧನಕ್ಕೆ ಸೂಕ್ತ ಕಾರಣ ನೀಡಿಲ್ಲ. ಸೂಕ್ತ ಕಾರಣ ನೀಡದೇ ಬಂಧಿಸಲಾಗಿದೆ. ಬಂಧನಕ್ಕೂ ಮುನ್ನ ಸೂಕ್ತ ಕಾರಣ ತಿಳಿಸಬೇಕಿತ್ತು. ಯಾವ ಕಾರಣಕ್ಕೆ ಬಂಧನವೆಂದು ತಿಳಿದುಕೊಳ್ಳುವ ಹಕ್ಕಿದೆ. ಬಂಧನಕ್ಕೆ ಸೂಕ್ತ ಕಾರಣ ನೀಡದೆ ಎನ್‌ಸಿಬಿ ದಾರಿ ತಪ್ಪಿಸಿದೆ' ಎಂದು ಮುಕುಲ್‌ ರೋಹ್ಟಗಿ ವಾದ ಮಂಡನೆ ಮಾಡಿದರು.

ಅರ್ಬಾಜ್ ಪರ ವಕೀಲರ ವಾದವೇನು?

ಅರ್ಬಾಜ್ ಪರ ವಕೀಲರ ವಾದವೇನು?

ಇನ್ನು ಕೋರ್ಟ್‌ನಲ್ಲಿ ಅರ್ಬಾಜ್ ಪರ ವಕೀಲ ಅಮಿತ್ ದೇಸಾಯಿ ವಾದಮಂಡನೆ ಮಾಡಿದ್ದಾರೆ. 'ಅಕ್ಟೋಬರ್ 3ರಂದು ಮೂವರನ್ನು ಬಂಧಿಸಲಾಗಿದೆ. ಸಣ್ಣ ಪ್ರಮಾಣದ ಡ್ರಗ್ಸ್ ಪತ್ತೆ, ಸೇವನೆ ಬಗ್ಗೆ ಆರೋಪ ಇದೆ. ಇದು 1 ವರ್ಷಕ್ಕಿಂತ ಕಡಿಮೆ ಶಿಕ್ಷೆಯಾಗುವ ಪ್ರಕರಣ. ಆದ್ರೆ 41ಎ ಅಡಿ ಪ್ರಕರಣವನ್ನು ದಾಖಲಿಸಲಾಗಿದೆ. ಅಕ್ಟೋಬರ್ 3ರಂದು ಮೂವರ ಬಂಧನ ಕಾನೂನುಬಾಹಿರ' ಎಂದು ವಕೀಲರು ವಾದ ಮಂಡಿಸಿದರು.

ಮುನ್ಮುಮ್ ಧಮೇಚಾಗೂ ಪ್ರಕರಣಕ್ಕೂ ಸಂಬಂಧವಿಲ್ಲ

ಮುನ್ಮುಮ್ ಧಮೇಚಾಗೂ ಪ್ರಕರಣಕ್ಕೂ ಸಂಬಂಧವಿಲ್ಲ

ಜೊತೆಗೆ ಸೌಮ್ಯಾ ಸಿಂಗ್ ಮತ್ತು ಮುನ್ಮುಮ್ ಧಮೇಚಾ ಅವರ ಲಗೇಜ್ ಹುಡುಕಾಟದ ಸಮಯದಲ್ಲಿ ಏನೂ ಪತ್ತೆಯಾಗಲಿಲ್ಲ. ಆದರೆ ಸೌಮ್ಯ ಸಿಂಗ್ ಅವರ ಸಾಮಾನುಗಳಲ್ಲಿ ಹುಡುಕಾಟದ ಸಮಯದಲ್ಲಿ ರೋಲಿಂಗ್ ಪೇಪರ್ ಮತ್ತು ಫಿಲ್ಟರ್ ಪೆಗ್‌ಗಳು ಕಂಡುಬಂದಿವೆ. ಇದು ಮುನ್ಮುಮ್ ಧಮೇಚಾ ಅವರೊಂದಿಗೆ ಹೇಗೆ ಸಂಪರ್ಕ ಹೊಂದಿದೆ? ಮುನ್ಮುಮ್ ಧಮೇಚಾ ನಿಂದ ಏನನ್ನೂ ವಶಪಡಿಸಿಕೊಂಡಿಲ್ಲ. ಹಡಗಿನಲ್ಲಿ ಆ ಡ್ರಗ್ಸ್ ತಂದವರು ಯಾರು ಎಂಬುದನ್ನು ಸಾಬೀತುಪಡಿಸಲು ಇಲ್ಲಿಯವರೆಗೆ ವಿಫಲರಾಗಿದ್ದಾರೆ. ಹಾಗೇ ಮುನ್ಮುಮ್ ಧಮೇಚಾ ಸಂಸದ ಮತ್ತು ಡ್ರಗ್ಸ್ ಹೊಂದಿರುವ ವ್ಯಕ್ತಿಗಳೊಂದಿಗೆ ಯಾವುದೇ ಸಂಪರ್ಕಗಳನ್ನು ಹೊಂದಿಲ್ಲ. ಚರಸ್ ಅನ್ನು ಕಂಡುಕೊಂಡ ಕೋಣೆಯಲ್ಲಿ ಮುನ್ಮುಮ್ ಧಮೇಚಾ ಇದ್ದ ಕಾರಣ ಬಂಧಿಸಿದ್ದಾರೆ ಎಂದು ದೇಶಮುಖ್ ವಾದಿಸಿದ್ದಾರೆ.

ಏನಿದು ಪ್ರಕರಣ?

ಏನಿದು ಪ್ರಕರಣ?

ಅಕ್ಟೋಬರ್ 2 ರಂದು ಎನ್‌ಸಿಬಿಯಿಂದ ಕ್ರೂಸ್ ಶಿಪ್ ಪಾರ್ಟಿಯ ಮೇಲೆ ಡ್ರಗ್ ದಾಳಿಯ ನಂತರ ಆರ್ಯನ್ ಖಾನ್ ಅವರನ್ನು ಬಂಧಿಸಲಾಯಿತು. ಆರ್ಯನ್ ಖಾನ್ ಅಕ್ಟೋಬರ್ 8 ರಿಂದ ಜೈಲಿನಲ್ಲಿದ್ದಾರೆ. ಈ ಹಿಂದೆ ಆರ್ಯನ್ ಖಾನ್ ಅವರ ಜಾಮೀನು ಅರ್ಜಿಯನ್ನು ಎರಡು ಬಾರಿ ನಿರಾಕರಿಸಲಾಗಿತ್ತು. ಕಳೆದ ವಾರ ಅವರಿಗೆ ಜಾಮೀನು ನಿರಾಕರಿಸಿದ ವಿಶೇಷ ಮಾದಕ ದ್ರವ್ಯ ವಿರೋಧಿ ನ್ಯಾಯಾಲಯವು ತನ್ನ ಸ್ನೇಹಿತ ಅರ್ಬಾಜ್ ಮರ್ಚೆಂಟ್‌ನ ಶೂನಲ್ಲಿ ಅಡಗಿರುವ ಚರಸ್ ಬಗ್ಗೆ ಆರ್ಯನ್ ಗೆ ತಿಳಿದಿತ್ತು. ಇದು ಆರ್ಯನ್ "ಪ್ರಜ್ಞಾಪೂರ್ವಕ ಸ್ವಾಧೀನ" ವಾಗಿದೆ ಎಂದು ಹೇಳಿದೆ. ಪ್ರಕರಣದಲ್ಲಿ ಆರ್ಯನ್ ಮತ್ತು ಇತರ 18 ಮಂದಿಯೊಂದಿಗೆ ಅರ್ಬಾಜ್ ಮರ್ಚೆಂಟ್ ಅನ್ನು ಸಹ ಬಂಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+